<p><strong>ಮಂಗಳೂರು</strong>: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣದ ಸಾಕ್ಷಿ ದೂರುದಾರ<br>ನನ್ನು ಶಿವಮೊಗ್ಗದ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ.</p>.<p>ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳು ಎರಡು ದಿನಗಳ ಕಾಲ ಶಿವಮೊಗ್ಗದಲ್ಲೇ ಉಳಿದುಕೊಂಡು ಸಾಕ್ಷಿ ದೂರುದಾರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.</p>.<p>‘ವಿಚಾರಣೆ ವೇಳೆ, ಸಾಕ್ಷಿ ದೂರುದಾರನಿಂದ ಅನೇಕ ಹೊಸ ಮಾಹಿತಿಗಳನ್ನು ಎಸ್ಐಟಿ ಕಲೆಹಾಕಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 183ರ ಅಡಿ ಸಾಕ್ಷಿ ದೂರುದಾರ ನ್ಯಾಯಾಧೀಶರ ಸಮ್ಮುಖದಲ್ಲಿ ನೀಡಿದ್ದ ಹೇಳಿಕೆಯಲ್ಲಿ ಹಾಗೂ ಎಸ್ಐಟಿ ತನಿಖೆ ವೇಳೆ ಉಲ್ಲೇಖಿಸಿದ್ದಂತೆ, ಆತ ಈ ಹಿಂದೆ 10 ಮೃತದೇಹಗಳನ್ನು ಹೂತುಹಾಕಿರುವ ಕುರಿತ ಮಹತ್ವದ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ’ ಎಂದು ಮೂಲಗಳು ತಿಳಿಸಿವೆ. </p>.<p>‘ಮುಂದಿನ ಹಂತದ ತನಿಖೆಯನ್ನು ನಿರ್ವಹಿಸಲು ಅಗತ್ಯವಿರುವ ಸಾಕಷ್ಟು ಪುರಾವೆ ಲಭ್ಯ<br>ವಾಗಿದೆ. ಆತನ ವಿಚಾರಣೆ ಪೂರ್ಣಗೊಂಡಿದೆ. ಹೆಚ್ಚುವರಿ ಮಾಹಿತಿ, ಸ್ಪಷ್ಟನೆಯ ಅಗತ್ಯ ಬಿದ್ದರೆ ಎಸ್ಐಟಿಯು ಕೋರ್ಟ್ ಅನುಮತಿ ಪಡೆದು ಸಾಕ್ಷಿ ದೂರುದಾರನನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿದೆ’ ಎಂದು ಮೂಲಗಳು ಹೇಳಿವೆ. </p>.<p>ತನಿಖೆಯ ಮುಂದಿನ ಹಂತದಲ್ಲಿ ಇದುವರೆಗಿನ ವಿಚಾರಣೆ ವೇಳೆ ಕಲೆ ಹಾಕಿರುವ ಮಾಹಿತಿಗಳನ್ನು ಖಾತರಿಪಡಿಸಿಕೊಳ್ಳುವುದಕ್ಕೆ ಹಾಗೂ ಅವುಗಳ ವಿಶ್ಲೇಷಣೆಗೆ ಗಮನ ವಹಿಸಲಾಗುತ್ತದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ 10 ಸಾವುಗಳು ಅಥವಾ ಮೃತದೇಹ ಹೂತು ಹಾಕಿದ ಪ್ರಕರಣಗಳು ಅಸಹಜ ಸಾವುಗಳು ಹೌದೋ ಅಲ್ಲವೋ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಈ ಸಲುವಾಗಿ ಎಸ್ಐಟಿ ಕೆಲ ಪೊಲೀಸ್ ಸಿಬ್ಬಂದಿಯನ್ನು, ವೈದ್ಯಕೀಯ ಅಧಿಕಾರಿಗಳನ್ನು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಇತರರನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಗೊತ್ತಾಗಿದೆ.</p>.<p>‘ವಿಚಾರಣೆ ಸಂದರ್ಭದಲ್ಲಿ ನಮಗೆ ಕೆಲವು ಬಲವಾದ ಸುಳಿವುಗಳು ಸಿಕ್ಕಿವೆ. ಇವು ಮುಂದಿನ ಹಂತದ ತನಿಖೆಯಲ್ಲಿ ಉಪಯುಕ್ತವಾಗಲಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.</p>.ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ವಿಚಾರಣೆಗೆ ಅನುಮತಿ.ಧರ್ಮಸ್ಥಳ ಪ್ರಕರಣ | ಮತ್ತೆ ಸಾಕ್ಷಿದೂರುದಾರನ ವಿಚಾರಣೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣದ ಸಾಕ್ಷಿ ದೂರುದಾರ<br>ನನ್ನು ಶಿವಮೊಗ್ಗದ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ.</p>.<p>ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳು ಎರಡು ದಿನಗಳ ಕಾಲ ಶಿವಮೊಗ್ಗದಲ್ಲೇ ಉಳಿದುಕೊಂಡು ಸಾಕ್ಷಿ ದೂರುದಾರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.</p>.<p>‘ವಿಚಾರಣೆ ವೇಳೆ, ಸಾಕ್ಷಿ ದೂರುದಾರನಿಂದ ಅನೇಕ ಹೊಸ ಮಾಹಿತಿಗಳನ್ನು ಎಸ್ಐಟಿ ಕಲೆಹಾಕಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 183ರ ಅಡಿ ಸಾಕ್ಷಿ ದೂರುದಾರ ನ್ಯಾಯಾಧೀಶರ ಸಮ್ಮುಖದಲ್ಲಿ ನೀಡಿದ್ದ ಹೇಳಿಕೆಯಲ್ಲಿ ಹಾಗೂ ಎಸ್ಐಟಿ ತನಿಖೆ ವೇಳೆ ಉಲ್ಲೇಖಿಸಿದ್ದಂತೆ, ಆತ ಈ ಹಿಂದೆ 10 ಮೃತದೇಹಗಳನ್ನು ಹೂತುಹಾಕಿರುವ ಕುರಿತ ಮಹತ್ವದ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ’ ಎಂದು ಮೂಲಗಳು ತಿಳಿಸಿವೆ. </p>.<p>‘ಮುಂದಿನ ಹಂತದ ತನಿಖೆಯನ್ನು ನಿರ್ವಹಿಸಲು ಅಗತ್ಯವಿರುವ ಸಾಕಷ್ಟು ಪುರಾವೆ ಲಭ್ಯ<br>ವಾಗಿದೆ. ಆತನ ವಿಚಾರಣೆ ಪೂರ್ಣಗೊಂಡಿದೆ. ಹೆಚ್ಚುವರಿ ಮಾಹಿತಿ, ಸ್ಪಷ್ಟನೆಯ ಅಗತ್ಯ ಬಿದ್ದರೆ ಎಸ್ಐಟಿಯು ಕೋರ್ಟ್ ಅನುಮತಿ ಪಡೆದು ಸಾಕ್ಷಿ ದೂರುದಾರನನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿದೆ’ ಎಂದು ಮೂಲಗಳು ಹೇಳಿವೆ. </p>.<p>ತನಿಖೆಯ ಮುಂದಿನ ಹಂತದಲ್ಲಿ ಇದುವರೆಗಿನ ವಿಚಾರಣೆ ವೇಳೆ ಕಲೆ ಹಾಕಿರುವ ಮಾಹಿತಿಗಳನ್ನು ಖಾತರಿಪಡಿಸಿಕೊಳ್ಳುವುದಕ್ಕೆ ಹಾಗೂ ಅವುಗಳ ವಿಶ್ಲೇಷಣೆಗೆ ಗಮನ ವಹಿಸಲಾಗುತ್ತದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ 10 ಸಾವುಗಳು ಅಥವಾ ಮೃತದೇಹ ಹೂತು ಹಾಕಿದ ಪ್ರಕರಣಗಳು ಅಸಹಜ ಸಾವುಗಳು ಹೌದೋ ಅಲ್ಲವೋ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಈ ಸಲುವಾಗಿ ಎಸ್ಐಟಿ ಕೆಲ ಪೊಲೀಸ್ ಸಿಬ್ಬಂದಿಯನ್ನು, ವೈದ್ಯಕೀಯ ಅಧಿಕಾರಿಗಳನ್ನು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಇತರರನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಗೊತ್ತಾಗಿದೆ.</p>.<p>‘ವಿಚಾರಣೆ ಸಂದರ್ಭದಲ್ಲಿ ನಮಗೆ ಕೆಲವು ಬಲವಾದ ಸುಳಿವುಗಳು ಸಿಕ್ಕಿವೆ. ಇವು ಮುಂದಿನ ಹಂತದ ತನಿಖೆಯಲ್ಲಿ ಉಪಯುಕ್ತವಾಗಲಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.</p>.ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ವಿಚಾರಣೆಗೆ ಅನುಮತಿ.ಧರ್ಮಸ್ಥಳ ಪ್ರಕರಣ | ಮತ್ತೆ ಸಾಕ್ಷಿದೂರುದಾರನ ವಿಚಾರಣೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>