<p><strong>ಮೂಡಿಗೆರೆ:</strong> ‘ಸಮಾಜದಲ್ಲಿ ಸೌಹಾರ್ದಯುತ ಬದುಕನ್ನು ರೂಪಿಸಿಕೊಂಡರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಚಿಕ್ಕಮಗಳೂರು ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಟಿ. ಅಂತೋಣಿ ಸ್ವಾಮಿ ಹೇಳಿದರು.</p>.<p>ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಮಾತೆ ಮರಿಯಮ್ಮನವರ ಸ್ವರ್ಗಾರೋಹಣದ ಹಬ್ಬದ ವಿಶೇಷ ಪೂಜೆ ನೆರವೇರಿಸಿ, ಅವರು ಮಾತನಾಡಿದರು.</p>.<p>‘ದೇವರ ಮಾತೆಯು ನಮ್ಮೆಲ್ಲರಿಗೂ ತಾಯಿಯಾಗಿದ್ದು, ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆ, ಸಹೋದರರಂತೆ ನಡೆದು ಸದೃಢ ದೇಶವನ್ನು ಕಟ್ಟಬೇಕಾದ ಹೊಣೆ ನಮ್ಮದಾಗಿದೆ. ಸಂವಿಧಾನದ ಮೂಲಭೂತ ಹಕ್ಕುಗಳಷ್ಟೇ ಕರ್ತವ್ಯಗಳು ಮುಖ್ಯವಾಗಿದ್ದು, ಹಕ್ಕುಗಳನ್ನು ಪಡೆದ ನಾವು ಕರ್ತವ್ಯದಿಂದ ವಿಮುಖರಾಗಬಾರದು’ ಎಂದರು.</p>.<p>ವಿಶೇಷ ಪೂಜೆಯಲ್ಲಿ ಧರ್ಮಗುರುಗಳಾದ ಫಾ. ಚಾರ್ಲ್ಸ್ ಪಿರೇರಾ, ಫಾ. ರಾಯಪ್ಪ, ಫಾ. ಸಂಜಯ್ ಜೋವಾನ್ನಿಸ್, ಫಾ.ಅಂತೋಣಿ ರಾಜ್, ಕೊಟ್ಟಿಗೆಹಾರ ಚರ್ಚ್ನ ಧರ್ಮಗುರು ಫಾ. ವಿಲಿಯಂ ಬರ್ನಾರ್ಡ್ ಭಾಗವಹಿಸಿದ್ದರು.</p>.<p>ರಾಜ್ಯ ಕ್ರೈಸ್ತ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ, ಪೆಲಿಕ್ಸ್ ಕ್ರಾಸ್ತ ಹಾಗೂ ವಿವಿಧ ಚರ್ಚ್ಗಳ ಧರ್ಮಗುರುಗಳನ್ನು ಸನ್ಮಾನಿಸಲಾಯಿತು. ತೆರೇಸಿಯಾ ಬೇಬಿ, ವಿನ್ಸೆಂಟ್ ಡಿಸೋಜ, ಐಸಿವೈಎಂ ಯುವ ಘಟಕ ಅಧ್ಯಕ್ಷ ಪ್ರೀತಂ ಲೋಬೊ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ:</strong> ‘ಸಮಾಜದಲ್ಲಿ ಸೌಹಾರ್ದಯುತ ಬದುಕನ್ನು ರೂಪಿಸಿಕೊಂಡರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಚಿಕ್ಕಮಗಳೂರು ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಟಿ. ಅಂತೋಣಿ ಸ್ವಾಮಿ ಹೇಳಿದರು.</p>.<p>ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಮಾತೆ ಮರಿಯಮ್ಮನವರ ಸ್ವರ್ಗಾರೋಹಣದ ಹಬ್ಬದ ವಿಶೇಷ ಪೂಜೆ ನೆರವೇರಿಸಿ, ಅವರು ಮಾತನಾಡಿದರು.</p>.<p>‘ದೇವರ ಮಾತೆಯು ನಮ್ಮೆಲ್ಲರಿಗೂ ತಾಯಿಯಾಗಿದ್ದು, ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆ, ಸಹೋದರರಂತೆ ನಡೆದು ಸದೃಢ ದೇಶವನ್ನು ಕಟ್ಟಬೇಕಾದ ಹೊಣೆ ನಮ್ಮದಾಗಿದೆ. ಸಂವಿಧಾನದ ಮೂಲಭೂತ ಹಕ್ಕುಗಳಷ್ಟೇ ಕರ್ತವ್ಯಗಳು ಮುಖ್ಯವಾಗಿದ್ದು, ಹಕ್ಕುಗಳನ್ನು ಪಡೆದ ನಾವು ಕರ್ತವ್ಯದಿಂದ ವಿಮುಖರಾಗಬಾರದು’ ಎಂದರು.</p>.<p>ವಿಶೇಷ ಪೂಜೆಯಲ್ಲಿ ಧರ್ಮಗುರುಗಳಾದ ಫಾ. ಚಾರ್ಲ್ಸ್ ಪಿರೇರಾ, ಫಾ. ರಾಯಪ್ಪ, ಫಾ. ಸಂಜಯ್ ಜೋವಾನ್ನಿಸ್, ಫಾ.ಅಂತೋಣಿ ರಾಜ್, ಕೊಟ್ಟಿಗೆಹಾರ ಚರ್ಚ್ನ ಧರ್ಮಗುರು ಫಾ. ವಿಲಿಯಂ ಬರ್ನಾರ್ಡ್ ಭಾಗವಹಿಸಿದ್ದರು.</p>.<p>ರಾಜ್ಯ ಕ್ರೈಸ್ತ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ, ಪೆಲಿಕ್ಸ್ ಕ್ರಾಸ್ತ ಹಾಗೂ ವಿವಿಧ ಚರ್ಚ್ಗಳ ಧರ್ಮಗುರುಗಳನ್ನು ಸನ್ಮಾನಿಸಲಾಯಿತು. ತೆರೇಸಿಯಾ ಬೇಬಿ, ವಿನ್ಸೆಂಟ್ ಡಿಸೋಜ, ಐಸಿವೈಎಂ ಯುವ ಘಟಕ ಅಧ್ಯಕ್ಷ ಪ್ರೀತಂ ಲೋಬೊ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>