<p><strong>ಮೂಲ್ಕಿ (ದಕ್ಷಿಣ ಕನ್ನಡ):</strong> ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಯನ್ನು ಮುಂಬೈನ ವಂಚನಾ ಜಾಲವೊಂದು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸುಮಾರು ₹ 84 ಲಕ್ಷ ವಂಚಿಸಲು ಯತ್ನಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ಸಮಯಪ್ರಜ್ಞೆ ಹಾಗೂ ಮೂಲ್ಕಿ ಪೊಲೀಸರ ಮಧ್ಯಪ್ರವೇಶದಿಂದಾಗಿ ಅದು ವಿಫಲಗೊಂಡಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.</p>.<p>‘ದಾಮಸ್ ಕಟ್ಟೆ ಕೊಬ್ಬೆಟ್ಟಿನ ಬೆನೆಡಿಕ್ಟ್ ಫರ್ನಾಂಡಿಸ್ (86)– ಲಿಲ್ಲಿ ಫರ್ನಾಂಡಿಸ್ (71) ದಂಪತಿಗೆ ವಿಡಿಯೊ ಕರೆ ಮಾಡಿದ್ದ ವಂಚಕರು, ತಮ್ಮನ್ನು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ‘ಮುಂಬೈನಲ್ಲಿ ಬ್ಯಾಂಕ್ ಖಾತೆಯಿಂದ ನೀವು ₹ 6 ಕೋಟಿ ಹಣ ಪಡೆದಿದ್ದೀರಿ’ ಎಂದು ಹೇಳಿ ವೃದ್ಧ ದಂಪತಿಯ ನಕಲಿ ಆಧಾರ್ ಕಾರ್ಡ್ ತೋರಿಸಿದ್ದರು. ‘ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದ್ದು, ಮನೆಯಿಂದ ಹೊರ ಹೋಗುವಂತಿಲ್ಲ. ನಮ್ಮ ಸಿಬ್ಬಂದಿ ನಿಮ್ಮನ್ನು ಶೂಟ್ ಮಾಡುತ್ತಾರೆ. ಕೆನರಾ ಬ್ಯಾಂಕಿನ ಕಿನ್ನಿಗೋಳಿಯ ಶಾಖೆಯಲ್ಲಿ ನಿಮ್ಮ ಖಾತೆಯಲ್ಲಿರುವ ₹ 84 ಲಕ್ಷವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>‘ಬೆದರಿಕೆಗೆ ಮಣಿದ ದಂಪತಿ ಕೆನರಾ ಬ್ಯಾಂಕಿನ ಕಿನ್ನಿಗೋಳಿ ಶಾಖೆಯ ವ್ಯವಸ್ಥಾಪಕ ರಾಯಿಸ್ಟನ್ ಅವರನ್ನು ಮಂಗಳವಾರ ಸಂಪರ್ಕಿಸಿ, ‘ತುರ್ತಾಗಿ ಹಣ ಬೇಕು. ನಮ್ಮ ಅವಧಿ ಠೇವಣಿ ಖಾತೆಯಲ್ಲಿದ್ದ ₹ 84 ಲಕ್ಷವನ್ನು ಉಳಿತಾಯ ಖಾತೆಗೆ ವರ್ಗಾಯಿಸಿ’ ಎಂದು ಕೋರಿದ್ದರು.</p>.<p>ಇದರಿಂದ ಸಂಶಯಗೊಂಡ ವ್ಯವಸ್ಥಾಪಕ, ಹಣದ ಅಗತ್ಯದ ಬಗ್ಗೆ ವಿಚಾರಿಸಿದ್ದರು. ಆಗ ದಂಪತಿ ‘ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಹಣ ಬೇಕಿದೆ’ ಎಂದು ತಿಳಿಸಿದ್ದರು. ವೃದ್ಧ ದಂಪತಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬುಧವಾರ ಬೆಳಿಗ್ಗೆ ಮತ್ತಷ್ಟು ಒತ್ತಡ ಹೇರಿ, ‘ಅವರ ಖಾತೆಯಿಂದ ಸುಮಾರು ₹ 84 ಲಕ್ಷವನ್ನು ಆರೋಪಿಗಳು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದರು. ವೃದ್ಧ ದಂಪತಿಯ ನಡೆಯಿಂದ ಸಂಶಯವು ಮತ್ತಷ್ಟು ಬಲಗೊಂಡಿದ್ದರಿಂದ ವ್ಯವಸ್ಥಾಪಕ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ. </p>.<p>‘ಮೂಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಬಿ.ಎಸ್ ಸೂಚನೆಯಂತೆ ಪೊಲೀಸ್ ಸಿಬ್ಬಂದಿ, ವೃದ್ಧ ದಂಪತಿಯ ಮನೆಗೆ ತೆರಳಿ ವಿಚಾರಿಸಿದಾಗ ಡಿಜಿಟಲ್ ಅರೆಸ್ಟ್ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರು ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರು. ವಂಚಕರು ಸೂಚಿಸಿದ ಖಾತೆಗೆ ವರ್ಗಾವಣೆಗೊಂಡ ₹ 84 ಲಕ್ಷವನ್ನು ಬ್ಯಾಂಕಿನವರು ತಡೆಹಿಡಿದಿದ್ದರು’ ಎಂದು ಅವರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ (ದಕ್ಷಿಣ ಕನ್ನಡ):</strong> ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಯನ್ನು ಮುಂಬೈನ ವಂಚನಾ ಜಾಲವೊಂದು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸುಮಾರು ₹ 84 ಲಕ್ಷ ವಂಚಿಸಲು ಯತ್ನಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ಸಮಯಪ್ರಜ್ಞೆ ಹಾಗೂ ಮೂಲ್ಕಿ ಪೊಲೀಸರ ಮಧ್ಯಪ್ರವೇಶದಿಂದಾಗಿ ಅದು ವಿಫಲಗೊಂಡಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.</p>.<p>‘ದಾಮಸ್ ಕಟ್ಟೆ ಕೊಬ್ಬೆಟ್ಟಿನ ಬೆನೆಡಿಕ್ಟ್ ಫರ್ನಾಂಡಿಸ್ (86)– ಲಿಲ್ಲಿ ಫರ್ನಾಂಡಿಸ್ (71) ದಂಪತಿಗೆ ವಿಡಿಯೊ ಕರೆ ಮಾಡಿದ್ದ ವಂಚಕರು, ತಮ್ಮನ್ನು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ‘ಮುಂಬೈನಲ್ಲಿ ಬ್ಯಾಂಕ್ ಖಾತೆಯಿಂದ ನೀವು ₹ 6 ಕೋಟಿ ಹಣ ಪಡೆದಿದ್ದೀರಿ’ ಎಂದು ಹೇಳಿ ವೃದ್ಧ ದಂಪತಿಯ ನಕಲಿ ಆಧಾರ್ ಕಾರ್ಡ್ ತೋರಿಸಿದ್ದರು. ‘ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದ್ದು, ಮನೆಯಿಂದ ಹೊರ ಹೋಗುವಂತಿಲ್ಲ. ನಮ್ಮ ಸಿಬ್ಬಂದಿ ನಿಮ್ಮನ್ನು ಶೂಟ್ ಮಾಡುತ್ತಾರೆ. ಕೆನರಾ ಬ್ಯಾಂಕಿನ ಕಿನ್ನಿಗೋಳಿಯ ಶಾಖೆಯಲ್ಲಿ ನಿಮ್ಮ ಖಾತೆಯಲ್ಲಿರುವ ₹ 84 ಲಕ್ಷವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>‘ಬೆದರಿಕೆಗೆ ಮಣಿದ ದಂಪತಿ ಕೆನರಾ ಬ್ಯಾಂಕಿನ ಕಿನ್ನಿಗೋಳಿ ಶಾಖೆಯ ವ್ಯವಸ್ಥಾಪಕ ರಾಯಿಸ್ಟನ್ ಅವರನ್ನು ಮಂಗಳವಾರ ಸಂಪರ್ಕಿಸಿ, ‘ತುರ್ತಾಗಿ ಹಣ ಬೇಕು. ನಮ್ಮ ಅವಧಿ ಠೇವಣಿ ಖಾತೆಯಲ್ಲಿದ್ದ ₹ 84 ಲಕ್ಷವನ್ನು ಉಳಿತಾಯ ಖಾತೆಗೆ ವರ್ಗಾಯಿಸಿ’ ಎಂದು ಕೋರಿದ್ದರು.</p>.<p>ಇದರಿಂದ ಸಂಶಯಗೊಂಡ ವ್ಯವಸ್ಥಾಪಕ, ಹಣದ ಅಗತ್ಯದ ಬಗ್ಗೆ ವಿಚಾರಿಸಿದ್ದರು. ಆಗ ದಂಪತಿ ‘ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಹಣ ಬೇಕಿದೆ’ ಎಂದು ತಿಳಿಸಿದ್ದರು. ವೃದ್ಧ ದಂಪತಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬುಧವಾರ ಬೆಳಿಗ್ಗೆ ಮತ್ತಷ್ಟು ಒತ್ತಡ ಹೇರಿ, ‘ಅವರ ಖಾತೆಯಿಂದ ಸುಮಾರು ₹ 84 ಲಕ್ಷವನ್ನು ಆರೋಪಿಗಳು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದರು. ವೃದ್ಧ ದಂಪತಿಯ ನಡೆಯಿಂದ ಸಂಶಯವು ಮತ್ತಷ್ಟು ಬಲಗೊಂಡಿದ್ದರಿಂದ ವ್ಯವಸ್ಥಾಪಕ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ. </p>.<p>‘ಮೂಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಬಿ.ಎಸ್ ಸೂಚನೆಯಂತೆ ಪೊಲೀಸ್ ಸಿಬ್ಬಂದಿ, ವೃದ್ಧ ದಂಪತಿಯ ಮನೆಗೆ ತೆರಳಿ ವಿಚಾರಿಸಿದಾಗ ಡಿಜಿಟಲ್ ಅರೆಸ್ಟ್ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರು ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರು. ವಂಚಕರು ಸೂಚಿಸಿದ ಖಾತೆಗೆ ವರ್ಗಾವಣೆಗೊಂಡ ₹ 84 ಲಕ್ಷವನ್ನು ಬ್ಯಾಂಕಿನವರು ತಡೆಹಿಡಿದಿದ್ದರು’ ಎಂದು ಅವರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>