<p><strong>ಮಂಗಳೂರು</strong>: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಲ ತುಂಬಿದ ರೋಷನ್ ಶೆಟ್ಟಿ ಬೌಲಿಂಗ್ನಲ್ಲೂ ಮಿಂಚಿದರು. ಅವರ ಆಲ್ರೌಂಡ್ ಆಟದ ಬಲದಿಂದ ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ (ಡಿಕೆಸಿಎ) ತಂಡ ಕೆಎಸ್ಸಿಎ ಮಂಗಳೂರು ವಲಯದ ಪ್ರಥಮ ಡಿವಿಷನ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.</p>.<p>ಮುಡಿಪುವಿನಲ್ಲಿ ನಡೆದ ಟೂರ್ನಿಯ ರೋಚಕ ಫೈನಲ್ನಲ್ಲಿ ಡಿಕೆಸಿಎ 4 ರನ್ಗಳಿಂದ ಮಂಗಳೂರು ಸ್ಪೋರ್ಟ್ಸ್ ಕ್ಲಬ್ (ಎಂಎಸ್ಸಿ) ತಂಡವನ್ನು ಮಣಿಸಿತು. </p>.<p>254 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಎಂಎಸ್ಸಿ 48.2 ಓವರ್ಗಳಲ್ಲಿ 249 ರನ್ಗಳಿಗೆ ಆಲೌಟಾಯಿತು. ಆರಂಭಿಕ ಬ್ಯಾಟರ್ ವಿಕ್ರಂ ಪಿ.ಎಸ್ (89; 93 ಎಸೆತ, 10 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸತ್ಯಸ್ವರೂಪ್ ಮತ್ತು ನಿಶ್ಚಿತ್ ರಾವ್ ಕೊನೆಯ ಓವರ್ಗಳಲ್ಲಿ ಪ್ರತಿರೋಧ ತೋರಿದರು. ಆದರೆ ರೋಷನ್ ಶೆಟ್ಟಿ, ನಿಶಿತ್ ರಾಜ್ ಮತ್ತು ಶರತ್ ಪೂಜಾರಿ ಅವರ ಕರಾರುವಾಕ್ ಬೌಲಿಂಗ್ ಮುಂದೆ ತಂಡ ಸೋಲಿಗೆ ಶರಣಾಯಿತು. </p>.<p>ಆರಂಭಿಕ ಬ್ಯಾಟರ್ ರುಷಿ ಬಿ.ಶೆಟ್ಟಿ ಮತ್ತು ಮೂರನೇ ಕ್ರಮಾಂಕದ ರಿತೇಶ್ ಭಟ್ಕಳ್ ಅವರು ವಿಕ್ರಂ ಜೊತೆ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ದರು. ಆದರೆ ನಿಗದಿತ ಅಂತರದಲ್ಲಿ ವಿಕೆಟ್ಗಳು ಉರುಳಿದ ಕಾರಣ ತಂಡ ಒಂದು ಹಂತದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಸತ್ಯಸ್ವರೂಪ್ ಮತ್ತು ನಿಶ್ಚಿತ್ ಗೆಲುವಿನ ಆಸೆ ಚಿಗುರುವಂತೆ ಮಾಡಿದ್ದರು. ಡಿಕೆಸಿಎ ಸಂಘಟಿತ ಹೋರಾಟದ ಮೂಲಕ ಗೆಲುವು ತನ್ನದಾಗಿಸಿಕೊಂಡಿತು.</p>.<p>ಮೊದಲು ಬ್ಯಾಟಿಂಗ್ ಮಾಡಿದ ಡಿಕೆಸಿಎ ತಂಡದ ಆರ್ಯನ್ ಬೇಗನೇ ಔಟಾದರೂ ನಿಶಿತ್ (50; 41 ಎ, 10 ಬೌಂ) ಜೊತೆಗೂಡಿದ ಚಿರಂಜೀವಿ ಜಿ.ಎಸ್ ಉತ್ತಮ ಸಹಕಾರ ನೀಡಿದರು. ನಂತರ ಆದಿತ್ಯ ರೈ (49; 79 ಎ, 3 ಬೌಂ) ಮತ್ತು ಎಡಗೈ ಬ್ಯಾಟರ್ ರೋಷನ್ ಶೆಟ್ಟಿ (54; 65 ಎ, 5 ಬೌಂ) ಇನಿಂಗ್ಸ್ನ ಚುಕ್ಕಾಣಿ ಹಿಡಿದರು.</p>.<p>6 ಇನಿಂಗ್ಸ್ಗಳಲ್ಲಿ ತಲಾ ಎರಡು ಶಕತ ಮತ್ತು ಅರ್ಧಶತಕಗಳನ್ನು ಗಳಿಸಿದ ನಿಶಿತ್ ರಾಜ್ ಒಟ್ಟು 465 ರನ್ಗಳೊಂದಿಗೆ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ ಎಂದು ತಂಡದ ಕಾರ್ಯದರ್ಶಿ ಡಾ.ಶ್ರೀಕಾಂತ್ ರೈ ತಿಳಿಸಿದರು. </p>.<p><strong>ಸಂಕ್ಷಿಪ್ತ ಸ್ಕೋರು:</strong> ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್: 48 ಓವರ್ಗಳಲ್ಲಿ 253 (ನಿಶಿತ್ ರಾಜ್ 50, ಚಿರಂಜೀವಿ ಜಿ.ಎಸ್ 42, ಆದಿತ್ಯ ರೈ 49, ರೋಷನ್ ಶೆಟ್ಟಿ 54; ನಿಶ್ಚಿತ್ ಎನ್.ರಾವ್ 56ಕ್ಕೆ3, ಶ್ರೀಶ ಆಚಾರ್ 46ಕ್ಕೆ3, ರಿತೇಶ್ ಭಟ್ಕಳ್ 47ಕ್ಕೆ2, ಸಚಿನ್ ಭಟ್ 37ಕ್ಕೆ2); ಮಂಗಳೂರು ಸ್ಪೋರ್ಟ್ಸ್ ಕ್ಲಬ್: 48.2 ಓವರ್ಗಳಲ್ಲಿ 249 (ವಿಕ್ರಂ ಪಿ.ಎಸ್ 89, ರಿತೇಶ್ ಭಟ್ಕಳ್ 25, ಸತ್ಯಸ್ವರೂಪ್ 32, ನಿಶ್ಚಿತ್ ರಾವ್ 23; ಆರ್ಯನ್ 30ಕ್ಕೆ1, ಅಡ್ರಿಕ್ ಕಾರ್ಡೋಝಾ 33ಕ್ಕೆ1, ಶರತ್ ಪೂಜಾರಿ 67ಕ್ಕೆ2, ನಿಶಿತ್ ರಾಜ್ 33ಕ್ಕೆ2, ರೋಷನ್ ಶೆಟ್ಟಿ 37ಕ್ಕೆ4). ಫಲಿತಾಂಶ: ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ಗೆ 4 ರನ್ ಜಯ; ಪ್ರಥಮ ಡಿವಿಷನ್ ಪ್ರಶಸ್ತಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಲ ತುಂಬಿದ ರೋಷನ್ ಶೆಟ್ಟಿ ಬೌಲಿಂಗ್ನಲ್ಲೂ ಮಿಂಚಿದರು. ಅವರ ಆಲ್ರೌಂಡ್ ಆಟದ ಬಲದಿಂದ ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ (ಡಿಕೆಸಿಎ) ತಂಡ ಕೆಎಸ್ಸಿಎ ಮಂಗಳೂರು ವಲಯದ ಪ್ರಥಮ ಡಿವಿಷನ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.</p>.<p>ಮುಡಿಪುವಿನಲ್ಲಿ ನಡೆದ ಟೂರ್ನಿಯ ರೋಚಕ ಫೈನಲ್ನಲ್ಲಿ ಡಿಕೆಸಿಎ 4 ರನ್ಗಳಿಂದ ಮಂಗಳೂರು ಸ್ಪೋರ್ಟ್ಸ್ ಕ್ಲಬ್ (ಎಂಎಸ್ಸಿ) ತಂಡವನ್ನು ಮಣಿಸಿತು. </p>.<p>254 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಎಂಎಸ್ಸಿ 48.2 ಓವರ್ಗಳಲ್ಲಿ 249 ರನ್ಗಳಿಗೆ ಆಲೌಟಾಯಿತು. ಆರಂಭಿಕ ಬ್ಯಾಟರ್ ವಿಕ್ರಂ ಪಿ.ಎಸ್ (89; 93 ಎಸೆತ, 10 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸತ್ಯಸ್ವರೂಪ್ ಮತ್ತು ನಿಶ್ಚಿತ್ ರಾವ್ ಕೊನೆಯ ಓವರ್ಗಳಲ್ಲಿ ಪ್ರತಿರೋಧ ತೋರಿದರು. ಆದರೆ ರೋಷನ್ ಶೆಟ್ಟಿ, ನಿಶಿತ್ ರಾಜ್ ಮತ್ತು ಶರತ್ ಪೂಜಾರಿ ಅವರ ಕರಾರುವಾಕ್ ಬೌಲಿಂಗ್ ಮುಂದೆ ತಂಡ ಸೋಲಿಗೆ ಶರಣಾಯಿತು. </p>.<p>ಆರಂಭಿಕ ಬ್ಯಾಟರ್ ರುಷಿ ಬಿ.ಶೆಟ್ಟಿ ಮತ್ತು ಮೂರನೇ ಕ್ರಮಾಂಕದ ರಿತೇಶ್ ಭಟ್ಕಳ್ ಅವರು ವಿಕ್ರಂ ಜೊತೆ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ದರು. ಆದರೆ ನಿಗದಿತ ಅಂತರದಲ್ಲಿ ವಿಕೆಟ್ಗಳು ಉರುಳಿದ ಕಾರಣ ತಂಡ ಒಂದು ಹಂತದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಸತ್ಯಸ್ವರೂಪ್ ಮತ್ತು ನಿಶ್ಚಿತ್ ಗೆಲುವಿನ ಆಸೆ ಚಿಗುರುವಂತೆ ಮಾಡಿದ್ದರು. ಡಿಕೆಸಿಎ ಸಂಘಟಿತ ಹೋರಾಟದ ಮೂಲಕ ಗೆಲುವು ತನ್ನದಾಗಿಸಿಕೊಂಡಿತು.</p>.<p>ಮೊದಲು ಬ್ಯಾಟಿಂಗ್ ಮಾಡಿದ ಡಿಕೆಸಿಎ ತಂಡದ ಆರ್ಯನ್ ಬೇಗನೇ ಔಟಾದರೂ ನಿಶಿತ್ (50; 41 ಎ, 10 ಬೌಂ) ಜೊತೆಗೂಡಿದ ಚಿರಂಜೀವಿ ಜಿ.ಎಸ್ ಉತ್ತಮ ಸಹಕಾರ ನೀಡಿದರು. ನಂತರ ಆದಿತ್ಯ ರೈ (49; 79 ಎ, 3 ಬೌಂ) ಮತ್ತು ಎಡಗೈ ಬ್ಯಾಟರ್ ರೋಷನ್ ಶೆಟ್ಟಿ (54; 65 ಎ, 5 ಬೌಂ) ಇನಿಂಗ್ಸ್ನ ಚುಕ್ಕಾಣಿ ಹಿಡಿದರು.</p>.<p>6 ಇನಿಂಗ್ಸ್ಗಳಲ್ಲಿ ತಲಾ ಎರಡು ಶಕತ ಮತ್ತು ಅರ್ಧಶತಕಗಳನ್ನು ಗಳಿಸಿದ ನಿಶಿತ್ ರಾಜ್ ಒಟ್ಟು 465 ರನ್ಗಳೊಂದಿಗೆ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ ಎಂದು ತಂಡದ ಕಾರ್ಯದರ್ಶಿ ಡಾ.ಶ್ರೀಕಾಂತ್ ರೈ ತಿಳಿಸಿದರು. </p>.<p><strong>ಸಂಕ್ಷಿಪ್ತ ಸ್ಕೋರು:</strong> ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್: 48 ಓವರ್ಗಳಲ್ಲಿ 253 (ನಿಶಿತ್ ರಾಜ್ 50, ಚಿರಂಜೀವಿ ಜಿ.ಎಸ್ 42, ಆದಿತ್ಯ ರೈ 49, ರೋಷನ್ ಶೆಟ್ಟಿ 54; ನಿಶ್ಚಿತ್ ಎನ್.ರಾವ್ 56ಕ್ಕೆ3, ಶ್ರೀಶ ಆಚಾರ್ 46ಕ್ಕೆ3, ರಿತೇಶ್ ಭಟ್ಕಳ್ 47ಕ್ಕೆ2, ಸಚಿನ್ ಭಟ್ 37ಕ್ಕೆ2); ಮಂಗಳೂರು ಸ್ಪೋರ್ಟ್ಸ್ ಕ್ಲಬ್: 48.2 ಓವರ್ಗಳಲ್ಲಿ 249 (ವಿಕ್ರಂ ಪಿ.ಎಸ್ 89, ರಿತೇಶ್ ಭಟ್ಕಳ್ 25, ಸತ್ಯಸ್ವರೂಪ್ 32, ನಿಶ್ಚಿತ್ ರಾವ್ 23; ಆರ್ಯನ್ 30ಕ್ಕೆ1, ಅಡ್ರಿಕ್ ಕಾರ್ಡೋಝಾ 33ಕ್ಕೆ1, ಶರತ್ ಪೂಜಾರಿ 67ಕ್ಕೆ2, ನಿಶಿತ್ ರಾಜ್ 33ಕ್ಕೆ2, ರೋಷನ್ ಶೆಟ್ಟಿ 37ಕ್ಕೆ4). ಫಲಿತಾಂಶ: ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ಗೆ 4 ರನ್ ಜಯ; ಪ್ರಥಮ ಡಿವಿಷನ್ ಪ್ರಶಸ್ತಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>