ಇದು ಪರಿಸರ ಸೂಕ್ಷ್ಮ ಜೀವ ವೈವಿಧ್ಯದ ಪ್ರದೇಶ. ಶೂಲಾ ಹುಲ್ಲುಗಾವಲು ಇಲ್ಲಿನ ವೈಶಿಷ್ಟ್ಯ. ವೇದಾವತಿ, ಯಗಚಿ, ಮೊದಲಾದ ನದಿಗಳ ಉಗಮ ಪ್ರದೇಶ. ವನ್ಯಜೀವಿಗಳ ಆವಾಸ ತಾಣ. ಮೀಸಲು ಪ್ರದೇಶವಾಗಿ ಘೋಷಿಸುವಂತೆ ಸ್ವಯಂಸೇವಾ ಸಂಸ್ಥೆಗಳು, ಸ್ಥಳೀಯರು ಕೋರಿದ್ದಾರೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತಾವಕ್ಕೆ ಜನಪ್ರತಿನಿಧಿಗಳು ಒಪ್ಪಿಗೆ ಪತ್ರ ನೀಡಿದ್ದಾರೆ.