<p><strong>ಚಿತ್ರದುರ್ಗ</strong>: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಆ.9ರಿಂದ 2 ದಿನಗಳ ಕಾಲ ನಗರದ ಸರ್ಕಾರಿ ಕಲಾ ಕಾಲೇಜು ಸಭಾಭವನದಲ್ಲಿ ‘ಚಿತ್ರದುರ್ಗ ಪರಿಸರದ ಬಯಲಾಟಗಳು‘ ಬಯಲಾಟ ಪ್ರದರ್ಶನ, ವಿಚಾರ ಸಂಕಿರಣ ನಡೆಯಲಿದೆ.</p>.<p>ಆ.9ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಕೆ.ಎಂ.ಮೈತ್ರಿ ಅವರು ಆಶಯ ಮಾತುಗಳನ್ನಾಡುವರು. ರಂಗ ಸಮಾಜದ ಸದಸ್ಯ ರಾಜಪ್ಪ ದಳವಾಯಿ, ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗದಾಸ್, ಪ್ರಾಚಾರ್ಯ ಕರಿಯಪ್ಪ ಮಾಳಿಗೆ ಪಾಲ್ಗೊಳ್ಳುವರು.</p>.<p>ಮಧ್ಯಾಹ್ನ 12.30ಕ್ಕೆ ‘ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಬೌಗೋಳಿಕ ಹಿನ್ನೆಲೆ’ ಕುರಿತು ತಜ್ಞರಾದ ಬಿ.ರಾಜಶೇಖರಪ್ಪ, ಜಿಲ್ಲೆಯ ಜಾನಪದ ಕುರಿತು ಮೀರಾಸಾಬಿಹಳ್ಳಿ ಶಿವಣ್ಣ, ಬಯಲಾಟ ಪರಂಪರೆ ಕುರಿತು ಬಿ.ಎಂ.ಗುರುನಾಥ ವಿಚಾರ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ಯಶೋದಾ, ಚಿತ್ತಯ್ಯ, ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡುವರು.</p>.<p>ಸಂಜೆ 4 ಗಂಟೆಗೆ ಚಳ್ಳಕೆರೆ ತಾಲ್ಲೂಕು ಮಲ್ಲೂರಹಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಬಯಲಾಟ ಸಂಘದ ಕಲಾವಿದರು ‘ದ್ರೌಪದಿ ವಸ್ತ್ರಾಪಹರಣ’ ಬಯಲಾಟ ಪ್ರದರ್ಶನ ಮಾಡಲಿದ್ದಾರೆ. ಸಂಜೆ 6.30ಕ್ಕೆ ಮೊಳಕಾಲ್ಮುರು ತಾಲ್ಲೂಕು, ಹಳೇಕೆರೆಯ ನುಂಕೆಮಲೆ ಕಾಲಭೈರವಸ್ವಾಮಿ ಸಂಘದ ಕಲಾವಿದರು ‘ಕಾಲ ಭೈರವೇಶ್ವರಸ್ವಾಮಿ ಮಹಾತ್ಮೆ’ ಬಯಲಾಟ ಪ್ರದರ್ಶನ ಮಾಡುವರು.</p>.<p>ಆ.10ರಂದು ಬೆಳಿಗ್ಗೆ ಚಿಕ್ಕಣ್ಣ ಎಣ್ಣಕಟ್ಟೆ, ಪಾರಿಜಾತಾ, ಅರುಣ ಜೋಳದ ಕೂಡ್ಲಿಗಿ ಅವರು ವಿಚಾರ ಮಂಡಿಸುವರು. ಮಧ್ಯಾಹ್ನ 12.30ಕ್ಕೆ ತಳಕು ಗ್ರಾಮದ ತರಾಸು ಬಯಲಾಟ ಕಲಾ ಸಂಘದ ಕಲಾವಿದರು ‘ವೀರ ಅಭಿಮನ್ಯು ಕಾಳಗ’ ಬಯಲಾಟ ಪ್ರದರ್ಶಿಸುವರು.</p>.<p>ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಕಲಾವಿದ ಕೆ.ಪಿ.ಭೂತಯ್ಯ, ಎಚ್.ಲಿಂಗಪ್ಪ, ಕೆ.ಆರ್.ದುರ್ಗದಾಸ ಪಾಲ್ಗೊಳ್ಳುವರು.</p>.<p>ಸಂಜೆ 5.30ಕ್ಕೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬೆಳ್ಳೀಕಟ್ಟೆಯ ಬಸವೇಶ್ವರ ನಾಟ್ಯ ಸಂಘದ ಕಲಾವಿದರು ‘ಶತಕಂಠ ರಾಮಾಯಣ’ ಬಯಲಾಟ ಪ್ರದರ್ಶನ ಮಾಡುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಆ.9ರಿಂದ 2 ದಿನಗಳ ಕಾಲ ನಗರದ ಸರ್ಕಾರಿ ಕಲಾ ಕಾಲೇಜು ಸಭಾಭವನದಲ್ಲಿ ‘ಚಿತ್ರದುರ್ಗ ಪರಿಸರದ ಬಯಲಾಟಗಳು‘ ಬಯಲಾಟ ಪ್ರದರ್ಶನ, ವಿಚಾರ ಸಂಕಿರಣ ನಡೆಯಲಿದೆ.</p>.<p>ಆ.9ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಕೆ.ಎಂ.ಮೈತ್ರಿ ಅವರು ಆಶಯ ಮಾತುಗಳನ್ನಾಡುವರು. ರಂಗ ಸಮಾಜದ ಸದಸ್ಯ ರಾಜಪ್ಪ ದಳವಾಯಿ, ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗದಾಸ್, ಪ್ರಾಚಾರ್ಯ ಕರಿಯಪ್ಪ ಮಾಳಿಗೆ ಪಾಲ್ಗೊಳ್ಳುವರು.</p>.<p>ಮಧ್ಯಾಹ್ನ 12.30ಕ್ಕೆ ‘ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಬೌಗೋಳಿಕ ಹಿನ್ನೆಲೆ’ ಕುರಿತು ತಜ್ಞರಾದ ಬಿ.ರಾಜಶೇಖರಪ್ಪ, ಜಿಲ್ಲೆಯ ಜಾನಪದ ಕುರಿತು ಮೀರಾಸಾಬಿಹಳ್ಳಿ ಶಿವಣ್ಣ, ಬಯಲಾಟ ಪರಂಪರೆ ಕುರಿತು ಬಿ.ಎಂ.ಗುರುನಾಥ ವಿಚಾರ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ಯಶೋದಾ, ಚಿತ್ತಯ್ಯ, ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡುವರು.</p>.<p>ಸಂಜೆ 4 ಗಂಟೆಗೆ ಚಳ್ಳಕೆರೆ ತಾಲ್ಲೂಕು ಮಲ್ಲೂರಹಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಬಯಲಾಟ ಸಂಘದ ಕಲಾವಿದರು ‘ದ್ರೌಪದಿ ವಸ್ತ್ರಾಪಹರಣ’ ಬಯಲಾಟ ಪ್ರದರ್ಶನ ಮಾಡಲಿದ್ದಾರೆ. ಸಂಜೆ 6.30ಕ್ಕೆ ಮೊಳಕಾಲ್ಮುರು ತಾಲ್ಲೂಕು, ಹಳೇಕೆರೆಯ ನುಂಕೆಮಲೆ ಕಾಲಭೈರವಸ್ವಾಮಿ ಸಂಘದ ಕಲಾವಿದರು ‘ಕಾಲ ಭೈರವೇಶ್ವರಸ್ವಾಮಿ ಮಹಾತ್ಮೆ’ ಬಯಲಾಟ ಪ್ರದರ್ಶನ ಮಾಡುವರು.</p>.<p>ಆ.10ರಂದು ಬೆಳಿಗ್ಗೆ ಚಿಕ್ಕಣ್ಣ ಎಣ್ಣಕಟ್ಟೆ, ಪಾರಿಜಾತಾ, ಅರುಣ ಜೋಳದ ಕೂಡ್ಲಿಗಿ ಅವರು ವಿಚಾರ ಮಂಡಿಸುವರು. ಮಧ್ಯಾಹ್ನ 12.30ಕ್ಕೆ ತಳಕು ಗ್ರಾಮದ ತರಾಸು ಬಯಲಾಟ ಕಲಾ ಸಂಘದ ಕಲಾವಿದರು ‘ವೀರ ಅಭಿಮನ್ಯು ಕಾಳಗ’ ಬಯಲಾಟ ಪ್ರದರ್ಶಿಸುವರು.</p>.<p>ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಕಲಾವಿದ ಕೆ.ಪಿ.ಭೂತಯ್ಯ, ಎಚ್.ಲಿಂಗಪ್ಪ, ಕೆ.ಆರ್.ದುರ್ಗದಾಸ ಪಾಲ್ಗೊಳ್ಳುವರು.</p>.<p>ಸಂಜೆ 5.30ಕ್ಕೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬೆಳ್ಳೀಕಟ್ಟೆಯ ಬಸವೇಶ್ವರ ನಾಟ್ಯ ಸಂಘದ ಕಲಾವಿದರು ‘ಶತಕಂಠ ರಾಮಾಯಣ’ ಬಯಲಾಟ ಪ್ರದರ್ಶನ ಮಾಡುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>