ಮಂಗಳೂರು: ಕ್ರೈಸ್ತರು ಮತ್ತು ಹಿಂದುಗಳಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಸಾಮರಸ್ಯದ ಸಂಬಂಧವಿದೆ ಎಂಬುದನ್ನು ಬಹುತೇಕ ಮಂದಿ ತಿಳಿದುಕೊಂಡಿಲ್ಲ. ಯೇಸುಕ್ರಿಸ್ತ ಮತ್ತು ಕೃಷ್ಣನ ಜನನದ ಸಂದರ್ಭ ಒಂದೇ ರೀತಿ ಇದೆ ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಾಲಯದ ಆಡಳಿತ ಸಮಿತಿ ಮುಖ್ಯಸ್ಥ ಮೋಹನ್ದಾಸ್ ಸುರತ್ಕಲ್ ಅಭಿಪ್ರಾಯಪಟ್ಟರು.