ಹಲಸಿನ ಋತು ಮುಗಿದ ಬಳಿಕವೂ ವಿವಿಧ ಬಗೆಯ ಹಲಸಿನ ಖಾದ್ಯಗಳ ಪ್ರದರ್ಶನ, ವಿವಿಧ ತಳಿಯ ಗಿಡಗಳು, ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಿದ್ದಾರೆ. 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ವ್ಯವಸ್ಥೆಗೊಳಿಸಲಾಗಿದೆ. ಆಸಕ್ತರು ಇದೇ 6ರೊಳಗೆ ಕಾಯ್ದಿರಿಸಲು ಅನಂತಪ್ರಸಾದ್ ನೈತ್ತಡ್ಕ (9611543386) ಮತ್ತು ಪಾಂಡುರಂಗ ಭಟ್ ಕುದಿಂಗಿಲ (9741810502) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.