‘ವರ್ಷಕ್ಕೆ ₹ 1 ಲಕ್ಷ ಹಣ ನೀಡಿ ಹೊಲವನ್ನು ಗುತ್ತಿಗೆ ಪಡೆದು ಕರಬೂಜ ಬೆಳೆದಿದ್ದೆ. ಕೊಹಿನೂರ್ ತಳಿಯ 1 ಕೆ.ಜಿ. ಕರಬೂಜ ಬೀಜಕ್ಕೆ ₹ 74,000 ಬೆಲೆ ಇದೆ. ₹ 2 ಲಕ್ಷ ಖರ್ಚು ಮಾಡಿ 2.5 ಕೆ.ಜಿ ಬೀಜ ಬಿತ್ತನೆ ಮಾಡಿದ್ದೆ. ಮಲ್ಚಿಂಗ್ ಮಾಡಲು₹ 40,000 ಖರ್ಚಾಗಿತ್ತು. ಇದರೊಂದಿಗೆ ಕೂಲಿ, ಗೊಬ್ಬರ, ನಿರ್ವಹಣೆ ಸೇರಿ ಒಟ್ಟು ₹ 6 ಲಕ್ಷ ಖರ್ಚು ಮಾಡಿದ್ದೇನೆ. ಬಂಪರ್ ಬೆಳೆ ಬಂದರೂ ಕರಬೂಜ ಹಣ್ಣಾದಾಗ ಲಾಕ್ಡೌನ್ ಇದ್ದ ಕಾರಣ ಮಾರುಕಟ್ಟೆ ಇಲ್ಲದೇ ಕಟಾವು ಮಾಡಲಾಗಲಿಲ್ಲ. ಈ ಹಣ್ಣನ್ನು 55 ದಿನಗಳಿಗೆ ಕಟಾವು ಮಾಡಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಹೊಲದಲ್ಲಿ ನೀರು ನಿಂತಿತು. ವಾರದವರೆಗೆ ನಿತ್ಯ ಮಳೆ ಬಂದಿದ್ದರಿಂದ ತೇವಾಂಶವೂ ಹೆಚ್ಚಾಗಿ ಹಣ್ಣು ಹೊಲದಲ್ಲಿಯೇ ಕೊಳೆಯುತ್ತಿದೆ’ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.