‘ಗುದ್ದಲಿ, ಪಿಕಾಸು ಹಿಡಿದು ಹೊಂಡ ತೆಗೆಯುವ, ಗಿಡ ನೆಡುವ ಶ್ರಮದಾನದಲ್ಲಿ ಎಲ್ಲರಿಗೂ ಸಮಪಾಲು. 85 ವರ್ಷದ ಹಿರಿಯ ಮಾಧವ ಭಕ್ತ, ಏಳು ವರ್ಷದ ಬಾಲಕ ಶೌರ್ಯನೂ ಈ ತಂಡದ ಸದಸ್ಯರು. ಉದ್ಯಮಿಗಳು, ವೃತ್ತಿಪರರು, ನಿವೃತ್ತರು, ವಿದ್ಯಾರ್ಥಿಗಳು ಸ್ವಯಂ ಖುಷಿಗಾಗಿ ಹಸಿರು ಉಕ್ಕಿಸುವ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಮಣ್ಣಿನ ನಂಟು ನೀಡುವ ಆಪ್ಯಾಯ ಅನುಭವಕ್ಕೆ ಹೋಲಿಕೆಯಿಲ್ಲ’ ಎಂದು ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಹೇಳಿದರು.