<p><strong>ಚಿಕ್ಕಜಾಜೂರು:</strong> ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಕೈತುಂಬ ಆದಾಯ ಗಳಿಸುತ್ತಿರುವ ಸಮೀಪದ ಕಲ್ಲವ್ವನಾಗತಿ ಹಳ್ಳಿಯ ರೈತ ಕೆ.ಎಂ. ಜಯರಾಜಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.</p>.<p>ತಮ್ಮ ಒಂದು ಎಕರೆ ಜಮೀನಿನಲ್ಲಿ 6 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದು, ಉತ್ತಮ ನೀರು ದೊರೆತಿದೆ. ಒಂದು ಎಕರೆಯಲ್ಲಿ 650 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದು, ಆರಂಭದ ವರ್ಷಗಳಲ್ಲಿ ಟೊಮೊಟೊ, ಮೆಣಸಿನಕಾಯಿ, ಬದನೆಕಾಯಿ ಮತ್ತಿತರ ತರಕಾರಿ ಬೆಳೆಯುತ್ತಿದ್ದರು. ಈ ವರ್ಷ ಮಿರಾಬುಲ್ ಗುಲಾಬಿ, ಚೆಂಡು ಹೂವು ಹಾಗೂ ಟೊಮೆಟೊವನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ.</p>.<p>‘ವರ್ಷದ ಹಿಂದೆ ತಮಿಳುನಾಡಿನಿಂದ 650 ಮಿರಾಬುಲ್ ಗುಲಾಬಿ ಸಸಿ ತಂದು ನಾಟಿ ಮಾಡಿದ್ದೆವು. ಸಸಿಗಳ ವೆಚ್ಚ, ಬೇಸಾಯ, ನಾಟಿ, ಮೇಲುಗೊಬ್ಬರ, ಕಳೆ, ಔಷಧಕ್ಕಾಗಿ ಈವರೆಗೆ ₹ 1.75 ಲಕ್ಷ ಖರ್ಚು ಮಾಡಿದ್ದೇವೆ. ವರ್ಷದಿಂದ ಹೂವು ಕೊಯ್ಲಿಗೆ ಬಂದಿದ್ದು, ಎರಡು ದಿನಗಳಿಗೊಮ್ಮೆ ಕಟಾವು ಮಾಡುತ್ತಿದ್ದೇವೆ. ಆರಂಭದ ದಿನಗಳಲ್ಲಿ ಎರಡು ದಿನಗಳಿಗೊಮ್ಮೆ 5ರಿಂದ 8 ಕೆ.ಜಿ.ಯಷ್ಟು ಹೂವನ್ನು ಕೊಯ್ಲು ಮಾಡುತ್ತಿದ್ದೆವು. ಈಗ 20ರಿಂದ 25 ಕೆ.ಜಿ.ಯಷ್ಟು ಹೂ ಸಿಗುತ್ತಿದೆ. ಹೂವನ್ನು ದಾವಣಗೆರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 80ರಿಂದ ₹ 150ರವೆಗೆ ಮಾರಾಟ ಮಾಡುತ್ತಿದ್ದೇವೆ. ಈವರೆಗೆ ₹ 2 ಲಕ್ಷ ಆದಾಯ ಬಂದಿದ್ದು, ಮುಂದಿನ ತಿಂಗಳು ಇಳುವರಿ ಹೆಚ್ಚಾಗಲಿದೆ. ತಿಂಗಳಿಗೆ ಕನಿಷ್ಠ ₹ 18,000ದಿಂದ ₹ 20,000 ಆದಾಯದ ನಿರೀಕ್ಷೆ ಇದೆ’ ಎಂದು ರೈತ ಜಯರಾಜಪ್ಪ ಮಾಹಿತಿ ನೀಡಿದರು.</p>.<p class="Subhead">ಎಲ್ಲೋ ಗೋಲ್ಡ್ ಚೆಂಡು ಹೂ: ಅಡಿಕೆ ಹಾಗೂ ಮಿರಾಬುಲ್ ಗುಲಾಬಿಗಳ ನಡುವೆ ಅಂತರ ಬೆಳೆಯಾಗಿ 2,000 ಎಲ್ಲೋ ಗೋಲ್ಡ್ ಚೆಂಡು ಹೂವು ಸಸಿ ನಾಟಿ ಮಾಡಲಾಗಿತ್ತು. ಇದುವರೆಗೆ ಸಸಿಗಳು, ಕಳೆ, ಮೇಲುಗೊಬ್ಬರ, ಔಷಧ ಸೇರಿ ₹ 8,000 ಖರ್ಚು ಮಾಡಲಾಗಿದೆ. ಈಗ ಅದೂ ಕೊಯ್ಲಿಗೆ ಸಿದ್ಧವಾಗಿದೆ. ಈಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 30ರಿಂದ ₹ 40 ದರ ಇದ್ದು, ₹ 15,000 ಆದಾಯ ಬಂದಿದೆ. 15 ದಿನಗಳ ನಂತರ ಚೆಂಡು ಹೂವನ್ನು ತೆಗೆದು, ತರಕಾರಿಯನ್ನು ಬೆಳೆಯುವ ಯೋಜನೆ ಇದೆ’ ಎಂದು ಅವರು ವಿವರಿಸಿದರು.</p>.<p class="Subhead">ಟೊಮೊಟೊ: ಒಂದು ಎಕರೆಯಲ್ಲಿ ಪ್ರದೇಶದಲ್ಲಿ 3,000 ಟೊಮೆಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ₹ 12,000 ವೆಚ್ಚವಾಗಿದೆ. ಹದಿನೈದು ದಿನಗಳಿಂದ ಕೊಯಿಲು ಮಾಡುತ್ತಿದ್ದೇವೆ. ಈವರೆಗೆ 4 ಕ್ವಿಂಟಲ್ ಮಾರಾಟ ಮಾಡಿದ್ದೇವೆ. ಸ್ಥಳೀಯವಾಗಿ ನಡೆಯುವ ಸಂತೆಗಳಿಗೆ ತೆಗೆದುಕೊಂಡು ಹೋಗಿ 20 ಕೆ.ಜಿ. ತೂಕದ ಬಾಕ್ಸ್ ಒಂದಕ್ಕೆ ₹ 200ರಂತೆ ಮಾರಾಟ ಮಾಡುತ್ತಿದ್ದೇವೆ. ಇನ್ನೂ ಒಂದೂವರೆ ತಿಂಗಳು ಇಳುವರಿ ಬರುತ್ತದೆ. ₹ 40,000 ಆದಾಯದ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.</p>.<p class="Briefhead">ಕೋಟ್...</p>.<p class="Subhead">ಅಂತರ ಬೆಳೆ ವಿಧಾನ ಅನುಸರಿಸುತ್ತಿರುವ ಕಾರಣ ಬಿಡುವಿಲ್ಲದ ಕೆಲಸ ಇದೆ. ಪತ್ನಿ ಗೀತಾ ಕೃಷಿಗೆ ಕೈಜೋಡಿಸಿರುವುದರಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.<br /><strong>ಜಯರಾಜಪ್ಪ,</strong> ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು:</strong> ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಕೈತುಂಬ ಆದಾಯ ಗಳಿಸುತ್ತಿರುವ ಸಮೀಪದ ಕಲ್ಲವ್ವನಾಗತಿ ಹಳ್ಳಿಯ ರೈತ ಕೆ.ಎಂ. ಜಯರಾಜಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.</p>.<p>ತಮ್ಮ ಒಂದು ಎಕರೆ ಜಮೀನಿನಲ್ಲಿ 6 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದು, ಉತ್ತಮ ನೀರು ದೊರೆತಿದೆ. ಒಂದು ಎಕರೆಯಲ್ಲಿ 650 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದು, ಆರಂಭದ ವರ್ಷಗಳಲ್ಲಿ ಟೊಮೊಟೊ, ಮೆಣಸಿನಕಾಯಿ, ಬದನೆಕಾಯಿ ಮತ್ತಿತರ ತರಕಾರಿ ಬೆಳೆಯುತ್ತಿದ್ದರು. ಈ ವರ್ಷ ಮಿರಾಬುಲ್ ಗುಲಾಬಿ, ಚೆಂಡು ಹೂವು ಹಾಗೂ ಟೊಮೆಟೊವನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ.</p>.<p>‘ವರ್ಷದ ಹಿಂದೆ ತಮಿಳುನಾಡಿನಿಂದ 650 ಮಿರಾಬುಲ್ ಗುಲಾಬಿ ಸಸಿ ತಂದು ನಾಟಿ ಮಾಡಿದ್ದೆವು. ಸಸಿಗಳ ವೆಚ್ಚ, ಬೇಸಾಯ, ನಾಟಿ, ಮೇಲುಗೊಬ್ಬರ, ಕಳೆ, ಔಷಧಕ್ಕಾಗಿ ಈವರೆಗೆ ₹ 1.75 ಲಕ್ಷ ಖರ್ಚು ಮಾಡಿದ್ದೇವೆ. ವರ್ಷದಿಂದ ಹೂವು ಕೊಯ್ಲಿಗೆ ಬಂದಿದ್ದು, ಎರಡು ದಿನಗಳಿಗೊಮ್ಮೆ ಕಟಾವು ಮಾಡುತ್ತಿದ್ದೇವೆ. ಆರಂಭದ ದಿನಗಳಲ್ಲಿ ಎರಡು ದಿನಗಳಿಗೊಮ್ಮೆ 5ರಿಂದ 8 ಕೆ.ಜಿ.ಯಷ್ಟು ಹೂವನ್ನು ಕೊಯ್ಲು ಮಾಡುತ್ತಿದ್ದೆವು. ಈಗ 20ರಿಂದ 25 ಕೆ.ಜಿ.ಯಷ್ಟು ಹೂ ಸಿಗುತ್ತಿದೆ. ಹೂವನ್ನು ದಾವಣಗೆರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 80ರಿಂದ ₹ 150ರವೆಗೆ ಮಾರಾಟ ಮಾಡುತ್ತಿದ್ದೇವೆ. ಈವರೆಗೆ ₹ 2 ಲಕ್ಷ ಆದಾಯ ಬಂದಿದ್ದು, ಮುಂದಿನ ತಿಂಗಳು ಇಳುವರಿ ಹೆಚ್ಚಾಗಲಿದೆ. ತಿಂಗಳಿಗೆ ಕನಿಷ್ಠ ₹ 18,000ದಿಂದ ₹ 20,000 ಆದಾಯದ ನಿರೀಕ್ಷೆ ಇದೆ’ ಎಂದು ರೈತ ಜಯರಾಜಪ್ಪ ಮಾಹಿತಿ ನೀಡಿದರು.</p>.<p class="Subhead">ಎಲ್ಲೋ ಗೋಲ್ಡ್ ಚೆಂಡು ಹೂ: ಅಡಿಕೆ ಹಾಗೂ ಮಿರಾಬುಲ್ ಗುಲಾಬಿಗಳ ನಡುವೆ ಅಂತರ ಬೆಳೆಯಾಗಿ 2,000 ಎಲ್ಲೋ ಗೋಲ್ಡ್ ಚೆಂಡು ಹೂವು ಸಸಿ ನಾಟಿ ಮಾಡಲಾಗಿತ್ತು. ಇದುವರೆಗೆ ಸಸಿಗಳು, ಕಳೆ, ಮೇಲುಗೊಬ್ಬರ, ಔಷಧ ಸೇರಿ ₹ 8,000 ಖರ್ಚು ಮಾಡಲಾಗಿದೆ. ಈಗ ಅದೂ ಕೊಯ್ಲಿಗೆ ಸಿದ್ಧವಾಗಿದೆ. ಈಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 30ರಿಂದ ₹ 40 ದರ ಇದ್ದು, ₹ 15,000 ಆದಾಯ ಬಂದಿದೆ. 15 ದಿನಗಳ ನಂತರ ಚೆಂಡು ಹೂವನ್ನು ತೆಗೆದು, ತರಕಾರಿಯನ್ನು ಬೆಳೆಯುವ ಯೋಜನೆ ಇದೆ’ ಎಂದು ಅವರು ವಿವರಿಸಿದರು.</p>.<p class="Subhead">ಟೊಮೊಟೊ: ಒಂದು ಎಕರೆಯಲ್ಲಿ ಪ್ರದೇಶದಲ್ಲಿ 3,000 ಟೊಮೆಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ₹ 12,000 ವೆಚ್ಚವಾಗಿದೆ. ಹದಿನೈದು ದಿನಗಳಿಂದ ಕೊಯಿಲು ಮಾಡುತ್ತಿದ್ದೇವೆ. ಈವರೆಗೆ 4 ಕ್ವಿಂಟಲ್ ಮಾರಾಟ ಮಾಡಿದ್ದೇವೆ. ಸ್ಥಳೀಯವಾಗಿ ನಡೆಯುವ ಸಂತೆಗಳಿಗೆ ತೆಗೆದುಕೊಂಡು ಹೋಗಿ 20 ಕೆ.ಜಿ. ತೂಕದ ಬಾಕ್ಸ್ ಒಂದಕ್ಕೆ ₹ 200ರಂತೆ ಮಾರಾಟ ಮಾಡುತ್ತಿದ್ದೇವೆ. ಇನ್ನೂ ಒಂದೂವರೆ ತಿಂಗಳು ಇಳುವರಿ ಬರುತ್ತದೆ. ₹ 40,000 ಆದಾಯದ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.</p>.<p class="Briefhead">ಕೋಟ್...</p>.<p class="Subhead">ಅಂತರ ಬೆಳೆ ವಿಧಾನ ಅನುಸರಿಸುತ್ತಿರುವ ಕಾರಣ ಬಿಡುವಿಲ್ಲದ ಕೆಲಸ ಇದೆ. ಪತ್ನಿ ಗೀತಾ ಕೃಷಿಗೆ ಕೈಜೋಡಿಸಿರುವುದರಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.<br /><strong>ಜಯರಾಜಪ್ಪ,</strong> ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>