<p><strong>ಮುಡಿಪು:</strong> ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳಿದ್ದು, ಓದು, ಕಠಿಣ ಪರಿಶ್ರಮದೊಂದಿಗೆ ಸವಾಲು ಎದುರಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.</p>.<p>ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ಎರಡು ದಿನ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನ ‘ಮ್ಯಾಗ್ನಂ’ ಹಾಗೂ ರಾಷ್ಟ್ರೀಯ ಮಟ್ಟದ ಕಾಮರ್ಸ್, ಮ್ಯಾನೇಜ್ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಕೈಗಾರಿಕೋದ್ಯಮ, ಬ್ಯಾಂಕಿಂಗ್ ಕ್ಷೇತ್ರಗಳು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೊಡಗಿಸಿಕೊಂಡು ಮುನ್ನಡೆದರೆ ಹೆಚ್ಚಿನ ಜ್ಞಾನ ಸಂಪಾದನೆಯೊಂದಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.</p>.<p>ಮಲೇಷ್ಯಾದ ಏಷಿಯನ್ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ನ ಪ್ರಾಧ್ಯಾಪಕ, ಮ್ಯಾನೇಜ್ಮೆಂಟ್ ಕೋಚ್ <a href="https://prajavani.quintype.com/story/5eb586d4-23df-4b6c-a579-76ea79a1f064">ಶರಣ್</a> ಕುಮಾರ್ ಶೆಟ್ಟಿ ಮಾತನಾಡಿ, ಕೈಗಾರಿಕೋದ್ಯಮ, ಬ್ಯಾಂಕಿಂಗ್, ವಾಣಿಜ್ಯೋದ್ಯಮ ಕ್ಷೇತ್ರಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯಬೇಕು ಎಂದರು.</p>.<p>ಕುಲಸಚಿವ ರಾಜು ಮೊಗವೀರ, ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ <a href="https://prajavani.quintype.com/story/5eb586d4-23df-4b6c-a579-76ea79a1f064">ಎಂ.ಪಿ.ಸುಬ್ರಹ್ಮಣ್ಯ</a> ಅವರು ಮಾತನಾಡಿದರು.</p>.<p>ವಿಭಾಗದ ಅಧ್ಯಕ್ಷರಾದ ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.</p>.<p>ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ನ ಅಧ್ಯಕ್ಷರಾದ ಅಜಿತ್ ಕಾಮತ್, ಬ್ಯಾಂಕ್ ಆಫ್ ಬರೋಡಾದ ವಲಯ ಜನರಲ್ ಮ್ಯಾನೇಜರ್ ರಾಜೇಶ್ ಖನ್ನ, ಯೂನಿಯನ್ ಬ್ಯಾಂಕ್ನ ವಲಯ ಜನರಲ್ ಮ್ಯಾನೇಜರ್ ರೇಣುಕಾನಾಯರ್, ಪ್ರಾಧ್ಯಾಪಕರಾದ <a href="https://prajavani.quintype.com/story/5eb586d4-23df-4b6c-a579-76ea79a1f064">ಈಶ್ವರ</a> ಪಿ, <a href="https://prajavani.quintype.com/story/5eb586d4-23df-4b6c-a579-76ea79a1f064">ಮುನಿರಾಜು</a>, <a href="https://prajavani.quintype.com/story/5eb586d4-23df-4b6c-a579-76ea79a1f064">ವೇದವ</a> ಪಿ., <a href="https://prajavani.quintype.com/story/5eb586d4-23df-4b6c-a579-76ea79a1f064">ಪರಮೇಶ್ಚರ</a>, ಉಪನ್ಯಾಸಕರಾದ <a href="https://prajavani.quintype.com/story/5eb586d4-23df-4b6c-a579-76ea79a1f064">ದಿನಕರ</a>, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಶಿವಪ್ರಸಾದ್, ಮನ್ವಿತ್ ಶೆಟ್ಟಿ, ಭೂಮಿಕಾ <a href="https://prajavani.quintype.com/story/5eb586d4-23df-4b6c-a579-76ea79a1f064">ಕೆ.ಆರ್.</a>, ಮಹಂತೇಶ್, ರೇಖಾ ಕೆ.ಪಿ, ಶರಣ್ಯ, ವೆಂಕಟೇಶ್, ಪವಿತ್ರಾ, ಪಿ.ಖೈರುನ್ನಿಸಾ ಭಾಗವಹಿಸಿದ್ದರು.</p>.<p>ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಶ್ಮಿತಾ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಡಿಪು:</strong> ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳಿದ್ದು, ಓದು, ಕಠಿಣ ಪರಿಶ್ರಮದೊಂದಿಗೆ ಸವಾಲು ಎದುರಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.</p>.<p>ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ಎರಡು ದಿನ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನ ‘ಮ್ಯಾಗ್ನಂ’ ಹಾಗೂ ರಾಷ್ಟ್ರೀಯ ಮಟ್ಟದ ಕಾಮರ್ಸ್, ಮ್ಯಾನೇಜ್ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಕೈಗಾರಿಕೋದ್ಯಮ, ಬ್ಯಾಂಕಿಂಗ್ ಕ್ಷೇತ್ರಗಳು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೊಡಗಿಸಿಕೊಂಡು ಮುನ್ನಡೆದರೆ ಹೆಚ್ಚಿನ ಜ್ಞಾನ ಸಂಪಾದನೆಯೊಂದಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.</p>.<p>ಮಲೇಷ್ಯಾದ ಏಷಿಯನ್ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ನ ಪ್ರಾಧ್ಯಾಪಕ, ಮ್ಯಾನೇಜ್ಮೆಂಟ್ ಕೋಚ್ <a href="https://prajavani.quintype.com/story/5eb586d4-23df-4b6c-a579-76ea79a1f064">ಶರಣ್</a> ಕುಮಾರ್ ಶೆಟ್ಟಿ ಮಾತನಾಡಿ, ಕೈಗಾರಿಕೋದ್ಯಮ, ಬ್ಯಾಂಕಿಂಗ್, ವಾಣಿಜ್ಯೋದ್ಯಮ ಕ್ಷೇತ್ರಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯಬೇಕು ಎಂದರು.</p>.<p>ಕುಲಸಚಿವ ರಾಜು ಮೊಗವೀರ, ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ <a href="https://prajavani.quintype.com/story/5eb586d4-23df-4b6c-a579-76ea79a1f064">ಎಂ.ಪಿ.ಸುಬ್ರಹ್ಮಣ್ಯ</a> ಅವರು ಮಾತನಾಡಿದರು.</p>.<p>ವಿಭಾಗದ ಅಧ್ಯಕ್ಷರಾದ ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.</p>.<p>ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ನ ಅಧ್ಯಕ್ಷರಾದ ಅಜಿತ್ ಕಾಮತ್, ಬ್ಯಾಂಕ್ ಆಫ್ ಬರೋಡಾದ ವಲಯ ಜನರಲ್ ಮ್ಯಾನೇಜರ್ ರಾಜೇಶ್ ಖನ್ನ, ಯೂನಿಯನ್ ಬ್ಯಾಂಕ್ನ ವಲಯ ಜನರಲ್ ಮ್ಯಾನೇಜರ್ ರೇಣುಕಾನಾಯರ್, ಪ್ರಾಧ್ಯಾಪಕರಾದ <a href="https://prajavani.quintype.com/story/5eb586d4-23df-4b6c-a579-76ea79a1f064">ಈಶ್ವರ</a> ಪಿ, <a href="https://prajavani.quintype.com/story/5eb586d4-23df-4b6c-a579-76ea79a1f064">ಮುನಿರಾಜು</a>, <a href="https://prajavani.quintype.com/story/5eb586d4-23df-4b6c-a579-76ea79a1f064">ವೇದವ</a> ಪಿ., <a href="https://prajavani.quintype.com/story/5eb586d4-23df-4b6c-a579-76ea79a1f064">ಪರಮೇಶ್ಚರ</a>, ಉಪನ್ಯಾಸಕರಾದ <a href="https://prajavani.quintype.com/story/5eb586d4-23df-4b6c-a579-76ea79a1f064">ದಿನಕರ</a>, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಶಿವಪ್ರಸಾದ್, ಮನ್ವಿತ್ ಶೆಟ್ಟಿ, ಭೂಮಿಕಾ <a href="https://prajavani.quintype.com/story/5eb586d4-23df-4b6c-a579-76ea79a1f064">ಕೆ.ಆರ್.</a>, ಮಹಂತೇಶ್, ರೇಖಾ ಕೆ.ಪಿ, ಶರಣ್ಯ, ವೆಂಕಟೇಶ್, ಪವಿತ್ರಾ, ಪಿ.ಖೈರುನ್ನಿಸಾ ಭಾಗವಹಿಸಿದ್ದರು.</p>.<p>ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಶ್ಮಿತಾ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>