<p><strong>ಚಿತ್ರದುರ್ಗ</strong>: ‘ಬಸವತತ್ವ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಆದ್ದರಿಂದ ತಾಯಂದಿರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಬಸವ ಅನುಯಾಯಿ ಆಗುವಂತೆ ಮಾಡಬೇಕು’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಲಹೆ ನೀಡಿದರು.</p>.<p>ಐಯುಡಿಪಿ ಬಡಾವಣೆಯಲ್ಲಿ ಇರುವ ವಕೀಲ ಪಾತ್ಯರಾಜನ್ ಮನೆಯಲ್ಲಿ ಮುರುಘಾಮಠದಿಂದ ನಡೆದ ‘ನಿತ್ಯ ಕಲ್ಯಾಣ’ ಐದನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅನೇಕರು ಹೆಣ್ಣು, ಹೊನ್ನು, ಮಣ್ಣಿಗೆ ಬೆನ್ನತ್ತಿ ಹೋಗುತ್ತಿದ್ದಾರೆ. ಮಾನವರ ದುಃಖಕ್ಕೆ ಅತಿಯಾಸೆಯೇ ಬಹುಮುಖ್ಯ ಕಾರಣವಾಗಿದೆ. ಇದರಿಂದ ಹೊರಬರಲು ಬಸವಣ್ಣನ ಮಾರ್ಗ ಅನುಸರಿಸಬೇಕಿದೆ. ಜಾತೀಯತೆ ಬದಿಗಿಟ್ಟು ಸಮಾನರಾಗಿ ಬದುಕಬೇಕಿದೆ. ಕಾಯಕ ತತ್ವದ ಅಡಿ ಆರ್ಥಿಕವಾಗಿ ಪ್ರಬಲವಾದ ಸಮಾಜ ನಿರ್ಮಿಸಬೇಕಿದೆ’ ಎಂದರು.</p>.<p>ಶಿವಮೂರ್ತಿ ಮುರುಘಾ ಶರಣರು, ‘ಸತ್ಯ, ಅಹಿಂಸಾ ಮಾರ್ಗದಲ್ಲಿ ಸಾಗುವ ಜ್ಞಾನವೇ ತತ್ವಜ್ಞಾನವಾಗಿದೆ. ಇದು ಶಾಶ್ವತ ಶಾಂತಿ ಮತ್ತು ಸಮಾಧಾನ ನೀಡಲಿದೆ. ಸಂಶೋಧಕರು, ಅನ್ವೇಷಕರು, ವಿಜ್ಞಾನಿಗಳು ತತ್ವಜ್ಞಾನಿಯಾಗಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.</p>.<p>‘ಉದಾತ್ತವಾದ ಸಂವಿಧಾನದಲ್ಲೂ ತತ್ವಜ್ಞಾನವಿದೆ. ಇದರ ಹಾದಿಯಲ್ಲಿ ಸಾಗಿದವರು ಜೀವನದಲ್ಲಿ ಅತ್ಯಂತ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಇಡೀ ಸಮಾಜದ ತಪ್ಪನ್ನು ಸರಿಪಡಿಸುವ ಶಕ್ತಿ ಸಾಮರ್ಥ್ಯ ತತ್ವಜ್ಞಾನಕ್ಕೆ ಇದೆ’ ಎಂದು ಅಭಿಪ್ರಾಯಪಟ್ಟರು.</p>.<p>ಇಳಕಲ್ನ ಗುರುಮಹಾಂತ ಸ್ವಾಮೀಜಿ, ‘ಅನ್ಯರಿಗೆ ಸ್ಪಂದಿಸುವುದೇ ಸುಜ್ಞಾನಿಗಳ ಲಕ್ಷಣವಾಗಿದೆ. ತಾರತಮ್ಯ ಮೆಟ್ಟಿ ನಿಲ್ಲುವ ಶಕ್ತಿಯೂ ಇದಕ್ಕೆ ಇದೆ. ಮಾನವರೆಲ್ಲರೂ ಒಂದೇ ಎಂಬ ಭೇದ–ಭಾವ ಇಲ್ಲದೇ ಸನ್ಮಾರ್ಗವೇ ತತ್ವಜ್ಞಾನ. ಇವೆರಡು ಮಾನವರ ಬದುಕಿಗೆ ದಾರಿದೀಪ ಇದ್ದಂತೆ’ ಎಂದರು.</p>.<p>ಬಾಗಲಕೋಟೆಯ ಸತ್ತಿ ಸ್ವಾಮೀಜಿ, ರೆವರೆಂಡ್ ಫಾದರ್ ಸಿ. ಜಾರ್ಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ಬಸವತತ್ವ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಆದ್ದರಿಂದ ತಾಯಂದಿರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಬಸವ ಅನುಯಾಯಿ ಆಗುವಂತೆ ಮಾಡಬೇಕು’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಲಹೆ ನೀಡಿದರು.</p>.<p>ಐಯುಡಿಪಿ ಬಡಾವಣೆಯಲ್ಲಿ ಇರುವ ವಕೀಲ ಪಾತ್ಯರಾಜನ್ ಮನೆಯಲ್ಲಿ ಮುರುಘಾಮಠದಿಂದ ನಡೆದ ‘ನಿತ್ಯ ಕಲ್ಯಾಣ’ ಐದನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅನೇಕರು ಹೆಣ್ಣು, ಹೊನ್ನು, ಮಣ್ಣಿಗೆ ಬೆನ್ನತ್ತಿ ಹೋಗುತ್ತಿದ್ದಾರೆ. ಮಾನವರ ದುಃಖಕ್ಕೆ ಅತಿಯಾಸೆಯೇ ಬಹುಮುಖ್ಯ ಕಾರಣವಾಗಿದೆ. ಇದರಿಂದ ಹೊರಬರಲು ಬಸವಣ್ಣನ ಮಾರ್ಗ ಅನುಸರಿಸಬೇಕಿದೆ. ಜಾತೀಯತೆ ಬದಿಗಿಟ್ಟು ಸಮಾನರಾಗಿ ಬದುಕಬೇಕಿದೆ. ಕಾಯಕ ತತ್ವದ ಅಡಿ ಆರ್ಥಿಕವಾಗಿ ಪ್ರಬಲವಾದ ಸಮಾಜ ನಿರ್ಮಿಸಬೇಕಿದೆ’ ಎಂದರು.</p>.<p>ಶಿವಮೂರ್ತಿ ಮುರುಘಾ ಶರಣರು, ‘ಸತ್ಯ, ಅಹಿಂಸಾ ಮಾರ್ಗದಲ್ಲಿ ಸಾಗುವ ಜ್ಞಾನವೇ ತತ್ವಜ್ಞಾನವಾಗಿದೆ. ಇದು ಶಾಶ್ವತ ಶಾಂತಿ ಮತ್ತು ಸಮಾಧಾನ ನೀಡಲಿದೆ. ಸಂಶೋಧಕರು, ಅನ್ವೇಷಕರು, ವಿಜ್ಞಾನಿಗಳು ತತ್ವಜ್ಞಾನಿಯಾಗಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.</p>.<p>‘ಉದಾತ್ತವಾದ ಸಂವಿಧಾನದಲ್ಲೂ ತತ್ವಜ್ಞಾನವಿದೆ. ಇದರ ಹಾದಿಯಲ್ಲಿ ಸಾಗಿದವರು ಜೀವನದಲ್ಲಿ ಅತ್ಯಂತ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಇಡೀ ಸಮಾಜದ ತಪ್ಪನ್ನು ಸರಿಪಡಿಸುವ ಶಕ್ತಿ ಸಾಮರ್ಥ್ಯ ತತ್ವಜ್ಞಾನಕ್ಕೆ ಇದೆ’ ಎಂದು ಅಭಿಪ್ರಾಯಪಟ್ಟರು.</p>.<p>ಇಳಕಲ್ನ ಗುರುಮಹಾಂತ ಸ್ವಾಮೀಜಿ, ‘ಅನ್ಯರಿಗೆ ಸ್ಪಂದಿಸುವುದೇ ಸುಜ್ಞಾನಿಗಳ ಲಕ್ಷಣವಾಗಿದೆ. ತಾರತಮ್ಯ ಮೆಟ್ಟಿ ನಿಲ್ಲುವ ಶಕ್ತಿಯೂ ಇದಕ್ಕೆ ಇದೆ. ಮಾನವರೆಲ್ಲರೂ ಒಂದೇ ಎಂಬ ಭೇದ–ಭಾವ ಇಲ್ಲದೇ ಸನ್ಮಾರ್ಗವೇ ತತ್ವಜ್ಞಾನ. ಇವೆರಡು ಮಾನವರ ಬದುಕಿಗೆ ದಾರಿದೀಪ ಇದ್ದಂತೆ’ ಎಂದರು.</p>.<p>ಬಾಗಲಕೋಟೆಯ ಸತ್ತಿ ಸ್ವಾಮೀಜಿ, ರೆವರೆಂಡ್ ಫಾದರ್ ಸಿ. ಜಾರ್ಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>