‘ಈ ಬಗ್ಗೆ, ರವಿರಾಜ್ ದಳವಾಯಿ ಒಂದು ದಿನ ಯು.ಟಿ.ಖಾದರ್ ಬಳಿ ವಿಜ್ಞಾಪಿಸಿದ್ದರು. ಇದಕ್ಕೆ ಸ್ಪಂದಿಸಿದ ಖಾದರ್, ತಮ್ಮ ಅಡಿಕೆ ತೋಟದ ನಾಗಬನ, ನೀರಿನ ಬಾವಿ ಸೇರಿದಂತೆ ಸುಮಾರು 20 ಸೆಂಟ್ಸ್ ಸ್ಥಳವನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. 2010ರ ಮಾರ್ಚ್ 10ರಂದು ರವಿರಾಜ್ ದಳವಾಯಿ ಕುಟುಂಬದಿಂದ ಇಲ್ಲಿ ನಾಗಬ್ರಹ್ಮಸ್ಥಾನದ ನವೀಕರಣ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದ್ದು, ಪ್ರತಿ ವರ್ಷ ನಾಗರ ಪಂಚಮಿ ನಡೆಯುತ್ತ ಬಂದಿದೆ ’ ಎಂದು ರಶೀದ್ ವಿಟ್ಲ ತಿಳಿಸಿದರು.