<p><strong>ಉಳ್ಳಾಲ</strong>: ಮಂಜನಾಡಿ ಉರುಮಣೆಕೋಡಿ ನಡೆದಿದ್ದ ಭೂ ಕುಸಿತಕ್ಕೆ ಸಂಬಂಧಿಸಿ ತನಿಖಾ ತಂಡ ಭೇಟಿ ನೀಡಿ ಕಾಂಕ್ರೀಟಿಕರಣ ರಸ್ತೆ, ಮಣ್ಣು ಮತ್ತು ಕುಸಿತಗೊಂಡಿರುವ ಮನೆಯ ಸುತ್ತ ಪರಿಶೀಲನೆ ನಡೆಸಿತು. </p>.<p>ಭೂ ಕುಸಿತದಿಂದಾಗಿ ಎರಡು ಕಾಲುಗಳನ್ನು ಕಳೆದುಕೊಂಡಿರುವ ಅಶ್ವಿನಿ ಅವರಿಗೆ ಘಟನಾ ಸ್ಥಳಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಅಧಿಕಾರಿಗಳು, ಬುಧವಾರ ಗೈರಾಗಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದನ್ನು ಗಮನಿಸಿದ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು. </p>.<p>ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದ ತನಿಖಾಧಿಕಾರಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಯಪ್ರಕಾಶ್, ಉಳ್ಳಾಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್, ಜಿಲ್ಲಾ ಪಂಚಾಯಿತಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿತೇಶ್, ಪಿಡಿಒ ರಮ್ಯಾ ಒಳಗೊಂಡ ನಿಯೋಗವು ಮಧ್ಯಾಹ್ನ 2 ಗಂಟೆಯ ವೇಳೆ ಭೇಟಿ ನೀಡಿತು.</p>.<p>‘ಕಾಂಕ್ರೀಟಿಕರಣಗೊಂಡಿರುವ ರಸ್ತೆಯ ಆರಂಭದಿಂದ ಕೊನೆಯವರೆಗೆ, ದುರ್ಘಟನೆ ಸಂಭವಿಸಿದ ಮನೆಯವರೆಗೆ, ಮನೆಯ ಹಿಂಭಾಗದಿಂದ ಗುಡ್ಡ, ಮನೆ ಸಮೀಪದ ಹಳ್ಳದಿಂದ ಮನೆಯ ಹಿಂಭಾಗದ ಗುಡ್ಡದವರೆಗೆ ಅಳತೆ ಮಾಡಲಾಗಿದೆ. ವಸ್ತುನಿಷ್ಠ ವರದಿ ಕೊಡುವ ಪ್ರಯತ್ನ ಮಾಡುತ್ತೇನೆ. ಈ ಮನೆಯವರು 2013ರಲ್ಲಿ ಬಸವ ಕಲ್ಯಾಣ ಯೋಜನೆಯ ಫಲಾನುಭವಿಗಳು. ಆ ವೇಳೆ ಆರ್ಸಿಸಿ ಮನೆ ಕಟ್ಟಿದ್ದಾರೆ. ಅದರ ಹಿಂದೆ ಹೆಂಚಿನ ಮನೆಯ ಕುರಿತು ಮಾಹಿತಿಯಿಲ್ಲ. ಕಾಂಕ್ರೀಟಿಕರಣಕ್ಕೆ ಯಂತ್ರ ಬಳಸಿರುವುದು ಗುಡ್ಡದಲ್ಲಿ ಕಂಡ ಕುರುಹುಗಳಲ್ಲಿ ಗೋಚರಿಸುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.</p>.<p>ಅಶ್ವಿನಿ ಸಹೋದರ ಪವನ್, ಪತಿ ಸೀತಾರಾಮ, ಸಂಬಂಧಿ ಸುಮಲತಾ ಕೊಣಾಜೆ, ಬಿಜೆಪಿ ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಮುರಳೀಧರ್ ಕೊಣಾಜೆ, ಪುಷ್ಪರಾಜ್ ಹರೇಕಳ ಹಾಜರಿದ್ದರು.</p>.<p>ಮೇ 30ರಂದು ಸಂಭವಿಸಿದ ಭೂ ಕುಸಿತದಲ್ಲಿ ಮನೆಯ ಯಜಮಾನ ಕಾಂತಪ್ಪ ಪೂಜಾರಿ ಕಾಲು ತುಂಡಾಗಿತ್ತು, ಅವರ ಪತ್ನಿ ಪ್ರೇಮಾ, ಮೊಮ್ಮಕ್ಕಳಾದ ಆರ್ಯನ್, ಆರುಷ್ ಮೃತಪಟ್ಟಿದ್ದರು. ಈ ಮಕ್ಕಳ ತಾಯಿ ಅಶ್ವಿನಿ ಎರಡು ಕಾಲುಗಳನ್ನು ಕಳೆದುಕೊಂಡು ಜೀವನ ನಡೆಸುತ್ತಿದ್ದಾರೆ.</p>.<p>ಘಟನೆಗೆ ಮಳೆ ಮಾತ್ರ ಕಾರಣವಲ್ಲ, ಮನೆ ಮೇಲಿನ ಗುಡ್ಡ ಕಡಿದು ನಿರ್ಮಿಸಿದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯೂ ಕಾರಣವಾಗಿದೆ ಎಂದು ಕುಟುಂಬಸ್ಥರು ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. </p>.<p>ಕುಸಿದುಬಿದ್ದ ಮನೆಯ ಅವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿ ಗುರುದತ್ ಅವರಲ್ಲಿ ಒತ್ತಾಯಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಳ್ಳಾಲ</strong>: ಮಂಜನಾಡಿ ಉರುಮಣೆಕೋಡಿ ನಡೆದಿದ್ದ ಭೂ ಕುಸಿತಕ್ಕೆ ಸಂಬಂಧಿಸಿ ತನಿಖಾ ತಂಡ ಭೇಟಿ ನೀಡಿ ಕಾಂಕ್ರೀಟಿಕರಣ ರಸ್ತೆ, ಮಣ್ಣು ಮತ್ತು ಕುಸಿತಗೊಂಡಿರುವ ಮನೆಯ ಸುತ್ತ ಪರಿಶೀಲನೆ ನಡೆಸಿತು. </p>.<p>ಭೂ ಕುಸಿತದಿಂದಾಗಿ ಎರಡು ಕಾಲುಗಳನ್ನು ಕಳೆದುಕೊಂಡಿರುವ ಅಶ್ವಿನಿ ಅವರಿಗೆ ಘಟನಾ ಸ್ಥಳಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಅಧಿಕಾರಿಗಳು, ಬುಧವಾರ ಗೈರಾಗಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದನ್ನು ಗಮನಿಸಿದ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು. </p>.<p>ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದ ತನಿಖಾಧಿಕಾರಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಯಪ್ರಕಾಶ್, ಉಳ್ಳಾಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್, ಜಿಲ್ಲಾ ಪಂಚಾಯಿತಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿತೇಶ್, ಪಿಡಿಒ ರಮ್ಯಾ ಒಳಗೊಂಡ ನಿಯೋಗವು ಮಧ್ಯಾಹ್ನ 2 ಗಂಟೆಯ ವೇಳೆ ಭೇಟಿ ನೀಡಿತು.</p>.<p>‘ಕಾಂಕ್ರೀಟಿಕರಣಗೊಂಡಿರುವ ರಸ್ತೆಯ ಆರಂಭದಿಂದ ಕೊನೆಯವರೆಗೆ, ದುರ್ಘಟನೆ ಸಂಭವಿಸಿದ ಮನೆಯವರೆಗೆ, ಮನೆಯ ಹಿಂಭಾಗದಿಂದ ಗುಡ್ಡ, ಮನೆ ಸಮೀಪದ ಹಳ್ಳದಿಂದ ಮನೆಯ ಹಿಂಭಾಗದ ಗುಡ್ಡದವರೆಗೆ ಅಳತೆ ಮಾಡಲಾಗಿದೆ. ವಸ್ತುನಿಷ್ಠ ವರದಿ ಕೊಡುವ ಪ್ರಯತ್ನ ಮಾಡುತ್ತೇನೆ. ಈ ಮನೆಯವರು 2013ರಲ್ಲಿ ಬಸವ ಕಲ್ಯಾಣ ಯೋಜನೆಯ ಫಲಾನುಭವಿಗಳು. ಆ ವೇಳೆ ಆರ್ಸಿಸಿ ಮನೆ ಕಟ್ಟಿದ್ದಾರೆ. ಅದರ ಹಿಂದೆ ಹೆಂಚಿನ ಮನೆಯ ಕುರಿತು ಮಾಹಿತಿಯಿಲ್ಲ. ಕಾಂಕ್ರೀಟಿಕರಣಕ್ಕೆ ಯಂತ್ರ ಬಳಸಿರುವುದು ಗುಡ್ಡದಲ್ಲಿ ಕಂಡ ಕುರುಹುಗಳಲ್ಲಿ ಗೋಚರಿಸುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.</p>.<p>ಅಶ್ವಿನಿ ಸಹೋದರ ಪವನ್, ಪತಿ ಸೀತಾರಾಮ, ಸಂಬಂಧಿ ಸುಮಲತಾ ಕೊಣಾಜೆ, ಬಿಜೆಪಿ ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಮುರಳೀಧರ್ ಕೊಣಾಜೆ, ಪುಷ್ಪರಾಜ್ ಹರೇಕಳ ಹಾಜರಿದ್ದರು.</p>.<p>ಮೇ 30ರಂದು ಸಂಭವಿಸಿದ ಭೂ ಕುಸಿತದಲ್ಲಿ ಮನೆಯ ಯಜಮಾನ ಕಾಂತಪ್ಪ ಪೂಜಾರಿ ಕಾಲು ತುಂಡಾಗಿತ್ತು, ಅವರ ಪತ್ನಿ ಪ್ರೇಮಾ, ಮೊಮ್ಮಕ್ಕಳಾದ ಆರ್ಯನ್, ಆರುಷ್ ಮೃತಪಟ್ಟಿದ್ದರು. ಈ ಮಕ್ಕಳ ತಾಯಿ ಅಶ್ವಿನಿ ಎರಡು ಕಾಲುಗಳನ್ನು ಕಳೆದುಕೊಂಡು ಜೀವನ ನಡೆಸುತ್ತಿದ್ದಾರೆ.</p>.<p>ಘಟನೆಗೆ ಮಳೆ ಮಾತ್ರ ಕಾರಣವಲ್ಲ, ಮನೆ ಮೇಲಿನ ಗುಡ್ಡ ಕಡಿದು ನಿರ್ಮಿಸಿದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯೂ ಕಾರಣವಾಗಿದೆ ಎಂದು ಕುಟುಂಬಸ್ಥರು ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. </p>.<p>ಕುಸಿದುಬಿದ್ದ ಮನೆಯ ಅವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿ ಗುರುದತ್ ಅವರಲ್ಲಿ ಒತ್ತಾಯಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>