‘ಸುಮಾರು15-20 ವರ್ಷಗಳಿಂದ ಇಲ್ಲಿ ಕಷ್ಟ ಪಡುತ್ತಿದ್ದೇವೆ. ಕೂಲಿ ಕಾರ್ಮಿಕರನ್ನು ಕರೆದೊಯ್ದು ಜಮೀನು ಸೇರಲು 1 ಗಂಟೆ ಬೇಕಾಗುತ್ತದೆ. ಓಡಾಡಲು ಹೆಚ್ಚು ಸಮಯ ನಷ್ಟವಾಗುವ ಕಾರಣ ಜಮೀನಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಊಟ ನೀರು ಸೇರಿದಂತೆ ಇತರ ಸಾಮಾನು ತೆಗೆದುಕೊಂಡು ಹೋಗುವವರು, ಒಬ್ಬರ ಕೈ ಮತ್ತುಬ್ಬರು ಹಿಡಿದುಕೊಂಡು, ಜೀವ ಬಿಗಿ ಹಿಡಿದುಕೊಂಡು ಓಡಾಡುವಂಥ ದುಃಸ್ಥಿತಿ ಬಂದಿದೆ. ಇನ್ನಾದರೂ ಒಂದು ಸೇತುವೆ ನಿರ್ಮಿಸಿ ಓಡಾಡಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು ಮಳಲಿಯ ತೀರ್ಥಪ್ಪ.