‘ಸರ್ಕಾರ ನೇಮಕ ಮಾಡಿದ ಆಯೋಗ ಆರು ವರ್ಷ ನಿರಂತರವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ವೈಜ್ಞಾನಿಕ ಆಧಾರದ ಮೇರೆಗೆ ಅಧ್ಯಯನ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಭೋವಿ, ಲಂಬಾಣಿ, ಕೊರಚ ಹಾಗೂ ಕೊರಮ ಎಂಬ ನಾಲ್ಕು ಜಾತಿಗಳು ಶೇ 70ರಷ್ಟು ಮೀಸಲಾತಿ ಸೌಲಭ್ಯ ಪಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ. ಈ ಸತ್ಯದ ಅರಿವು ಇರುವ ಕಾರಣಕ್ಕೆ ವರದಿಗೆ ಸ್ವಾಮೀಜಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.