‘ಯವ ಬೆಳೆಗೂ ಕ್ರಿಮಿನಾಶಕ ಬಳಸದಿರಿ’
‘ಏನನ್ನು ಬೆಳೆದರೂ ಅದಕ್ಕೆ ರಾಸಾಯನಿಕ ಅಥವಾ ಕ್ರಿಮಿನಾಶಕ ಬಳಸಬೇಡಿ. ಇದರಿಂದ ಭೂಮಿ ತಾಯಿ ನೀಡುವ ಫಲ ಸ್ವಲ್ಪಕಡಿಮೆ ಆಗಬಹುದು. ಆದರೆ ಆ ಫಲ ಚೆನ್ನಾಗಿರುತ್ತದೆ. ಭೂಮಿ ಯಾವತ್ತೂ ಬಂಜೆ ಅಲ್ಲ. ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಈ ಫಲವತ್ತಾದ ಭೂಮಿಯನ್ನು ಉಳಿಸಬೇಕು’ ಎಂದು ದೇವರಾವ್ ಸಲಹೆ ನೀಡಿದರು. ‘ಸರ್ಕಾರದಿಂದ ಧರ್ಮಾರ್ಥ ಅಕ್ಕಿ ಕೊಡುತ್ತಿದ್ದಾರೆ. ದುಡಿಯುವುದು ಯಾರಿಗೂ ಬೇಡ. ಕೂತು ತಿನ್ನುವ ಕಾಲವಿದು. ಇಂದಿನ ಕಾಲಘಟ್ಟದಲ್ಲಿ ಸಾವಯವ ಕೃಷಿಕರು ನಷ್ಟವಿಲ್ಲದೇ ಕೃಷಿ ಮುಂದುವರಿಸಬೇಕಾದರೆ ಸರ್ಕಾರದಿಂದ ಉತ್ತೇಜನ ಸಿಗಬೇಕು’ ಎಂದರು.