<p><strong>ಚಿಕ್ಕಜಾಜೂರು</strong>: ಉತ್ಥಾನ ದ್ವಾದಶಿ ಪುಷ್ಪ ಬೃಂದಾವನೋತ್ಸವದ ಅಂಗವಾಗಿ ಗ್ರಾಮದ ಮಹಿಳೆಯರು ತುಳಸಿ ಕಲ್ಯಾಣೋತ್ಸವವನ್ನು ಭಾನುವಾರ ಸಂಜೆ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.</p>.<p>ಪ್ರತಿ ಮನೆಗಳಲ್ಲಿ ತುಳಸಿ ಪೂಜೆ: ಗ್ರಾಮದ ಬಹುತೇಕ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಗೃಹಿಣಿಯರು ತಮ್ಮ ಮನೆಯಂಗಳದಲ್ಲಿ ಪ್ರತಿಷ್ಠಾಪಿಸಿರುವ ತುಳಸಿ ಕಟ್ಟೆಯನ್ನು ಸುಣ್ಣ ಬಣ್ಣಗಳಿಂದ ಸಾರಿಸಿ, ರಂಗೋಲಿ ಬಿಡಿಸಿ, ಸೇವಂತಿಗೆ, ಮಲ್ಲಿಗೆ ಹೂವುಗಳ ಹಾರವನ್ನು ಮಾಡಿ, ವಿದ್ಯುತ್ ದೀಪಗಳಿಂದ ತುಳಸಿ ಕಟ್ಟೆಯನ್ನು ಸಿಂಗರಿಸಿದ್ದರು. </p>.<p>ತುಳಸಿ ಗಿಡಕ್ಕೆ ಹೊಸ ಸೀರೆ, ರವಿಕೆ ಬಟ್ಟೆಗಳನ್ನು ಉಡಿಸಿ ಸಿಂಗರಿಸಿ, ಅವಲಕ್ಕಿ, ಹಣ್ಣುಗಳು ಹಾಗೂ ಬಗೆ ಬಗೆಯ ಸಿಹಿ ತಿನಿಸುಗಳನ್ನು ಇಟ್ಟು, ಅಕ್ಕಪಕ್ಕದ ಮನೆಗಳ ಮುತ್ತೈದೆಯರನ್ನು ಪೂಜೆಗೆ ಕರೆದು ತುಳಸಿ ಕಟ್ಟೆಗೆ ಮಂಗಳಾರತಿ ಮಾಡಿದರು. </p>.<p>ದೇವಾಲಯಗಳಲ್ಲಿ ವಿಶೇಷ ಪೂಜೆ: ಗ್ರಾಮದ ಹಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿನ ಉತ್ಸವ ಮೂರ್ತಿಯನ್ನು ಅಲಂಕರಿಸಿ, ವೃಂದಾವನ ಮಾದರಿಯ ಮೇಲೆ ಉತ್ಸವ ಮೂರ್ತಿಯನ್ನು ಇಟ್ಟು, ವಾದ್ಯಘೋಷ್ಠಿಯೊಂದಿಗೆ ಗ್ರಾಮದ ಬೊಮ್ಮಜ್ಜ ವಂಶಸ್ಥರು ವೃಂದಾವನದ ರಥವನ್ನು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ, ದೇವಸ್ಥಾನದ ಅರ್ಚಕರು ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ನಡೆಸಿದರು.</p>.<p>ಗ್ರಾಮದ ರಾಮಕೃಷ್ಣ ದೇವಸ್ಥಾನದ ಆವರಣದಲ್ಲಿರುವ ತುಳಿಸಿ ಕಟ್ಟೆ, ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗಳಿಗೆ ತುಳಸಿ ಹಾರವನ್ನು ಹಾಕಿ ದೇವಸ್ಥಾನ ಸಮಿತಿ ವತಿಯಿಂದ ಪೂಜೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು</strong>: ಉತ್ಥಾನ ದ್ವಾದಶಿ ಪುಷ್ಪ ಬೃಂದಾವನೋತ್ಸವದ ಅಂಗವಾಗಿ ಗ್ರಾಮದ ಮಹಿಳೆಯರು ತುಳಸಿ ಕಲ್ಯಾಣೋತ್ಸವವನ್ನು ಭಾನುವಾರ ಸಂಜೆ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.</p>.<p>ಪ್ರತಿ ಮನೆಗಳಲ್ಲಿ ತುಳಸಿ ಪೂಜೆ: ಗ್ರಾಮದ ಬಹುತೇಕ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಗೃಹಿಣಿಯರು ತಮ್ಮ ಮನೆಯಂಗಳದಲ್ಲಿ ಪ್ರತಿಷ್ಠಾಪಿಸಿರುವ ತುಳಸಿ ಕಟ್ಟೆಯನ್ನು ಸುಣ್ಣ ಬಣ್ಣಗಳಿಂದ ಸಾರಿಸಿ, ರಂಗೋಲಿ ಬಿಡಿಸಿ, ಸೇವಂತಿಗೆ, ಮಲ್ಲಿಗೆ ಹೂವುಗಳ ಹಾರವನ್ನು ಮಾಡಿ, ವಿದ್ಯುತ್ ದೀಪಗಳಿಂದ ತುಳಸಿ ಕಟ್ಟೆಯನ್ನು ಸಿಂಗರಿಸಿದ್ದರು. </p>.<p>ತುಳಸಿ ಗಿಡಕ್ಕೆ ಹೊಸ ಸೀರೆ, ರವಿಕೆ ಬಟ್ಟೆಗಳನ್ನು ಉಡಿಸಿ ಸಿಂಗರಿಸಿ, ಅವಲಕ್ಕಿ, ಹಣ್ಣುಗಳು ಹಾಗೂ ಬಗೆ ಬಗೆಯ ಸಿಹಿ ತಿನಿಸುಗಳನ್ನು ಇಟ್ಟು, ಅಕ್ಕಪಕ್ಕದ ಮನೆಗಳ ಮುತ್ತೈದೆಯರನ್ನು ಪೂಜೆಗೆ ಕರೆದು ತುಳಸಿ ಕಟ್ಟೆಗೆ ಮಂಗಳಾರತಿ ಮಾಡಿದರು. </p>.<p>ದೇವಾಲಯಗಳಲ್ಲಿ ವಿಶೇಷ ಪೂಜೆ: ಗ್ರಾಮದ ಹಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿನ ಉತ್ಸವ ಮೂರ್ತಿಯನ್ನು ಅಲಂಕರಿಸಿ, ವೃಂದಾವನ ಮಾದರಿಯ ಮೇಲೆ ಉತ್ಸವ ಮೂರ್ತಿಯನ್ನು ಇಟ್ಟು, ವಾದ್ಯಘೋಷ್ಠಿಯೊಂದಿಗೆ ಗ್ರಾಮದ ಬೊಮ್ಮಜ್ಜ ವಂಶಸ್ಥರು ವೃಂದಾವನದ ರಥವನ್ನು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ, ದೇವಸ್ಥಾನದ ಅರ್ಚಕರು ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ನಡೆಸಿದರು.</p>.<p>ಗ್ರಾಮದ ರಾಮಕೃಷ್ಣ ದೇವಸ್ಥಾನದ ಆವರಣದಲ್ಲಿರುವ ತುಳಿಸಿ ಕಟ್ಟೆ, ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗಳಿಗೆ ತುಳಸಿ ಹಾರವನ್ನು ಹಾಕಿ ದೇವಸ್ಥಾನ ಸಮಿತಿ ವತಿಯಿಂದ ಪೂಜೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>