ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜೀವರಾಜ್ ಅವರು, ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾದ ದೂರಿನ ಬಗ್ಗೆ ಮಾತನಾಡಿದ್ದಾರೆಯೇ ಹೊರತು ವೈಯಕ್ತಿಕವಾಗಿ ಮಾತನಾಡಿಲ್ಲ. 266 ಎಕರೆ ತೋಟದ ಖರೀದಿಗೆ ವರ್ಗಾವಣೆಯಾದ ₹ 123 ಕೋಟಿ ಬಗ್ಗೆ ಚುನಾವಣಾ ಆಯೋಗ, ಲೋಕಾಯುಕ್ತಕ್ಕೆ ಅಫಿಡವಿಟ್ ಸಲ್ಲಿಸುವಾಗ ಏಕೆ ತಿಳಿಸಿಲ್ಲ ಎಂದಷ್ಟೇ ಅವರು ಪ್ರಶ್ನಿಸಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದರು.