ಹಲವು ಸಮಯದವರೆಗೆ ಮಂಜು ಬಿದ್ದರೆ, ತೆಂಗು ಹಾಗೂ ಅಡಿಕೆ ಮರಗಳಲ್ಲಿ ಬಿಟ್ಟ ಹೊಂಬಾಳೆ, ಈಚುಗಳು ಉದುರಿ ಇಳುವರಿ ಕುಂಠಿತವಾಗುತ್ತದೆ. ಇಬ್ಬನಿಯ ನೀರು ಗಿಡದಲ್ಲಿ ತುಂಬಾ ಸಮಯ ಇರುವುದರಿಂದ ಅಡಿಕೆ ಮತ್ತು ತೆಂಗಿನ ಈಚುಗಳು ಉದುರುತ್ತಿವೆ. ಇದರಿಂದ ಇಳುವರಿ ಕುಸಿತವಾಗಲಿದೆ ಎಂದು ರೈತರಾದ ಲೋಕೇಶ್, ಬಸವರಾಜಪ್ಪ, ಉಮಾಪತಿ, ನಾಗರಾಜ್, ನಟರಾಜ್, ದಿವಾಕರ್, ಶಂಕರ್, ಶಿವಕುಮಾರ್ ಹೇಳಿದರು.