ಮಂಗಳೂರು: ‘ಸಿದ್ದರಾಮಯ್ಯ ಅವರು ‘ಮೋದಿ ಅಲೆ ಎಲ್ಲಿದೆ’ ಎಂದು ಕೇಳುತ್ತಿದ್ದರು. ಈಗ ಜನರು ಪ್ರಶ್ನಿಸುತ್ತಿದ್ದಾರೆ ‘ಸಿದ್ದರಾಮಣ್ಣನ ಗೂಡೆಲ್ಲಿದೆ? ‘ವರುಣ’ದಿಂದ ಆಗಲೇ ಹೊರಗಟ್ಟಿ ಆಗಿದೆ. ಆರ್.ಆರ್.ನಗರ, ಶಿರಾದಿಂದಲೂ ಹೊರಗೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಬಾದಾಮಿಯಿಂದಲೂ ಜನರು ನಿಮ್ಮನ್ನು ಹೊರಗಿಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿರುಗೇಟು ನೀಡಿದರು.