ಉಳ್ಳಾಲ: ತಾಲ್ಲೂಕಿನ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಮೇಲ್ಸೇತುವೆ ಬಳಿಯ ಗೂಡಂಗಡಿ ಬಳಿ ಮಟ್ಕಾ ಜೂಜಿಗೆ ಜನರಿಂದ ಹಣ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
‘ತೊಕ್ಕೊಟ್ಟು ಯುನಿಟಿ ಹಾಲ್ ಬಳಿಯ ಕೆರೆಬೈಲ್ ಹೌಸ್ ನಿವಾಸಿ ಉರ್ಮಾನ್ ಆಪ್ಪೂಸ್ ( 55 ವರ್ಷ) ಹಾಗೂ ಸೋಮೇಶ್ವರ, ಪ್ರಕಾಶ್ ನಗರದ ಪಿಲಾರ್ನ ಇಲ್ಯಾಸ್ (52 ವರ್ಷ)ಬಂಧಿತರು. ಆರೋಪಿಗಳಿಂದ ₹ 2,990 ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.