‘ಒಂದು ವಾರದಿಂದ ನೀರು ಕೊಡಿ ಎಂದು ಪಂಚಾಯಿತಿಯವರನ್ನು ಕೇಳಿದ್ದೇವೆ. ಟ್ಯಾಂಕರ್ನಲ್ಲಿ ಕೊಡುತ್ತೇವೆ ಎನ್ನುತ್ತಾರೆ. ಯಾವ ಬೀದಿಗೆ ಟ್ಯಾಂಕರ್ ಹೋಗಿದೆ ಎಂಬುದೇ ತಿಳಿಯುತ್ತಿಲ್ಲ. ಸೈಕಲ್, ಬೈಕುಗಳಿಗೆ ಪ್ಲಾಸ್ಟಿಕ್ ಕೊಡಗಳನ್ನು ನೇತುಹಾಕಿಕೊಂಡು ಗ್ರಾಮದ ಹತ್ತಿರ ಇರುವ ತೋಟಗಳಿಗೆ ಹೋದರೆ, ‘ಅವರು ನೀರು ಕೊಡಲೊಲ್ಲರು, ಗ್ರಾಮಸ್ಥರು ಬಿಡಲೊಲ್ಲರು’ ಎಂಬಂತಹ ಪರಿಸ್ಥಿತಿ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಒಂದಿಂಚು, ಅರ್ಧ ಇಂಚು ನೀರು ಬರುತ್ತದೆ. ಬೆಸ್ಕಾಂ ಕೊಡುವ ಕರೆಂಟಿನಲ್ಲಿ ತೋಟ ಉಳಿಸಿಕೊಳ್ಳಬೇಕೊ, ಜನರ ದಾಹ ನೀಗಿಸಬೇಕೊ ಎಂದು ತೋಟದ ಮಾಲೀಕರು ಪ್ರಶ್ನಿಸುತ್ತಾರೆ. ಅವರ ಕಷ್ಟ ಅವರಿಗೆ. ನೀರಿಲ್ಲದೆ ನಾಗಪ್ಪನ ಹಬ್ಬ ಮಾಡೋದಕ್ಕೂ ಕಷ್ಟ ಆಗಿದೆ' ಎನ್ನುತ್ತಾರೆ ಗ್ರಾಮದ ಹಿರಿಯ ಮಹಿಳೆ ಶಕುಂತಲಮ್ಮ.