ಮಂಗಳೂರಿನಲ್ಲಿ ದಸರಾ ಆಚರಣೆ ಅನೇಕ ವರ್ಷಗಳಿಂದ ಪರಿವರ್ತನೆಗಳನ್ನು ಕಂಡು ಈಗ ಜನಾಕರ್ಷಣೆಯ ಹಬ್ಬವಾಗಿ ಮಾರ್ಪಟ್ಟಿದೆ ಎಂದು ಸಾಂಸ್ಕೃತಿಕ ಚಿಂತಕ ಭಾಸ್ಕರ ರೈ ಕುಕ್ಕುವಳ್ಳಿ ಅಭಿಪ್ರಾಯಪಟ್ಟರು. ಹಿಂದೆಲ್ಲ ಭಜನೆ, ಪೂಜೆ, ಅರ್ಚನೆಗೆ ಆದ್ಯತೆ ಇತ್ತು. ಈಗ ಅವೆಲ್ಲವೂ ಹಾಗೆಯೇ ಉಳಿದುಕೊಂಡಿದ್ದು ಜೊತೆಯಲ್ಲಿ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿಕೊಂಡು ಹೆಚ್ಚು ಮುನ್ನೆಲೆಗೆ ಬಂದಿದೆ. ಇದರಿಂದ ವ್ಯಾವಹಾರಿಕವಾಗಿಯೂ ಅಭಿವೃದ್ಧಿಗೆ ಹಬ್ಬ ಕಾರಣವಾಗಿದೆ. ಕರ್ಮಚಾರಿಗಳ ಕೈಗೆ ಕೆಲಸವೂ ಸಿಗುತ್ತಿದೆ. ಈ ನಿಟ್ಟಿನಲ್ಲಿ ಪರಿವರ್ತನೆಯಿಂದ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಮಂಗಳೂರು ದಸರಾ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರದ ಸಿದ್ಧತೆ ನಡೆಯುತ್ತಿದೆ ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
ಮಂಗಳೂರು ದಸರಾ ಪ್ರಯುಕ್ತ ನಗರದ ಕುದ್ರೋಳಿ ದೇವಸ್ಥಾನದಲ್ಲಿ ಸಿದ್ಧತೆ ಹಾಗು ಸ್ಚಚ್ಛತಾ ಕೆಲಸ ನಡೆಯುತ್ತಿದೆ ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್