ಆಗ ಮಹೇಂದ್ರ ಕೊಡ್ಕಣಿ ಅವರ ಟೆಲಿಫೋನ್ ಭತ್ಯೆಯನ್ನು ಪರಿಗಣಿಸಿರಲಿಲ್ಲ. ತ್ರಿವೇಣಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಕೀಲ ಯಶವಂತ ಶೆಣೈ, ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳಾದ ಡಾ. ಧನಂಜಯ ವೈ ಚಂದ್ರಚೂಡ ಹಾಗೂ ಅಜಯ್ ರಸ್ತೋಗಿ ಅವರಿದ್ದ ಪೀಠವು, ಆಯೋಗವು ಪರಿಗಣಿಸಿದ ಅಂಶಗಳ ಆಧಾರದಲ್ಲಿ ಮಹೇಂದ್ರ ಅವರ ಕುಟುಂಬಕ್ಕೆ ಒಟ್ಟು ₹7,64,29,437 ಪರಿಹಾರವನ್ನು ವಾರ್ಷಿಕ ಶೇ 9 ರ ಬಡ್ಡಿದರದಲ್ಲಿ ನೀಡಲು ಆದೇಶಿಸಿತು.