ಕಲ್ಯಾಶೇರಿಯ ಪಾರಕವು ನಿವಾಸಿ 92 ವರ್ಷದ ದೇವಿ ಎಂಬುವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಅವರ ಬದಲಾಗಿ ಕಲ್ಯಾಶೇರಿಯ ಸಿಪಿಎಂ ಶಾಖೆಯ ಮಾಜಿ ಕಾರ್ಯದರ್ಶಿ ಮತ್ತು ಬೂತ್ ಏಜೆಂಟ್ ಗಣೇಶನ್ ಎಂಬುವರು ಮತದಾನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದನ್ನು ಪರಿಶೀಲಿಸಿ ಅಂದು ಕರ್ತವ್ಯದಲ್ಲಿದ್ದ 4 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕಣ್ಣೂರು ಜಿಲ್ಲಾಧಿಕಾರಿ ಕೆ.ವಿಜಯನ್ ತಿಳಿಸಿದರು.