ಮುಡಿಪು: ‘ಯಾವ ತಂತ್ರಜ್ಞಾನದ ಯಾಂತ್ರಿಕೃತ ಬದುಕು ನಮಗೆ ಶ್ರೀಮಂತಿಕೆ, ಪ್ರಗತಿಯನ್ನು ತಂದು ಕೊಟ್ಟಿತೋ ಅದೇ ಪ್ರಗತಿ ನಮಗೆ ಅರಿವಾಗದಂತೆ ನಮ್ಮನ್ನು ನಾಶ ಮಾಡುತ್ತಿವೆ. ಪ್ರೀತಿಯ, ಸಹಬಾಳ್ವೆಯ, ಆರೋಗ್ಯಕರ ಬದುಕಿಗಾಗಿ ಯಾಂತ್ರಿಕ ಬದುಕು ದೂರವಾಗಿ ಕಾಯಕದ ಬದುಕು ಮರಳಬೇಕು. ಕಾಯಕ ಪ್ರಣೀತ ಬದುಕು ನಮ್ಮದಾಗಬೇಕು’ ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದರು.