<p><strong>ಮಂಗಳೂರು:</strong> ಉಳ್ಳಾಲದ ಕೋಟೆಪುರದಿಂದ ತಲಪಾಡಿವರೆಗೆ ಸೀ–ಫ್ರಂಟ್ ರಸ್ತೆ ಅಭಿವೃದ್ಧಿ ಯೋಜನೆಯ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಅಂದಾಜು ₹ 1 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.</p>.<p> ಇಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕಲ್ಲಾಪು– ಹರೇಕಳ –ಪಾವೂರುವರೆಗೆ ರಿವರ್ ಫ್ರಂಟ್ ರಸ್ತೆ ನಿರ್ಮಿಸಲಾಗುತ್ತಿದೆ. ಸುಮಾರು ₹ 160 ಕೋಟಿ ಮೊತ್ತದ ಯೋಜನೆ ಇದು. ಇದರಲ್ಲಿ ₹ 20 ಕೋಟಿ ಮೊತ್ತದ ಕಾಮಗಾರಿ ಈಗಾಗಲೇ ಶುರುವಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದರು.</p>.<p>‘ತುಂಬೆ ಹಾಗೂ ಅಡ್ಯಾರ್ ಅಣೆಕಟ್ಟೆ ಜಲಾಶಯ ಪಕ್ಕದ ಗ್ರಾಮಗಳಲ್ಲಿ ಮುಳುಗಡೆಯಾಗುವ ಜಮೀನುಗಳಿಗೆ ₹ 180 ಕೋಟಿ ಪರಿಹಾರ ನೀಡಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ರಿವರ್ ಫ್ರಂಟ್ ಯೋಜನೆ ರೂಪಿಸಲಾಗಿದೆ. ಭೂ ಪರಿಹಾರ ನೀಡಲು ಬೇಕಾದಕ್ಕಿಂತ ಕಡಮೆ ಖರ್ಚಿನಲ್ಲಿ ರಸ್ತೆ ಸೌಕರ್ಯ ನಿರ್ಮಾಣ ಮಾಡಬಹುದು. ಭೂಮಿ ಮುಳುಗಡೆಯಾಗಬೇಕಿದ್ದ ಭೂಮಿಯನ್ನೂ ಉಳಿಸಿಕೊಳ್ಳಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಉಳ್ಳಾಲದ ಕೋಟೆಪುರದಿಂದ ತಲಪಾಡಿವರೆಗೆ ಸೀ–ಫ್ರಂಟ್ ರಸ್ತೆ ಅಭಿವೃದ್ಧಿ ಯೋಜನೆಯ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಅಂದಾಜು ₹ 1 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.</p>.<p> ಇಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕಲ್ಲಾಪು– ಹರೇಕಳ –ಪಾವೂರುವರೆಗೆ ರಿವರ್ ಫ್ರಂಟ್ ರಸ್ತೆ ನಿರ್ಮಿಸಲಾಗುತ್ತಿದೆ. ಸುಮಾರು ₹ 160 ಕೋಟಿ ಮೊತ್ತದ ಯೋಜನೆ ಇದು. ಇದರಲ್ಲಿ ₹ 20 ಕೋಟಿ ಮೊತ್ತದ ಕಾಮಗಾರಿ ಈಗಾಗಲೇ ಶುರುವಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದರು.</p>.<p>‘ತುಂಬೆ ಹಾಗೂ ಅಡ್ಯಾರ್ ಅಣೆಕಟ್ಟೆ ಜಲಾಶಯ ಪಕ್ಕದ ಗ್ರಾಮಗಳಲ್ಲಿ ಮುಳುಗಡೆಯಾಗುವ ಜಮೀನುಗಳಿಗೆ ₹ 180 ಕೋಟಿ ಪರಿಹಾರ ನೀಡಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ರಿವರ್ ಫ್ರಂಟ್ ಯೋಜನೆ ರೂಪಿಸಲಾಗಿದೆ. ಭೂ ಪರಿಹಾರ ನೀಡಲು ಬೇಕಾದಕ್ಕಿಂತ ಕಡಮೆ ಖರ್ಚಿನಲ್ಲಿ ರಸ್ತೆ ಸೌಕರ್ಯ ನಿರ್ಮಾಣ ಮಾಡಬಹುದು. ಭೂಮಿ ಮುಳುಗಡೆಯಾಗಬೇಕಿದ್ದ ಭೂಮಿಯನ್ನೂ ಉಳಿಸಿಕೊಳ್ಳಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>