‘ಗೌರವ್ ಅವರು ಕೂಳೂರಿನಿಂದ ಬೋಳಾರಕ್ಕೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಅವರ ಎದೆಯ ಮೇಲೆ ಟ್ಯಾಂಕರ್ನ ಎಡಬದಿಯ ಮುಂಬದಿ ಮತ್ತು ಹಿಂಬದಿಯ ಚಕ್ರಗಳು ಹರಿದಿದ್ದವು. ಸ್ಥಳದಲ್ಲಿದ್ದವರು ಅವರನ್ನು ಎ.ಜೆ. ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.