<p><strong>ಮಂಗಳೂರು:</strong> ಭಾರತೀಯ ಇತಿಹಾಸವು ಪುರುಷ ಕಲಾವಿದರು ಸ್ತ್ರೀ ಪಾತ್ರಗಳನ್ನು ಅಭಿನಯಿಸುವ ದೀರ್ಘಕಾಲದ ಸಂಪ್ರದಾಯವನ್ನು ತಿಳಿಸುತ್ತದೆ. ಇದು ಮಹಿಳೆಯರು ಸಾರ್ವಜನಿಕವಾಗಿ ಪ್ರದರ್ಶನ ನೀಡುವುದರ ಮೇಲಿನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ನಿರ್ಬಂಧಗಳನ್ನು ಅಭಿವ್ಯಕ್ತಿಸುತ್ತದೆ ಎಂದು ಕಲಾವಿದೆ ಶ್ರುತಿ ಬಂಗೇರ ಹೇಳಿದರು. </p>.<p>ಇಂಟಾಕ್ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಂಪರೆಯ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮದಲ್ಲಿಅವರು ‘ಯಕ್ಷಗಾನದಲ್ಲಿ ಸ್ತ್ರೀವೇಷ: ಭಾರತೀಯ ನೃತ್ಯನಾಟಕಗಳಲ್ಲಿ ಸ್ತ್ರೀ ವೇಷಧಾರೆಯ ಸಂಪ್ರದಾಯ’ ಈ ಕುರಿತು ಮಾತನಾಡಿದರು.</p>.<p>‘ಕಥಕ್ಕಳಿ, ಕೂಚುಪುಡಿ, ಯಕ್ಷಗಾನ ಹೀಗೆ ಹಲವು ಕಲಾಪ್ರಕಾರಗಳಲ್ಲಿ ಮಹಿಳೆಯರಿಗೆ ವೇದಿಕೆ ನಿರ್ಬಂಧ ಇದ್ದ ಕಾರಣ, ಪುರುಷರು ಸ್ತ್ರೀಪಾತ್ರಗಳನ್ನು ಪ್ರತಿನಿಧಿಸುವುದು ಅಗತ್ಯವಾಯಿತು ಎಂದರು. ಸ್ತ್ರೀವೇಷ ಕಲಾವಿದರು ಎದುರಿಸುವ ಸಾಮಾಜಿಕ ಮತ್ತು ಮಾನಸಿಕ ಸವಾಲುಗಳನ್ನು ಅವರು ತಿಳಿಸಿದರು.</p>.<p>ದೀಕ್ಷಿತ್ ಆರ್. ಪೈ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಭಾರತೀಯ ಇತಿಹಾಸವು ಪುರುಷ ಕಲಾವಿದರು ಸ್ತ್ರೀ ಪಾತ್ರಗಳನ್ನು ಅಭಿನಯಿಸುವ ದೀರ್ಘಕಾಲದ ಸಂಪ್ರದಾಯವನ್ನು ತಿಳಿಸುತ್ತದೆ. ಇದು ಮಹಿಳೆಯರು ಸಾರ್ವಜನಿಕವಾಗಿ ಪ್ರದರ್ಶನ ನೀಡುವುದರ ಮೇಲಿನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ನಿರ್ಬಂಧಗಳನ್ನು ಅಭಿವ್ಯಕ್ತಿಸುತ್ತದೆ ಎಂದು ಕಲಾವಿದೆ ಶ್ರುತಿ ಬಂಗೇರ ಹೇಳಿದರು. </p>.<p>ಇಂಟಾಕ್ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಂಪರೆಯ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮದಲ್ಲಿಅವರು ‘ಯಕ್ಷಗಾನದಲ್ಲಿ ಸ್ತ್ರೀವೇಷ: ಭಾರತೀಯ ನೃತ್ಯನಾಟಕಗಳಲ್ಲಿ ಸ್ತ್ರೀ ವೇಷಧಾರೆಯ ಸಂಪ್ರದಾಯ’ ಈ ಕುರಿತು ಮಾತನಾಡಿದರು.</p>.<p>‘ಕಥಕ್ಕಳಿ, ಕೂಚುಪುಡಿ, ಯಕ್ಷಗಾನ ಹೀಗೆ ಹಲವು ಕಲಾಪ್ರಕಾರಗಳಲ್ಲಿ ಮಹಿಳೆಯರಿಗೆ ವೇದಿಕೆ ನಿರ್ಬಂಧ ಇದ್ದ ಕಾರಣ, ಪುರುಷರು ಸ್ತ್ರೀಪಾತ್ರಗಳನ್ನು ಪ್ರತಿನಿಧಿಸುವುದು ಅಗತ್ಯವಾಯಿತು ಎಂದರು. ಸ್ತ್ರೀವೇಷ ಕಲಾವಿದರು ಎದುರಿಸುವ ಸಾಮಾಜಿಕ ಮತ್ತು ಮಾನಸಿಕ ಸವಾಲುಗಳನ್ನು ಅವರು ತಿಳಿಸಿದರು.</p>.<p>ದೀಕ್ಷಿತ್ ಆರ್. ಪೈ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>