ತಾಲ್ಲೂಕಿನ ಹಾನಗಲ್ನಲ್ಲಿಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧಾನಪರಿಷತ್ ಚುನಾವಣೆ ನಂತರ ಮೊಳಕಾಲ್ಮುರಿಗೆ ಭೇಟಿ ನೀಡುತ್ತೇನೆ. ಕೆಲ ದಿನಗಳಿಂದ ಎರಡೂ ಕ್ಷೇತ್ರಗಳ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಹೋದ ಕಡೆ ಉತ್ತಮ ವಾತಾವರಣ ಕಂಡುಬರುತ್ತಿದೆ. ಸ್ಪರ್ಧೆ ಮಾಡಿದಲ್ಲಿ ಜನರು ಕೈಹಿಡಿಯುವ ವಿಶ್ವಾಸವಿದೆ. ಸ್ಪರ್ಧೆ ಇಂಗಿತ ಬಗ್ಗೆ ರಾಜ್ಯ ನಾಯಕರನ್ನು ಭೇಟಿಯಾಗಿ ಮಾತನಾಡಿದ್ದು, ಅವರು ಸ್ಪಂದಿಸಿದ್ದಾರೆ. ಶೀಘ್ರ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಹೇಳಿದರು.