<p>ತರೀಕೆರೆ: ಪಟ್ಟಣದ ರೈತ ಭವನದ ಬಾಡಿಗೆ ಕಟ್ಟಡದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ 2016ರ ಜೂನ್ನಿಂದ ಆರಂಭಗೊಂಡಿದ್ದು, ನೌಕರರ ಸಮಸ್ಯೆ, ಸ್ವಂತ ಕಟ್ಟಡ, ದಲ್ಲಾಳಿಗಳ ಹಾವಳಿ, ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಆದರೆ, ದಲ್ಲಾಳಿ ಅಬ್ಬರ ಹೆಚ್ಚಿದೆ ಎಂಬುದು ಜನರ ದೂರು.</p>.<p>ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯು ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕುಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಘನ ವಾಹನ ಹೊರತು ಪಡಿಸಿ 16,298 ವಾಹನಗಳು ನೋಂದಣಿಯಾಗಿವೆ. ವಾರ್ಷಿಕ ₹23.44 ಲಕ್ಷ ರಾಜಸ್ವ ಹೊಂದಿದೆ. ಆದರೆ, ಇನ್ನೂ ಸ್ವಂತ ಕಟ್ಟಡ ಇಲ್ಲ. ಇರುವ ಕಟ್ಟಡ ಶಿಥಿಲವಾಗಿದೆ. ಇಲ್ಲಿ ಸಾರಿಗೆಗೆ ಸಂಬಂಧಿಸಿದ 33 ಸೇವಾ ಸೌಲಭ್ಯಗಳಿವೆ.</p>.<p>ನೌಕರರ ಕೊರತೆ: ಒಟ್ಟು 22 ಹುದ್ದೆಗಳಿದ್ದು, ಪ್ರಭಾರ ಸಹಾಯಕ ಪ್ರಾದೇಶಿಕ ಅಧಿಕಾರಿ, ಇಬ್ಬರು ಕಚೇರಿ ಅಧೀಕ್ಷಕರು, ಇಬ್ಬರು ಮೋಟರ್ ವಾಹನ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಒಬ್ಬರು ದ್ವಿತೀಯ ದರ್ಜೆ ಸಹಾಯಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಡಿ ದರ್ಜೆ ನೌಕರರು, ಮೋಟರ್ ವಾಹನ ನಿರೀಕ್ಷಕರು, ಚಾಲಕರು ಸೇರಿದಂತೆ 15 ಹುದ್ದೆಗಳು ಖಾಲಿ ಇವೆ.</p>.<p>ನೌಕರರ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇಲ್ಲಿನ ಸಿಬ್ಬಂದಿ ಅಳಲು. ಕುಡಿಯುವ ನೀರು, ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಸೇರಿದಂತೆ ಮೂಲ ಭೂತ ಸೌಲಭ್ಯಗಳು ಇಲ್ಲ.</p>.<p>‘ಇಲ್ಲಿ ದಲ್ಲಾಳಿಗಳ ಅಬ್ಬರವೇ ಹೆಚ್ಚಾಗಿದೆ. ಸಾಮಾನ್ಯ ಜನರ ಗೋಳು ಹೇಳತೀರದಾಗಿದೆ’ ಎಂದು ಸ್ಥಳೀಯ ಟಿ.ಜಿ.ರಾಜು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತರೀಕೆರೆ: ಪಟ್ಟಣದ ರೈತ ಭವನದ ಬಾಡಿಗೆ ಕಟ್ಟಡದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ 2016ರ ಜೂನ್ನಿಂದ ಆರಂಭಗೊಂಡಿದ್ದು, ನೌಕರರ ಸಮಸ್ಯೆ, ಸ್ವಂತ ಕಟ್ಟಡ, ದಲ್ಲಾಳಿಗಳ ಹಾವಳಿ, ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಆದರೆ, ದಲ್ಲಾಳಿ ಅಬ್ಬರ ಹೆಚ್ಚಿದೆ ಎಂಬುದು ಜನರ ದೂರು.</p>.<p>ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯು ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕುಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಘನ ವಾಹನ ಹೊರತು ಪಡಿಸಿ 16,298 ವಾಹನಗಳು ನೋಂದಣಿಯಾಗಿವೆ. ವಾರ್ಷಿಕ ₹23.44 ಲಕ್ಷ ರಾಜಸ್ವ ಹೊಂದಿದೆ. ಆದರೆ, ಇನ್ನೂ ಸ್ವಂತ ಕಟ್ಟಡ ಇಲ್ಲ. ಇರುವ ಕಟ್ಟಡ ಶಿಥಿಲವಾಗಿದೆ. ಇಲ್ಲಿ ಸಾರಿಗೆಗೆ ಸಂಬಂಧಿಸಿದ 33 ಸೇವಾ ಸೌಲಭ್ಯಗಳಿವೆ.</p>.<p>ನೌಕರರ ಕೊರತೆ: ಒಟ್ಟು 22 ಹುದ್ದೆಗಳಿದ್ದು, ಪ್ರಭಾರ ಸಹಾಯಕ ಪ್ರಾದೇಶಿಕ ಅಧಿಕಾರಿ, ಇಬ್ಬರು ಕಚೇರಿ ಅಧೀಕ್ಷಕರು, ಇಬ್ಬರು ಮೋಟರ್ ವಾಹನ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಒಬ್ಬರು ದ್ವಿತೀಯ ದರ್ಜೆ ಸಹಾಯಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಡಿ ದರ್ಜೆ ನೌಕರರು, ಮೋಟರ್ ವಾಹನ ನಿರೀಕ್ಷಕರು, ಚಾಲಕರು ಸೇರಿದಂತೆ 15 ಹುದ್ದೆಗಳು ಖಾಲಿ ಇವೆ.</p>.<p>ನೌಕರರ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇಲ್ಲಿನ ಸಿಬ್ಬಂದಿ ಅಳಲು. ಕುಡಿಯುವ ನೀರು, ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಸೇರಿದಂತೆ ಮೂಲ ಭೂತ ಸೌಲಭ್ಯಗಳು ಇಲ್ಲ.</p>.<p>‘ಇಲ್ಲಿ ದಲ್ಲಾಳಿಗಳ ಅಬ್ಬರವೇ ಹೆಚ್ಚಾಗಿದೆ. ಸಾಮಾನ್ಯ ಜನರ ಗೋಳು ಹೇಳತೀರದಾಗಿದೆ’ ಎಂದು ಸ್ಥಳೀಯ ಟಿ.ಜಿ.ರಾಜು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>