‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬುದು ಸಂವಿಧಾನ ಆಶಯವಾದರೆ, ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂಬುದು ಜೆಡಿಎಸ್ ನೀತಿ. ಜೆಡಿಎಸ್ನಲ್ಲಿ ಹಾಸನ ಕ್ಷೇತ್ರದಲ್ಲಿ ಈಗ ಜಗಳ ನಡೆದಿರುವುದು ದೇಶಕ್ಕಾಗಿ ಅಲ್ಲ, ಅಲ್ಲಿನ ಜನರಿಗಾಗಿಯೂ ಅಲ್ಲ, ಕುಟುಂಬಕ್ಕಾಗಿ. ಕುಮಾರಣ್ಣ (ಎಚ್ಡಿಕೆ) ಅವರ ಪಾರ್ಟಿಗೂ ದೇಶಕ್ಕೂ ಸಂಬಂಧವೇ ಇಲ್ಲ’ ಎಂದು ಸಿ.ಟಿ.ರವಿ ಅಪಹಾಸ್ಯ ಮಾಡಿದರು.
‘ಕಾಂಗ್ರೆಸ್ನವರು ‘ಎಲೆಕ್ಷನ್ ಟೈಂ’ ಹಿಂದೂಗಳು. ಕೇಸರಿ, ಕುಂಕಮ ಕಂಡರೆ ಆಗದವರು. ಅವರು ಚುನಾವಣೆ ಸಮಯದಲ್ಲಿ ನಾಟಕವಾಡುವ ಹಿಂದೂಗಳು’ ಎಂದು ಮೂದಲಿಸಿದರು.