<p><strong>ಕಡೂರು:</strong> ಯುಗಾದಿ ಹಬ್ಬದ ಎದುರಿನಲ್ಲಿ ಹೂವಿನ ದರ ಏರಿಕೆಯಾಗಿದೆ. ಬಿರುಬಿಸಿಲಿನಿಂದಾಗಿ ಮಾರಾಟಗಾರರಿಗೆ ಬಹಳಷ್ಟು ನಷ್ಟವಾಗುತ್ತಿದೆ. ಹೂವಿನ ಬೆಲೆ 15 ದಿನದಲ್ಲಿ ದುಪ್ಪಟ್ಟಾಗಿದೆ.</p>.<p>ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹೂವಿನ ಬೇಡಿಕೆ ಹೆಚ್ಚತೊಡಗಿದೆ. ದುಂಡುಮಲ್ಲಿಗೆ ಒಂದು ಕೆ.ಜಿ.ಗೆ ₹1,200, ಕನಕಾಂಬರ ₹1,500, ಕಾಕಡಾ ಮಲ್ಲಿಗೆ ₹1,000ದಿಂದ 1,100, ಸೇವಂತಿಗೆ ₹200 ಬೆಲೆಯಿದೆ. ಗುಲಾಬಿ (ಸಣ್ಣದು) ಒಂದು ಕೆ.ಜಿ.ಗೆ ₹350, ಚೆಂಡು ಹೂವು ಕೆ.ಜಿಗೆ ₹200 ಇದೆ. ಹೂವು ಮತ್ತು ಗಾತ್ರವನ್ನಾಧರಿಸಿ ಹಾರಕ್ಕೆ ₹60 ರಿಂದ ₹300 ತನಕ ದರ ಸಿಗುತ್ತಿದೆ.</p>.<p>ಕನಕಾಂಬರ, ದುಂಡುಮಲ್ಲಿಗೆ ಒಂದು ಮಾರು ಹೂವಿಗೆ ₹80-100, ಕಾಕಡಾ ಮಲ್ಲಿಗೆ ಒಂದು ಮಾರಿಗೆ ₹60-80, ಸೇವಂತಿಗೆ ಒಂದು ಮಾರು ಹೂವಿಗೆ ₹ 60-70, ಕಲರ್ ಸೇವಂತಿಗೆ ₹50, ಗುಲಾಬಿ 1ಕ್ಕೆ ₹10, ಕಣಗಲೆ ಮತ್ತು ತುಳಸಿ ಒಂದು ಮಾರಿಗೆ ₹50-60 ಬೆಲೆಯಲ್ಲಿ ಮಾರಾಟವಾಗುತ್ತಿದೆ.</p>.<p>ಕಡೂರು ಭಾಗದಲ್ಲಿ ಹೂ ಬೆಳೆಯುವುದು ಬಹು ಕಡಿಮೆ. ಕೆಲವೆಡೆ ಸೇವಂತಿಗೆ, ಕನಕಾಂಬರ ಮತ್ತು ಕಾಕಡ ಹೂವನ್ನು ಅಲ್ಪ ಪ್ರಮಾಣದಲ್ಲಿ ಅಂದರೆ ದಿನಕ್ಕೆ ಎರಡು ಅಥವಾ ಮೂರು ಕೆ.ಜಿ ಸಿಗುವಷ್ಟು ಬೆಳೆಯುತ್ತಾರೆ. ಹಾಗೆ ಬೆಳೆದವರಿಗೆ ಒಳ್ಳೆಯ ಧಾರಣೆ ದೊರೆಯುತ್ತಿದೆ.</p>.<p>ಆದರೆ, ಹೂವು ಮಾರಾಟಗಾರರಿಗೆ ಬಿರು ಬಿಸಿಲು ಸಂಕಷ್ಟ ತಂದಿದೆ. ಎಷ್ಟೇ ನೀರು ಹಾಕಿದರೂ, ತಂಪಾಗಿಟ್ಟರೂ ವಾತಾವರಣದಲ್ಲಿನ ಬಿಸಿಯಿಂದಾಗಿ ಸಂಜೆ ವೇಳೆಗೆ ಹೂವು ಕಂದಿ ಹೋಗುತ್ತಿದೆ. </p>.<div><div class="bigfact-title">‘ಹೂವು ಒಣಗಿ ವ್ಯರ್ಥ’</div><div class="bigfact-description">‘ಬೆಂಗಳೂರು ಚಿಕ್ಕಬಳ್ಳಾಪುರ ಮುಂತಾದೆಡೆಯಿಂದ ಹೂವು ತರಿಸುತ್ತೇವೆ. ಆದರೆ ಬಿಸಿಲಿಗೆ ಹೂವು ತಡೆಯುತ್ತಿಲ್ಲ. ದೊಡ್ಡ ಪ್ರಮಾಣದ ಹೂವು ಒಣಗಿ ವ್ಯರ್ಥವಾಗುತ್ತಿದೆ. ಹೂವಿಗೆ ಬೇಡಿಕೆಯಿದ್ದರೂ ಹೆಚ್ಚು ತರಿಸಲು ಧೈರ್ಯವಾಗುತ್ತಿಲ್ಲ’ ಎನ್ನುತ್ತಾರೆ ಅಂಬೇಡ್ಕರ್ ವೃತ್ತದ ಹೂವಿನ ವ್ಯಾಪಾರಿ ಗೋವಿಂದಪ್ಪ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ಯುಗಾದಿ ಹಬ್ಬದ ಎದುರಿನಲ್ಲಿ ಹೂವಿನ ದರ ಏರಿಕೆಯಾಗಿದೆ. ಬಿರುಬಿಸಿಲಿನಿಂದಾಗಿ ಮಾರಾಟಗಾರರಿಗೆ ಬಹಳಷ್ಟು ನಷ್ಟವಾಗುತ್ತಿದೆ. ಹೂವಿನ ಬೆಲೆ 15 ದಿನದಲ್ಲಿ ದುಪ್ಪಟ್ಟಾಗಿದೆ.</p>.<p>ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹೂವಿನ ಬೇಡಿಕೆ ಹೆಚ್ಚತೊಡಗಿದೆ. ದುಂಡುಮಲ್ಲಿಗೆ ಒಂದು ಕೆ.ಜಿ.ಗೆ ₹1,200, ಕನಕಾಂಬರ ₹1,500, ಕಾಕಡಾ ಮಲ್ಲಿಗೆ ₹1,000ದಿಂದ 1,100, ಸೇವಂತಿಗೆ ₹200 ಬೆಲೆಯಿದೆ. ಗುಲಾಬಿ (ಸಣ್ಣದು) ಒಂದು ಕೆ.ಜಿ.ಗೆ ₹350, ಚೆಂಡು ಹೂವು ಕೆ.ಜಿಗೆ ₹200 ಇದೆ. ಹೂವು ಮತ್ತು ಗಾತ್ರವನ್ನಾಧರಿಸಿ ಹಾರಕ್ಕೆ ₹60 ರಿಂದ ₹300 ತನಕ ದರ ಸಿಗುತ್ತಿದೆ.</p>.<p>ಕನಕಾಂಬರ, ದುಂಡುಮಲ್ಲಿಗೆ ಒಂದು ಮಾರು ಹೂವಿಗೆ ₹80-100, ಕಾಕಡಾ ಮಲ್ಲಿಗೆ ಒಂದು ಮಾರಿಗೆ ₹60-80, ಸೇವಂತಿಗೆ ಒಂದು ಮಾರು ಹೂವಿಗೆ ₹ 60-70, ಕಲರ್ ಸೇವಂತಿಗೆ ₹50, ಗುಲಾಬಿ 1ಕ್ಕೆ ₹10, ಕಣಗಲೆ ಮತ್ತು ತುಳಸಿ ಒಂದು ಮಾರಿಗೆ ₹50-60 ಬೆಲೆಯಲ್ಲಿ ಮಾರಾಟವಾಗುತ್ತಿದೆ.</p>.<p>ಕಡೂರು ಭಾಗದಲ್ಲಿ ಹೂ ಬೆಳೆಯುವುದು ಬಹು ಕಡಿಮೆ. ಕೆಲವೆಡೆ ಸೇವಂತಿಗೆ, ಕನಕಾಂಬರ ಮತ್ತು ಕಾಕಡ ಹೂವನ್ನು ಅಲ್ಪ ಪ್ರಮಾಣದಲ್ಲಿ ಅಂದರೆ ದಿನಕ್ಕೆ ಎರಡು ಅಥವಾ ಮೂರು ಕೆ.ಜಿ ಸಿಗುವಷ್ಟು ಬೆಳೆಯುತ್ತಾರೆ. ಹಾಗೆ ಬೆಳೆದವರಿಗೆ ಒಳ್ಳೆಯ ಧಾರಣೆ ದೊರೆಯುತ್ತಿದೆ.</p>.<p>ಆದರೆ, ಹೂವು ಮಾರಾಟಗಾರರಿಗೆ ಬಿರು ಬಿಸಿಲು ಸಂಕಷ್ಟ ತಂದಿದೆ. ಎಷ್ಟೇ ನೀರು ಹಾಕಿದರೂ, ತಂಪಾಗಿಟ್ಟರೂ ವಾತಾವರಣದಲ್ಲಿನ ಬಿಸಿಯಿಂದಾಗಿ ಸಂಜೆ ವೇಳೆಗೆ ಹೂವು ಕಂದಿ ಹೋಗುತ್ತಿದೆ. </p>.<div><div class="bigfact-title">‘ಹೂವು ಒಣಗಿ ವ್ಯರ್ಥ’</div><div class="bigfact-description">‘ಬೆಂಗಳೂರು ಚಿಕ್ಕಬಳ್ಳಾಪುರ ಮುಂತಾದೆಡೆಯಿಂದ ಹೂವು ತರಿಸುತ್ತೇವೆ. ಆದರೆ ಬಿಸಿಲಿಗೆ ಹೂವು ತಡೆಯುತ್ತಿಲ್ಲ. ದೊಡ್ಡ ಪ್ರಮಾಣದ ಹೂವು ಒಣಗಿ ವ್ಯರ್ಥವಾಗುತ್ತಿದೆ. ಹೂವಿಗೆ ಬೇಡಿಕೆಯಿದ್ದರೂ ಹೆಚ್ಚು ತರಿಸಲು ಧೈರ್ಯವಾಗುತ್ತಿಲ್ಲ’ ಎನ್ನುತ್ತಾರೆ ಅಂಬೇಡ್ಕರ್ ವೃತ್ತದ ಹೂವಿನ ವ್ಯಾಪಾರಿ ಗೋವಿಂದಪ್ಪ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>