<p><strong>ಕಾಸರಗೋಡು</strong>: ದುಬೈನಲ್ಲಿರುವ ಗಡಿನಾಡು ಕನ್ನಡಿಗರ ಭಾಷಾಪ್ರೇಮ ಮಾದರಿಯಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.</p>.<p>ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಯ ದುಬೈ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.</p>.<p>ದುಬೈನ ಕರಾಮ ಫಾರ್ಚೂನ್ ಆಟ್ರೀಯಂ ಸಭಾಂಗಣದಲ್ಲಿ ಮಹಾಸಭೆ ನಡೆಯಿತು.</p>.<p>ವಕೀಲ ಇಬ್ರಾಹಿಂ ಕಲೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರ ಸದಸ್ಯ ಸಂಜೀವಕುಮಾರ್ ಅತಿವಾಲೆ, ಝೆಡ್.ಎ.ಕಯ್ಯಾರ್, ಅಶ್ರಫ್ ಷಾ ಮಂತೂರು, ಶಿವಶಂಕರ ನೆಕ್ರಾಜೆ, ಸಂದೀಪ್ ಅಂಚನ್ ಭಾಘವಹಿಸಿದ್ದರು. ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿದರು. ಅಶ್ರಫ್ ಪಿ.ಪಿ.ಬಾಯಾರು ವಂದಿಸಿದರು.</p>.<p>ಎಡರಂಗ ಸರ್ಕಾರದ ವಾರ್ಷಿಕೋತ್ಸವಕ್ಕೆ ಚಾಲನೆ</p>.<p>ಕಾಸರಗೋಡು: ಕೇರಳದ ಎಡರಂಗ ಸರ್ಕಾರದ 4ನೇ ವಾರ್ಷಿಕೋತ್ಸವಕ್ಕೆ ಜಿಲ್ಲೆಯ ಕಾಲಿಕಡವಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.</p>.<p>ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಕಂದಾಯ ಸಚಿವ ಕೆ.ರಾಜನ್ ಅಧ್ಯಕ್ಷತೆ ವಹಿಸಿದ್ದರು.</p>.<p>ಸಚಿವರಾದ ರೋಷಿ ಆಗಸ್ಟಿನ್, ಕೆ.ಕುಂಞಿಕೃಷ್ಣನ್, ಎ.ಕೆ.ಶಶೀಂದ್ರನ್, ಕಡನ್ನಪಳ್ಳಿ ರಾಮಚಂದ್ರನ್, ಕೆ.ಬಿ.ಗಣೇಶ್ ಕುಮಾರ್, ಕೆ.ಎನ್.ಬಾಲಗೋಪಾಲ್ ಭಾಗವಹಿಸಿದ್ದರು.</p>.<p>ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾರದಾ ಮುರಳೀಧರನ್ ಸ್ವಾಗತಿಸಿದರು. 7 ದಿನ ಪಡನ್ನಕ್ಕಾಡ್ ಬೇಕಲ ಕ್ಲಬ್ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಈ ವಾರ್ಷಿಕೋತ್ಸವ ನಡೆಯಲಿದೆ.</p>.<p>ಕೊಲೆ: 4 ಮಂದಿ ಪೊಲೀಸ್ ವಶಕ್ಕೆ</p>.<p>ಕಾಸರಗೋಡು: ನಗರದ ಆನೆಬಾಗಿಲಿನಲ್ಲಿ ಸೋಮವಾರ ನಡೆದ ಪಶ್ಚಿಮ ಬಂಗಾಳ ನಿವಾಸಿಯ ಕೊಲೆಗೆ ಸಂಬಂಧಿಸಿ 4 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.</p>.<p>ಬಾರಾಗಾರಿಯ ನಿವಾಸಿ ಸುಶಾಂತ್ ರಾಯ್ (28) ಕೊಲೆಯಾದವರು. ಆರೋಪಿಗಳಲ್ಲಿ 6 ಮಂದಿ ಘಟನೆ ರೈಲಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಅವರಲ್ಲಿ ನಾಲ್ವರನ್ನು ಒಟ್ಟಪ್ಪಾಲಂ ಎಂಬಲ್ಲಿಂದ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಸುಶಾಂತ್ ಹಾಗೂ ಆರೋಪಿಗಳು ವಲಸೆ ಕಾರ್ಮಿಕರಾಗಿದ್ದು, ಆನೆಬಾಗಿಲಿನ ಬಾಡಿಗೆ ಕ್ವಾರ್ಟರ್ಸ್ನಲ್ಲಿ ಜತೆಗೆ ವಾಸಿಸುತ್ತಿದ್ದರು. ಅವರ ಮಧ್ಯೆ ಸೋಮವಾರ ನಸುಕಿನಲ್ಲಿ ಜಗಳ ನಡೆದಿದ್ದು, ಕೊಲೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.</p>.<p>ಚಾಕು ಇರಿತ: ಆರೋಪಿಗಳು ಪರಾರಿ</p>.<p>ಕಾಸರಗೋಡು: ಮುನ್ನಾಡ್ ಕೊರತ್ತಿಕುಂಡು ಎಂಬಲ್ಲಿ ಪೊಲೀಸ್ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.</p>.<p>ಬೇಡಗಂ ಠಾಣೆ ಸಿಬ್ಬಂದಿ ಸೂರಜ್, ಬೀಂಬುಂಗಾಲು ನಿವಾಸಿ ಸಮೀಷ್ ಎಂಬುವರು ಚಾಕು ಇರಿತಕ್ಕೊಳಗಾದವರು. ಸ್ಥಳೀಯ ನಿವಾಸಿಗಳಾದ ವಿಷ್ಣು (25), ಜಿಷ್ಣು (24) ಆರೋಪಿಗಳು. ಸಮೀಷ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.</p>.<p>ಅಪಘಾತ: ಇಬ್ಬರು ಸಾವು</p>.<p>ಕಾಸರಗೋಡು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಡೆಗಳಲ್ಲಿ ರಸ್ತೆದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.</p>.<p>ಬಂದ್ಯೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮುಟ್ಟಂ ಕುನ್ನಿಲ್ ನಿವಾಸಿ ಅಬೂಬಕ್ಕರ್ (70) ಮೃತಪಟ್ಟಿದ್ದಾರೆ. ಪರಾರಿಯಾದ ಕಾರನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.</p>.<p>ಬೇಳದಲ್ಲಿ ನಡೆದ ಅವಘಡದಲ್ಲಿ ಮಾನ್ಯಕಡವು ನಿವಾಸಿ ಗೋಪಾಲ ಶೆಟ್ಟಿ (60) ಮೃತ ಪಟ್ಟಿದ್ದಾರೆ. ಬದಿಯಡ್ಕದಿಂದ ಕುಂಬಳೆಗೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿತ್ತು.</p>.<p>ಆತ್ಮಹತ್ಯೆ</p>.<p>ಕಾಸರಗೋಡು: ಪೆರಿಯಾಟಡ್ಕ ನಿವಾಸಿ ಬೀಕೇಶ್ (27) ಸೋಮವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜ್ಯೋತಿಷಿಯಾಗಿದ್ದರು. ಬೇಕಲ ಪೊಲೀಸರು ತನಿಖೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ದುಬೈನಲ್ಲಿರುವ ಗಡಿನಾಡು ಕನ್ನಡಿಗರ ಭಾಷಾಪ್ರೇಮ ಮಾದರಿಯಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.</p>.<p>ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಯ ದುಬೈ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.</p>.<p>ದುಬೈನ ಕರಾಮ ಫಾರ್ಚೂನ್ ಆಟ್ರೀಯಂ ಸಭಾಂಗಣದಲ್ಲಿ ಮಹಾಸಭೆ ನಡೆಯಿತು.</p>.<p>ವಕೀಲ ಇಬ್ರಾಹಿಂ ಕಲೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರ ಸದಸ್ಯ ಸಂಜೀವಕುಮಾರ್ ಅತಿವಾಲೆ, ಝೆಡ್.ಎ.ಕಯ್ಯಾರ್, ಅಶ್ರಫ್ ಷಾ ಮಂತೂರು, ಶಿವಶಂಕರ ನೆಕ್ರಾಜೆ, ಸಂದೀಪ್ ಅಂಚನ್ ಭಾಘವಹಿಸಿದ್ದರು. ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿದರು. ಅಶ್ರಫ್ ಪಿ.ಪಿ.ಬಾಯಾರು ವಂದಿಸಿದರು.</p>.<p>ಎಡರಂಗ ಸರ್ಕಾರದ ವಾರ್ಷಿಕೋತ್ಸವಕ್ಕೆ ಚಾಲನೆ</p>.<p>ಕಾಸರಗೋಡು: ಕೇರಳದ ಎಡರಂಗ ಸರ್ಕಾರದ 4ನೇ ವಾರ್ಷಿಕೋತ್ಸವಕ್ಕೆ ಜಿಲ್ಲೆಯ ಕಾಲಿಕಡವಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.</p>.<p>ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಕಂದಾಯ ಸಚಿವ ಕೆ.ರಾಜನ್ ಅಧ್ಯಕ್ಷತೆ ವಹಿಸಿದ್ದರು.</p>.<p>ಸಚಿವರಾದ ರೋಷಿ ಆಗಸ್ಟಿನ್, ಕೆ.ಕುಂಞಿಕೃಷ್ಣನ್, ಎ.ಕೆ.ಶಶೀಂದ್ರನ್, ಕಡನ್ನಪಳ್ಳಿ ರಾಮಚಂದ್ರನ್, ಕೆ.ಬಿ.ಗಣೇಶ್ ಕುಮಾರ್, ಕೆ.ಎನ್.ಬಾಲಗೋಪಾಲ್ ಭಾಗವಹಿಸಿದ್ದರು.</p>.<p>ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾರದಾ ಮುರಳೀಧರನ್ ಸ್ವಾಗತಿಸಿದರು. 7 ದಿನ ಪಡನ್ನಕ್ಕಾಡ್ ಬೇಕಲ ಕ್ಲಬ್ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಈ ವಾರ್ಷಿಕೋತ್ಸವ ನಡೆಯಲಿದೆ.</p>.<p>ಕೊಲೆ: 4 ಮಂದಿ ಪೊಲೀಸ್ ವಶಕ್ಕೆ</p>.<p>ಕಾಸರಗೋಡು: ನಗರದ ಆನೆಬಾಗಿಲಿನಲ್ಲಿ ಸೋಮವಾರ ನಡೆದ ಪಶ್ಚಿಮ ಬಂಗಾಳ ನಿವಾಸಿಯ ಕೊಲೆಗೆ ಸಂಬಂಧಿಸಿ 4 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.</p>.<p>ಬಾರಾಗಾರಿಯ ನಿವಾಸಿ ಸುಶಾಂತ್ ರಾಯ್ (28) ಕೊಲೆಯಾದವರು. ಆರೋಪಿಗಳಲ್ಲಿ 6 ಮಂದಿ ಘಟನೆ ರೈಲಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಅವರಲ್ಲಿ ನಾಲ್ವರನ್ನು ಒಟ್ಟಪ್ಪಾಲಂ ಎಂಬಲ್ಲಿಂದ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಸುಶಾಂತ್ ಹಾಗೂ ಆರೋಪಿಗಳು ವಲಸೆ ಕಾರ್ಮಿಕರಾಗಿದ್ದು, ಆನೆಬಾಗಿಲಿನ ಬಾಡಿಗೆ ಕ್ವಾರ್ಟರ್ಸ್ನಲ್ಲಿ ಜತೆಗೆ ವಾಸಿಸುತ್ತಿದ್ದರು. ಅವರ ಮಧ್ಯೆ ಸೋಮವಾರ ನಸುಕಿನಲ್ಲಿ ಜಗಳ ನಡೆದಿದ್ದು, ಕೊಲೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.</p>.<p>ಚಾಕು ಇರಿತ: ಆರೋಪಿಗಳು ಪರಾರಿ</p>.<p>ಕಾಸರಗೋಡು: ಮುನ್ನಾಡ್ ಕೊರತ್ತಿಕುಂಡು ಎಂಬಲ್ಲಿ ಪೊಲೀಸ್ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.</p>.<p>ಬೇಡಗಂ ಠಾಣೆ ಸಿಬ್ಬಂದಿ ಸೂರಜ್, ಬೀಂಬುಂಗಾಲು ನಿವಾಸಿ ಸಮೀಷ್ ಎಂಬುವರು ಚಾಕು ಇರಿತಕ್ಕೊಳಗಾದವರು. ಸ್ಥಳೀಯ ನಿವಾಸಿಗಳಾದ ವಿಷ್ಣು (25), ಜಿಷ್ಣು (24) ಆರೋಪಿಗಳು. ಸಮೀಷ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.</p>.<p>ಅಪಘಾತ: ಇಬ್ಬರು ಸಾವು</p>.<p>ಕಾಸರಗೋಡು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಡೆಗಳಲ್ಲಿ ರಸ್ತೆದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.</p>.<p>ಬಂದ್ಯೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮುಟ್ಟಂ ಕುನ್ನಿಲ್ ನಿವಾಸಿ ಅಬೂಬಕ್ಕರ್ (70) ಮೃತಪಟ್ಟಿದ್ದಾರೆ. ಪರಾರಿಯಾದ ಕಾರನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.</p>.<p>ಬೇಳದಲ್ಲಿ ನಡೆದ ಅವಘಡದಲ್ಲಿ ಮಾನ್ಯಕಡವು ನಿವಾಸಿ ಗೋಪಾಲ ಶೆಟ್ಟಿ (60) ಮೃತ ಪಟ್ಟಿದ್ದಾರೆ. ಬದಿಯಡ್ಕದಿಂದ ಕುಂಬಳೆಗೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿತ್ತು.</p>.<p>ಆತ್ಮಹತ್ಯೆ</p>.<p>ಕಾಸರಗೋಡು: ಪೆರಿಯಾಟಡ್ಕ ನಿವಾಸಿ ಬೀಕೇಶ್ (27) ಸೋಮವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜ್ಯೋತಿಷಿಯಾಗಿದ್ದರು. ಬೇಕಲ ಪೊಲೀಸರು ತನಿಖೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>