‘ಜೀವಕ್ಕೆ ತೊಂದರೆಯಾಗುವಂತಹ ಯಾವ ಆರೋಗ್ಯ ಸಮಸ್ಯೆ ಇಲ್ಲದ ಕಾರಣ ಯಾರೂ ಆತಂಕ ಅಥವಾ ಉದ್ವೇಗಕ್ಕೆ ಒಳಗಾಗುವ ಅಗತ್ಯವಿಲ್ಲ. ಪೀಠದ ಪೂಜಾ ಕರ್ತೃತ್ವ ಶಕ್ತಿ ಬಹು ದೊಡ್ಡದು. ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿಯ ತಪೋಶಕ್ತಿ, ರಂಭಾಪುರಿ ವೀರಗಂಗಾಧರ ಸ್ವಾಮೀಜಿಯ ಶಿವಪೂಜಾ ಶಕ್ತಿ, ವೀರ ರುದ್ರಮುನಿದೇವ ಸ್ವಾಮೀಜಿಯ ವಾತ್ಸಲ್ಯಪೂರಿತವಾದ ಅಂತಃಕರಣದ ಆಶೀರ್ವಾದ ಇರುವ ತನಕ ಯಾವ ತೊಂದರೆಯಾಗುವುದಿಲ್ಲ ಎಂಬ ಆತ್ಮವಿಶ್ವಾಸವಿದೆ. ಶೀಘ್ರದಲ್ಲಿಯೇ ಗುಣಮುಖರಾಗಿ ಎಂದಿನಂತೆ ಭಕ್ತರ ಮಧ್ಯದಲ್ಲಿರುತ್ತೇವೆ. ಸಮಾನ ಪೀಠಾಚಾರ್ಯರ ಹಾರೈಕೆ, ನಾಡಿನ ಶ್ರೀಗಳ ಪ್ರಾರ್ಥನೆ, ಭಕ್ತ ಗಣ ತೋರುತ್ತಿರುವ ಪ್ರೀತಿ ವಿಶ್ವಾಸ ಮರೆಯುವಂತಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.