<p><strong>ಧರ್ಮಪುರ</strong>: ಧರ್ಮಪುರ ಕೆರೆಗೆ ನೀರು ಹರಿಸುವುದರಿಂದ ನೂರು ವರ್ಷದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದ್ದು, ಗುಳೇ ಹೋಗಿರುವಜನರು ಮತ್ತೆ ವಾಪಸ್ ಬಂದು ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಲಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ಹೇಳಿದರು.</p>.<p>ಇಲ್ಲಿನ ನಾಡಕಚೇರಿ ಆವರಣದಲ್ಲಿ ನೀರಾವರಿ ಹೋರಾಟಗಾರ ಎಚ್.ಎಲ್.ಗುಣ್ಣಯ್ಯ ವೇದಿಕೆಯಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಭೂಮಿಪೂಜೆಗೆ ಮುಖ್ಯಮಂತ್ರಿ ಜೂನ್ 4ರಂದು ಬರುತ್ತಿರುವ ಕಾರಣಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.</p>.<p>‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ಬರಲಿದ್ದು, ಹೊಸಹಳ್ಳಿ ಬ್ಯಾರೇಜ್ನಿಂದ 13 ಕಿ.ಮೀ. ದೂರದ ಐತಿಹಾಸಿಕ ಧರ್ಮಪುರ ಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಹಾಗೂ ಸಚಿವರ ಸಹಕಾರದಿಂದ ₹ 90 ಕೋಟಿ ಅನುದಾನಕ್ಕೆ ಅನುಮೋದನೆ ಪಡೆಯಲಾಗಿದೆ.ಕೆಲ ವಿರೋಧಿಗಳು ಡಿಪಿಆರ್ ಆಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಅದಕ್ಕೆ ಕಿವಿಗೊಡಬೇಡಿ. ಕೆರೆಗೆ ನೀರು ಹರಿಯುವುದುಖಚಿತ’<br />ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಧರ್ಮಪುರ ಕೆರೆ ಪ್ರವಾಸಿ ತಾಣವಾಗಲಿದೆ. ವಾಣಿವಿಲಾಸಸಾಗರದಿಂದ ತಾಲ್ಲೂಕಿನ 131 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ₹ 305 ಕೋಟಿ ಟೆಂಡರ್ ಆಗಿದೆ. ಎಲ್ಲಾ ಹಳ್ಳಿಗಳಿಗೂ<br />ವಾಣಿವಿಲಾಸ ಸಾಗರದ ನೀರು ಪೂರೈಕೆಯಾಗಲಿದೆ. ಗಾಯಿತ್ರಿ ಜಲಾಶಯಕ್ಕೆ ₹ 276 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುವುದು. ಮಿನಿ ವಿಧಾನಸೌಧದ ಕಾಮಗಾರಿಗೂ ಭೂಮಿಪೂಜೆ ನೆರವೇರಲಿದೆ’ ಎಂದು ತಿಳಿಸಿದರು.</p>.<p>ಪ್ರವರ್ಗ 1ರ ವೇದಿಕೆ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ‘ಧರ್ಮಪುರ ಕೆರೆಯಿಂದ ಮತ್ತೆ ಬೇರೆ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಯೋಜನೆಯೂ ಇದೆ’ ಎಂದರು.</p>.<p>ಹಾರ್ಡ್ವೇರ್ ಶಿವಣ್ಣ, ಮದ್ದಿಹಳ್ಳಿ ದೊಡ್ಡಯ್ಯ, ಕಸವನಹಳ್ಳಿ ರಮೇಶ್, ಮೊಹಿನುದ್ದೀನ್, ಎಂ,ಶಿವಣ್ಣ, ಡಾ.ಎಂ.ಜಿ.ಗೋವಿಂದಯ್ಯ, ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ಸತ್ಯನಾರಾಯಣಗೌಡ, ಗಿರೀಶ್, ಶಿವಕುಮಾರ್ ಮಾತನಾಡಿದರು.</p>.<p>ಓಬಳೇಶ್, ಶ್ರೀರಂಗಮ್ಮ, ಸುರೇಶ್, ಸಿಪಿಐ ರಾಘವೇಂದ್ರ, ರವಿಶಂಕರ್, ರಂಗನಾಥ್, ಗಿರಿಜಮ್ಮ, ನಾಗರಾಜರಾವ್, ಸುರೇಶ್, ಶ್ರೀನಿವಾಸ್, ರಮೇಶ್, ಅಸ್ಲಾಂಖಾನ್, ವೀರಣ್ಣ, ನಿರಂಜನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಪುರ</strong>: ಧರ್ಮಪುರ ಕೆರೆಗೆ ನೀರು ಹರಿಸುವುದರಿಂದ ನೂರು ವರ್ಷದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದ್ದು, ಗುಳೇ ಹೋಗಿರುವಜನರು ಮತ್ತೆ ವಾಪಸ್ ಬಂದು ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಲಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ಹೇಳಿದರು.</p>.<p>ಇಲ್ಲಿನ ನಾಡಕಚೇರಿ ಆವರಣದಲ್ಲಿ ನೀರಾವರಿ ಹೋರಾಟಗಾರ ಎಚ್.ಎಲ್.ಗುಣ್ಣಯ್ಯ ವೇದಿಕೆಯಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಭೂಮಿಪೂಜೆಗೆ ಮುಖ್ಯಮಂತ್ರಿ ಜೂನ್ 4ರಂದು ಬರುತ್ತಿರುವ ಕಾರಣಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.</p>.<p>‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ಬರಲಿದ್ದು, ಹೊಸಹಳ್ಳಿ ಬ್ಯಾರೇಜ್ನಿಂದ 13 ಕಿ.ಮೀ. ದೂರದ ಐತಿಹಾಸಿಕ ಧರ್ಮಪುರ ಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಹಾಗೂ ಸಚಿವರ ಸಹಕಾರದಿಂದ ₹ 90 ಕೋಟಿ ಅನುದಾನಕ್ಕೆ ಅನುಮೋದನೆ ಪಡೆಯಲಾಗಿದೆ.ಕೆಲ ವಿರೋಧಿಗಳು ಡಿಪಿಆರ್ ಆಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಅದಕ್ಕೆ ಕಿವಿಗೊಡಬೇಡಿ. ಕೆರೆಗೆ ನೀರು ಹರಿಯುವುದುಖಚಿತ’<br />ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಧರ್ಮಪುರ ಕೆರೆ ಪ್ರವಾಸಿ ತಾಣವಾಗಲಿದೆ. ವಾಣಿವಿಲಾಸಸಾಗರದಿಂದ ತಾಲ್ಲೂಕಿನ 131 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ₹ 305 ಕೋಟಿ ಟೆಂಡರ್ ಆಗಿದೆ. ಎಲ್ಲಾ ಹಳ್ಳಿಗಳಿಗೂ<br />ವಾಣಿವಿಲಾಸ ಸಾಗರದ ನೀರು ಪೂರೈಕೆಯಾಗಲಿದೆ. ಗಾಯಿತ್ರಿ ಜಲಾಶಯಕ್ಕೆ ₹ 276 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುವುದು. ಮಿನಿ ವಿಧಾನಸೌಧದ ಕಾಮಗಾರಿಗೂ ಭೂಮಿಪೂಜೆ ನೆರವೇರಲಿದೆ’ ಎಂದು ತಿಳಿಸಿದರು.</p>.<p>ಪ್ರವರ್ಗ 1ರ ವೇದಿಕೆ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ‘ಧರ್ಮಪುರ ಕೆರೆಯಿಂದ ಮತ್ತೆ ಬೇರೆ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಯೋಜನೆಯೂ ಇದೆ’ ಎಂದರು.</p>.<p>ಹಾರ್ಡ್ವೇರ್ ಶಿವಣ್ಣ, ಮದ್ದಿಹಳ್ಳಿ ದೊಡ್ಡಯ್ಯ, ಕಸವನಹಳ್ಳಿ ರಮೇಶ್, ಮೊಹಿನುದ್ದೀನ್, ಎಂ,ಶಿವಣ್ಣ, ಡಾ.ಎಂ.ಜಿ.ಗೋವಿಂದಯ್ಯ, ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ಸತ್ಯನಾರಾಯಣಗೌಡ, ಗಿರೀಶ್, ಶಿವಕುಮಾರ್ ಮಾತನಾಡಿದರು.</p>.<p>ಓಬಳೇಶ್, ಶ್ರೀರಂಗಮ್ಮ, ಸುರೇಶ್, ಸಿಪಿಐ ರಾಘವೇಂದ್ರ, ರವಿಶಂಕರ್, ರಂಗನಾಥ್, ಗಿರಿಜಮ್ಮ, ನಾಗರಾಜರಾವ್, ಸುರೇಶ್, ಶ್ರೀನಿವಾಸ್, ರಮೇಶ್, ಅಸ್ಲಾಂಖಾನ್, ವೀರಣ್ಣ, ನಿರಂಜನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>