<p><strong>ಮೊಳಕಾಲ್ಮುರು:</strong> ಅನಾದಿ ಕಾಲದಿಂದಲೂ ಗುಣಮಟ್ಟ ಹಾಗೂ ಉತ್ತಮ ನೇಯ್ಗೆಗೆ ಖ್ಯಾತಿಯಾಗಿರುವ ಮೊಳಕಾಲ್ಮುರು ರೇಷ್ಮೆಸೀರೆಯ ನೇಕಾರರೊಬ್ಬರು 2024-25ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ನೇಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.</p><p>ಇಲ್ಲಿನ ಕೆಎಚ್ಡಿಸಿ ಕಾಲೊನಿಯ ಡಿ.ಎಸ್. ಸುರೇಶ್ ರಾಜ್ಯಮಟ್ಟದ ದ್ವಿತೀಯ ಸ್ಥಾನದ ಪ್ರಶಸ್ತಿಗೆ ಆಯ್ಕೆಯಾಗಿರುವ ನೇಕಾರ. ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿವರ್ಷ ನೇಕಾರರ ದಿನಾಚರಣೆ ಅಂಗವಾಗಿ ಪ್ರಶಸ್ತಿ ನೀಡುತ್ತಾ ಬಂದಿದೆ.</p><p>ಪ್ರಶಸ್ತಿಗೆ ಪಾತ್ರವಾಗಿರುವ ರೇಷ್ಮೆಸೀರೆಯಲ್ಲಿ ರಾಜ್ಯಲಾಂಛನ ಗಂಡಭೇರುಂಡವಿದ್ದು ಸುತ್ತಲೂ ಬುಟ್ಟುಗಳನ್ನು ನೇಯ್ಕೆ ಮಾಡಲಾಗಿದೆ. ಅಲ್ಲಲ್ಲಿ ಮೊಳಕಾಲ್ಮುರಿನ ಸಾಂಪ್ರದಾಯಿಕ ಚಿತ್ರಗಳಾದ ವಂಕಿ, ರುದ್ರಾಕ್ಷಿ ಚಿತ್ರಗಳಿವೆ. ಸೆರಗಿನಲ್ಲಿ ಸಾಲಾಗಿ ವಿವಿಧ ಬಣ್ಣಗಳಲ್ಲಿ ನವಿಲುಗಳನ್ನು ನೇಯ್ಗೆ ಮಾಡಲಾಗಿದೆ. ಜರತಾರಿಯನ್ನು ಇದಕ್ಕೆ ಬಳಕೆ ಮಾಡದಿರುವುದು ವಿಶೇಷ.</p><p>ವಿನ್ಯಾಸ ಮಾಡಲು 3 ತಿಂಗಳು, ನೇಯ್ಗೆ ಮಾಡಲು ಒಂದು ತಿಂಗಳು ಮತ್ತು ಅಂದಾಜು ₹ 50,000 ವೆಚ್ಚ ತಗುಲಿದೆ. 2021-22ರಲ್ಲಿ ಸುರೇಶ್ ಅವರ ಸಹೋದರ ಡಿ.ಎಸ್. ಮಲ್ಲಿಕಾರ್ಜುನ ಅವರು ನೇಯ್ಕೆ ಮಾಡಿದ್ದ ‘ರೇಷ್ಮೆಸೀರೆಯಲ್ಲಿ ಅರಳಿದ ರೈತನ ಬದುಕು’ ರೇಷ್ಮೆಸೀರೆಗೆ ರಾಜ್ಯಮಟ್ಟದ ಪ್ರಥಮ ಬಹುಮಾನ ಲಭಿಸಿತ್ತು.</p><p>ಆ. 7ರಂದು ಬೆಂಗಳೂರಿನಲ್ಲಿ ನಡೆಯರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಜವಳಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಅನಾದಿ ಕಾಲದಿಂದಲೂ ಗುಣಮಟ್ಟ ಹಾಗೂ ಉತ್ತಮ ನೇಯ್ಗೆಗೆ ಖ್ಯಾತಿಯಾಗಿರುವ ಮೊಳಕಾಲ್ಮುರು ರೇಷ್ಮೆಸೀರೆಯ ನೇಕಾರರೊಬ್ಬರು 2024-25ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ನೇಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.</p><p>ಇಲ್ಲಿನ ಕೆಎಚ್ಡಿಸಿ ಕಾಲೊನಿಯ ಡಿ.ಎಸ್. ಸುರೇಶ್ ರಾಜ್ಯಮಟ್ಟದ ದ್ವಿತೀಯ ಸ್ಥಾನದ ಪ್ರಶಸ್ತಿಗೆ ಆಯ್ಕೆಯಾಗಿರುವ ನೇಕಾರ. ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿವರ್ಷ ನೇಕಾರರ ದಿನಾಚರಣೆ ಅಂಗವಾಗಿ ಪ್ರಶಸ್ತಿ ನೀಡುತ್ತಾ ಬಂದಿದೆ.</p><p>ಪ್ರಶಸ್ತಿಗೆ ಪಾತ್ರವಾಗಿರುವ ರೇಷ್ಮೆಸೀರೆಯಲ್ಲಿ ರಾಜ್ಯಲಾಂಛನ ಗಂಡಭೇರುಂಡವಿದ್ದು ಸುತ್ತಲೂ ಬುಟ್ಟುಗಳನ್ನು ನೇಯ್ಕೆ ಮಾಡಲಾಗಿದೆ. ಅಲ್ಲಲ್ಲಿ ಮೊಳಕಾಲ್ಮುರಿನ ಸಾಂಪ್ರದಾಯಿಕ ಚಿತ್ರಗಳಾದ ವಂಕಿ, ರುದ್ರಾಕ್ಷಿ ಚಿತ್ರಗಳಿವೆ. ಸೆರಗಿನಲ್ಲಿ ಸಾಲಾಗಿ ವಿವಿಧ ಬಣ್ಣಗಳಲ್ಲಿ ನವಿಲುಗಳನ್ನು ನೇಯ್ಗೆ ಮಾಡಲಾಗಿದೆ. ಜರತಾರಿಯನ್ನು ಇದಕ್ಕೆ ಬಳಕೆ ಮಾಡದಿರುವುದು ವಿಶೇಷ.</p><p>ವಿನ್ಯಾಸ ಮಾಡಲು 3 ತಿಂಗಳು, ನೇಯ್ಗೆ ಮಾಡಲು ಒಂದು ತಿಂಗಳು ಮತ್ತು ಅಂದಾಜು ₹ 50,000 ವೆಚ್ಚ ತಗುಲಿದೆ. 2021-22ರಲ್ಲಿ ಸುರೇಶ್ ಅವರ ಸಹೋದರ ಡಿ.ಎಸ್. ಮಲ್ಲಿಕಾರ್ಜುನ ಅವರು ನೇಯ್ಕೆ ಮಾಡಿದ್ದ ‘ರೇಷ್ಮೆಸೀರೆಯಲ್ಲಿ ಅರಳಿದ ರೈತನ ಬದುಕು’ ರೇಷ್ಮೆಸೀರೆಗೆ ರಾಜ್ಯಮಟ್ಟದ ಪ್ರಥಮ ಬಹುಮಾನ ಲಭಿಸಿತ್ತು.</p><p>ಆ. 7ರಂದು ಬೆಂಗಳೂರಿನಲ್ಲಿ ನಡೆಯರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಜವಳಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>