ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಬಾಂಬ್ ಪ್ರಕರಣವನ್ನುಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ವ್ಯಕ್ತಿಯನ್ನು ಬಂಧನ ಮಾಡಿದ್ದು, ಈ ವ್ಯಕ್ತಿ ಬಾಂಬ್ ಇಟ್ಟು ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ ತಲುಪಿದ್ದಾನೆ. ಪೊಲೀಸ್ ಇಲಾಖೆಯವರು ಅಲ್ಲಿಯವರೆಗೂಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.
ಸಮುದಾಯಗಳ ನಡುವೆ ಕಂದಕ ಸೃಷ್ಟಿ ಉಂಟುಮಾಡುವ ಇಂತಹ ಘಟನೆಗಳನ್ನು ಸರಕಾರ ಕೂಡಲೇ ಮಟ್ಟಹಾಕಬೇಕು. ಈ ಕೃತ್ಯದಲ್ಲಿ ಕಾಣದ ಕೈಗಳಿವೆಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಖಾದರ್ ಅವರು ಒತ್ತಾಯಿಸಿದರು.