‘ಮತದಾರರೊಬ್ಬರು ಕರೆ ಮಾಡಿ ಪಕ್ಷವೊಂದು ₹1,500, ಮತ್ತೊಬ್ಬ ಅಭ್ಯರ್ಥಿ ₹1,000 ನೀಡುತ್ತಿದ್ದಾರೆ. ನೀವು ಎಷ್ಟು ಕೊಡುತ್ತೀರಿ ಎಂದು ಪ್ರಶ್ನಿಸಿದರು. ವಿದ್ಯಾವಂತ ಮತದಾರರು ಹಣ ಕೇಳುವುದು ಸರಿಯಲ್ಲ. ಹೀಗಾಗಿ, ರಾಜಕಾರಣ ಬೇಸರ ತರಿಸಿದೆ. ಗೆದ್ದವರು ಅಧಿಕಾರ ನಡೆಸಿದರೆ ಉಳಿದವರು ಟೋಪಿ ಹಾಕಿಸಿಕೊಂಡು ಮನೆಯಲ್ಲಿ ಕೂರುತ್ತಾರೆ. ಮೌಲ್ಯಾಧಾರಿತ ರಾಜಕಾರಣ ರಾಮಕೃಷ್ಣ ಹೆಗಡೆ ಅವರ ಹಿಂದೆಯೇ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.