<p><strong>ಹೊಳಲ್ಕೆರೆ: </strong>ತಾಲ್ಲೂಕಿನ ಈಚಘಟ್ಟದ ರೈತ ತಿಪ್ಪೇಸ್ವಾಮಿ ಅವರು ಲಾಕ್ಡೌನ್ನಿಂದ 6 ಎಕರೆ ಹೊಲದಲ್ಲಿ ಕೊಯ್ಯದೇ ಹಾಗೆಯೇ ಬಿಟ್ಟಿದ್ದ ಕೊಹಿನೂರ್ ತಳಿಯ ಕರಬೂಜ ಅಧಿಕ ಮಳೆಯಿಂದಕೊಳೆಯುತ್ತಿದೆ.</p>.<p>‘ವರ್ಷಕ್ಕೆ ₹ 1 ಲಕ್ಷ ಹಣ ನೀಡಿ ಹೊಲವನ್ನು ಗುತ್ತಿಗೆ ಪಡೆದು ಕರಬೂಜ ಬೆಳೆದಿದ್ದೆ. ಕೊಹಿನೂರ್ ತಳಿಯ 1 ಕೆ.ಜಿ. ಕರಬೂಜ ಬೀಜಕ್ಕೆ ₹ 74,000 ಬೆಲೆ ಇದೆ. ₹ 2 ಲಕ್ಷ ಖರ್ಚು ಮಾಡಿ 2.5 ಕೆ.ಜಿ ಬೀಜ ಬಿತ್ತನೆ ಮಾಡಿದ್ದೆ. ಮಲ್ಚಿಂಗ್ ಮಾಡಲು₹ 40,000 ಖರ್ಚಾಗಿತ್ತು. ಇದರೊಂದಿಗೆ ಕೂಲಿ, ಗೊಬ್ಬರ, ನಿರ್ವಹಣೆ ಸೇರಿ ಒಟ್ಟು ₹ 6 ಲಕ್ಷ ಖರ್ಚು ಮಾಡಿದ್ದೇನೆ. ಬಂಪರ್ ಬೆಳೆ ಬಂದರೂ ಕರಬೂಜ ಹಣ್ಣಾದಾಗ ಲಾಕ್ಡೌನ್ ಇದ್ದ ಕಾರಣ ಮಾರುಕಟ್ಟೆ ಇಲ್ಲದೇ ಕಟಾವು ಮಾಡಲಾಗಲಿಲ್ಲ. ಈ ಹಣ್ಣನ್ನು 55 ದಿನಗಳಿಗೆ ಕಟಾವು ಮಾಡಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಹೊಲದಲ್ಲಿ ನೀರು ನಿಂತಿತು. ವಾರದವರೆಗೆ ನಿತ್ಯ ಮಳೆ ಬಂದಿದ್ದರಿಂದ ತೇವಾಂಶವೂ ಹೆಚ್ಚಾಗಿ ಹಣ್ಣು ಹೊಲದಲ್ಲಿಯೇ ಕೊಳೆಯುತ್ತಿದೆ’ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.</p>.<p>‘ದೆಹಲಿ, ಮುಂಬೈಯಲ್ಲಿ ಈ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ನಮ್ಮ ಕಡೆ ಮಾವಿನಹಣ್ಣು, ಬಾಳೆಹಣ್ಣು, ತೆಂಗಿನಕಾಯಿ ಕೊಡುವಂತೆ ಉತ್ತರ ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ಫಲ ತಾಂಬೂಲಕ್ಕೆ ಕರಬೂಜ ವಿತರಿಸುತ್ತಾರೆ. ಈಗ ಮದುವೆಗಳೂ ನಿಂತಿರುವುದರಿಂದ ಕರಬೂಜಕ್ಕೆ ಬೆಲೆ ಇಲ್ಲದಂತಾಗಿದೆ. ಕೋವಿಡ್ ಬರುವುದಕ್ಕೂ ಮೊದಲು ಈ ಕರಬೂಜಕ್ಕೆ ಕೆ.ಜಿ.ಗೆ ₹ 40ರಿಂದ₹ 50ರಷ್ಟು ಬೆಲೆ ಇತ್ತು. ಒಂದು ಹಣ್ಣು 2ರಿಂದ 3 ಕೆ.ಜಿ ತೂಗುತ್ತಿತ್ತು. ಮಳೆ ಇಲ್ಲದಿದ್ದರೆ ಸುಮಾರು 100 ಟನ್ ಹಣ್ಣು ಸಿಗುತ್ತಿತ್ತು. ಟನ್ಗೆ ₹ 40,000 ಬೆಲೆ ಸಿಕ್ಕಿದ್ದರೆ₹ 40 ಲಕ್ಷದಷ್ಟು ಆದಾಯ ಬರುತ್ತಿತ್ತು’ ಎನ್ನುತ್ತಾರೆ ಅವರು.</p>.<p>‘ಆರಂಭದಲ್ಲಿ ಮಳೆಯಲ್ಲೇ ಹಣ್ಣು ಕಟಾವು ಮಾಡಿ ₹ 14ಕ್ಕೆ ಒಂದು ಕೆ.ಜಿಯಂತೆ ಒಂದು ಲೋಡ್ ಮಾತ್ರ ಮುಂಬೈಗೆ ಕಳುಹಿಸಿದೆವು. ಬೆಳೆದ ಅರ್ಧಕ್ಕಿಂತ ಹೆಚ್ಚು ಹಣ್ಣು ಬಿರುಕುಬಿಟ್ಟು ಕೊಳೆತಿವೆ. ಉಳಿದ ಹಣ್ಣನ್ನು ಕೆ.ಜಿ.ಗೆ ₹ 5ರಂತೆ ಬೆಂಗಳೂರಿನ ವ್ಯಾಪಾರಿಗಳಿಗೆ ಕೊಟ್ಟಿದ್ದೇನೆ. ಎಲ್ಲ ಸೇರಿ ಕೇವಲ₹ 2 ಲಕ್ಷ ಹಣ ಬಂದಿದೆ. ಇನ್ನೂ₹ 4 ಲಕ್ಷ ಅಸಲು ನಷ್ಟವಾಗಿದೆ’ ಎನ್ನುತ್ತಾರೆ ತಿಪ್ಪೇಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳಲ್ಕೆರೆ: </strong>ತಾಲ್ಲೂಕಿನ ಈಚಘಟ್ಟದ ರೈತ ತಿಪ್ಪೇಸ್ವಾಮಿ ಅವರು ಲಾಕ್ಡೌನ್ನಿಂದ 6 ಎಕರೆ ಹೊಲದಲ್ಲಿ ಕೊಯ್ಯದೇ ಹಾಗೆಯೇ ಬಿಟ್ಟಿದ್ದ ಕೊಹಿನೂರ್ ತಳಿಯ ಕರಬೂಜ ಅಧಿಕ ಮಳೆಯಿಂದಕೊಳೆಯುತ್ತಿದೆ.</p>.<p>‘ವರ್ಷಕ್ಕೆ ₹ 1 ಲಕ್ಷ ಹಣ ನೀಡಿ ಹೊಲವನ್ನು ಗುತ್ತಿಗೆ ಪಡೆದು ಕರಬೂಜ ಬೆಳೆದಿದ್ದೆ. ಕೊಹಿನೂರ್ ತಳಿಯ 1 ಕೆ.ಜಿ. ಕರಬೂಜ ಬೀಜಕ್ಕೆ ₹ 74,000 ಬೆಲೆ ಇದೆ. ₹ 2 ಲಕ್ಷ ಖರ್ಚು ಮಾಡಿ 2.5 ಕೆ.ಜಿ ಬೀಜ ಬಿತ್ತನೆ ಮಾಡಿದ್ದೆ. ಮಲ್ಚಿಂಗ್ ಮಾಡಲು₹ 40,000 ಖರ್ಚಾಗಿತ್ತು. ಇದರೊಂದಿಗೆ ಕೂಲಿ, ಗೊಬ್ಬರ, ನಿರ್ವಹಣೆ ಸೇರಿ ಒಟ್ಟು ₹ 6 ಲಕ್ಷ ಖರ್ಚು ಮಾಡಿದ್ದೇನೆ. ಬಂಪರ್ ಬೆಳೆ ಬಂದರೂ ಕರಬೂಜ ಹಣ್ಣಾದಾಗ ಲಾಕ್ಡೌನ್ ಇದ್ದ ಕಾರಣ ಮಾರುಕಟ್ಟೆ ಇಲ್ಲದೇ ಕಟಾವು ಮಾಡಲಾಗಲಿಲ್ಲ. ಈ ಹಣ್ಣನ್ನು 55 ದಿನಗಳಿಗೆ ಕಟಾವು ಮಾಡಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಹೊಲದಲ್ಲಿ ನೀರು ನಿಂತಿತು. ವಾರದವರೆಗೆ ನಿತ್ಯ ಮಳೆ ಬಂದಿದ್ದರಿಂದ ತೇವಾಂಶವೂ ಹೆಚ್ಚಾಗಿ ಹಣ್ಣು ಹೊಲದಲ್ಲಿಯೇ ಕೊಳೆಯುತ್ತಿದೆ’ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.</p>.<p>‘ದೆಹಲಿ, ಮುಂಬೈಯಲ್ಲಿ ಈ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ನಮ್ಮ ಕಡೆ ಮಾವಿನಹಣ್ಣು, ಬಾಳೆಹಣ್ಣು, ತೆಂಗಿನಕಾಯಿ ಕೊಡುವಂತೆ ಉತ್ತರ ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ಫಲ ತಾಂಬೂಲಕ್ಕೆ ಕರಬೂಜ ವಿತರಿಸುತ್ತಾರೆ. ಈಗ ಮದುವೆಗಳೂ ನಿಂತಿರುವುದರಿಂದ ಕರಬೂಜಕ್ಕೆ ಬೆಲೆ ಇಲ್ಲದಂತಾಗಿದೆ. ಕೋವಿಡ್ ಬರುವುದಕ್ಕೂ ಮೊದಲು ಈ ಕರಬೂಜಕ್ಕೆ ಕೆ.ಜಿ.ಗೆ ₹ 40ರಿಂದ₹ 50ರಷ್ಟು ಬೆಲೆ ಇತ್ತು. ಒಂದು ಹಣ್ಣು 2ರಿಂದ 3 ಕೆ.ಜಿ ತೂಗುತ್ತಿತ್ತು. ಮಳೆ ಇಲ್ಲದಿದ್ದರೆ ಸುಮಾರು 100 ಟನ್ ಹಣ್ಣು ಸಿಗುತ್ತಿತ್ತು. ಟನ್ಗೆ ₹ 40,000 ಬೆಲೆ ಸಿಕ್ಕಿದ್ದರೆ₹ 40 ಲಕ್ಷದಷ್ಟು ಆದಾಯ ಬರುತ್ತಿತ್ತು’ ಎನ್ನುತ್ತಾರೆ ಅವರು.</p>.<p>‘ಆರಂಭದಲ್ಲಿ ಮಳೆಯಲ್ಲೇ ಹಣ್ಣು ಕಟಾವು ಮಾಡಿ ₹ 14ಕ್ಕೆ ಒಂದು ಕೆ.ಜಿಯಂತೆ ಒಂದು ಲೋಡ್ ಮಾತ್ರ ಮುಂಬೈಗೆ ಕಳುಹಿಸಿದೆವು. ಬೆಳೆದ ಅರ್ಧಕ್ಕಿಂತ ಹೆಚ್ಚು ಹಣ್ಣು ಬಿರುಕುಬಿಟ್ಟು ಕೊಳೆತಿವೆ. ಉಳಿದ ಹಣ್ಣನ್ನು ಕೆ.ಜಿ.ಗೆ ₹ 5ರಂತೆ ಬೆಂಗಳೂರಿನ ವ್ಯಾಪಾರಿಗಳಿಗೆ ಕೊಟ್ಟಿದ್ದೇನೆ. ಎಲ್ಲ ಸೇರಿ ಕೇವಲ₹ 2 ಲಕ್ಷ ಹಣ ಬಂದಿದೆ. ಇನ್ನೂ₹ 4 ಲಕ್ಷ ಅಸಲು ನಷ್ಟವಾಗಿದೆ’ ಎನ್ನುತ್ತಾರೆ ತಿಪ್ಪೇಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>