ಉತ್ಥಾನದ್ವಾದಶಿ ಅಂಗವಾಗಿ ಶನಿವಾರ ಗ್ರಾಮದೇವತೆ ರಂಗನಾಥಸ್ವಾಮಿಗೆ ಅಭಿಷೇಕ, ಪುಷ್ಪಾಲಂಕಾರ ನೆರವೇರಿಸಿ, ಕಲ್ಯಾಣೋತ್ಸವ ನಡೆಸಲು ಉತ್ಸವ ಮೂರ್ತಿಗಳನ್ನು ರಾತ್ರಿ ವೃಂದಾವನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ತುಳಸಿ-ರಂಗನಾಥಸ್ವಾಮಿ ಕಲ್ಯಾಣ ಸೇವೆ, ಮಹಾಮಂಗಳಾರತಿ, ಭಾನುವಾರ ಬೆಳಿಗ್ಗೆ ಹಣ್ಣು, ತುಪ್ಪ ಸೇವೆ, ಗಂಗಾಪೂಜೆ ಸಲ್ಲಿಸಿ ಗುಡಿ ತುಂಬಿಸಲಾಯಿತು. ಸಂಜೆ ಸ್ವಾಮಿಯ ಊರ ಮೆರವಣಿಗೆ, ಪ್ರಸಾದ ವಿನಿಯೋಗ ನಡೆಯಿತು.