<p><strong>ಮಂಗಳೂರು:</strong> ‘ಧರ್ಮಸ್ಥಳ ಗ್ರಾಮದ ಬೂರ್ಜೆಯಲ್ಲಿ 2012ರ ಸೆ. 21ರಂದು ನಡೆದಿದ್ದ ಜೋಡಿ ಕೊಲೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಸ್ಐಟಿ ಕಚೇರಿಗೆ ದೂರು ನೀಡಲಾಗಿದೆ.</p>.<p>ಬೂರ್ಜೆಯಲ್ಲಿ ವಾಸವಿದ್ದ ನಾರಾಯಣ, ಅವರ ಸೋದರಿ ಯಮುನಾ 2012 ಸೆ. 21ರಂದು ಕೊಲೆಯಾಗಿತ್ತುಎಂದು ದಿ.ನಾರಾಯಣ ಅವರ ಮಕ್ಕಳಾದ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟುವಿನ ಗಣೇಶ ಹಾಗೂ ಭಾರತಿ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ದೂರು ನೀಡಿದರು. </p>.<p>‘ಕೊಲೆಯಾಗುವ ಐದು ವರ್ಷಗಳಿಂದ ಆ ಮನೆ ತೆರವಿಗೆ ಒತ್ತಾಯಿಸಿ ಸ್ಥಳೀಯ ಪ್ರಭಾವಿಯೊಬ್ಬರು ಜೀವ ಬೆದರಿಕೆ ಹಾಕಿದ್ದರು. ತಂದೆಗೆ ಎರಡು ಸಲ ಹಲ್ಲೆ ಮಾಡಲಾಗಿತ್ತು. 2012ರ ಸೆ. 20ರ ಸಂಜೆ ಆ ಪ್ರಭಾವಿ, ಮನೆಗೆ ಬಂದು, ‘ಮನೆ ತೆರವುಗೊಳಿಸದಿದ್ದರೆ ಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.</p>.<p>‘ತಂದೆಗೆ ಯಾರೂ ವಿರೋಧಿಗಳಿರಲಿಲ್ಲ. ತಂದೆ ದಾಸವಾಗಿದ್ದ ಮನೆ ಮತ್ತು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.</p>.<p>‘ಕೊಲೆಯಾದ ಮೂರು ದಿನ್ಗ ನಾವು ಆ ಪ್ರಭಾವಿಯ ಅಣ್ಣನನ್ನು ಖುದ್ದು ಭೇಟಿಯಾಗಿ ವಿಷಯ ತಿಳಿಸಿದಾಗ, ‘ಆಗಿದ್ದು ಆಗಿ ಹೋಯ್ತು. ಆ ವಿಷಯ ಬಿಟ್ಟು ಬಿಡಿ’ ಎಂದಿದ್ದರು ಎಂದು ಉಲ್ಲೆಖಿಸಿದ್ದಾರೆ.</p>.<p>‘ಈ ಪ್ರಕರಣ ಸಂಬಂಧ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದರೂ, ಸರಿಯಾದ ಸ್ಪಂದನೆ ಸಿಕ್ಕಿಲ್ಲ. ನಮಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ‘ಧರ್ಮಸ್ಥಳ ಗ್ರಾಮದ ಬೂರ್ಜೆಯಲ್ಲಿ 2012ರ ಸೆ. 21ರಂದು ನಡೆದಿದ್ದ ಜೋಡಿ ಕೊಲೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಸ್ಐಟಿ ಕಚೇರಿಗೆ ದೂರು ನೀಡಲಾಗಿದೆ.</p>.<p>ಬೂರ್ಜೆಯಲ್ಲಿ ವಾಸವಿದ್ದ ನಾರಾಯಣ, ಅವರ ಸೋದರಿ ಯಮುನಾ 2012 ಸೆ. 21ರಂದು ಕೊಲೆಯಾಗಿತ್ತುಎಂದು ದಿ.ನಾರಾಯಣ ಅವರ ಮಕ್ಕಳಾದ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟುವಿನ ಗಣೇಶ ಹಾಗೂ ಭಾರತಿ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ದೂರು ನೀಡಿದರು. </p>.<p>‘ಕೊಲೆಯಾಗುವ ಐದು ವರ್ಷಗಳಿಂದ ಆ ಮನೆ ತೆರವಿಗೆ ಒತ್ತಾಯಿಸಿ ಸ್ಥಳೀಯ ಪ್ರಭಾವಿಯೊಬ್ಬರು ಜೀವ ಬೆದರಿಕೆ ಹಾಕಿದ್ದರು. ತಂದೆಗೆ ಎರಡು ಸಲ ಹಲ್ಲೆ ಮಾಡಲಾಗಿತ್ತು. 2012ರ ಸೆ. 20ರ ಸಂಜೆ ಆ ಪ್ರಭಾವಿ, ಮನೆಗೆ ಬಂದು, ‘ಮನೆ ತೆರವುಗೊಳಿಸದಿದ್ದರೆ ಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.</p>.<p>‘ತಂದೆಗೆ ಯಾರೂ ವಿರೋಧಿಗಳಿರಲಿಲ್ಲ. ತಂದೆ ದಾಸವಾಗಿದ್ದ ಮನೆ ಮತ್ತು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.</p>.<p>‘ಕೊಲೆಯಾದ ಮೂರು ದಿನ್ಗ ನಾವು ಆ ಪ್ರಭಾವಿಯ ಅಣ್ಣನನ್ನು ಖುದ್ದು ಭೇಟಿಯಾಗಿ ವಿಷಯ ತಿಳಿಸಿದಾಗ, ‘ಆಗಿದ್ದು ಆಗಿ ಹೋಯ್ತು. ಆ ವಿಷಯ ಬಿಟ್ಟು ಬಿಡಿ’ ಎಂದಿದ್ದರು ಎಂದು ಉಲ್ಲೆಖಿಸಿದ್ದಾರೆ.</p>.<p>‘ಈ ಪ್ರಕರಣ ಸಂಬಂಧ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದರೂ, ಸರಿಯಾದ ಸ್ಪಂದನೆ ಸಿಕ್ಕಿಲ್ಲ. ನಮಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>