ಆದರೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಸುರತ್ಕಲ್ ಭಾಗದಲ್ಲಿ ವಿದ್ಯುತ್ ಚಿತಾಗಾರದ ಕೊರತೆ ಇದ್ದು, ಇದೀಗ ಹೊಸ ಚಿತಾಗಾರ ನಿರ್ಮಾಣ ಮಾಡಬೇಕು ಎಂದು ಮೇಯರ್ ದಿವಾಕರ ಪಾಂಡೇಶ್ವರ ಪ್ರಸ್ತಾವ ಸಲ್ಲಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದ್ದು, ಇದರಿಂದ ಸುರತ್ಕಲ್ ಭಾಗದ ಕೊರತೆಯನ್ನು ನೀಗಿಸಿದಂತಾಗಲಿದೆ ಎಂದು ತಿಳಿಸಿದ್ದಾರೆ.