ಉಳ್ಳಾಲ ಸಮೀಪದ ಸಮುದ್ರ ಮಧ್ಯೆ ಕೆಲ ವರ್ಷಗಳ ಹಿಂದೆ ಮುಳುಗಿದ್ದ ಹಡಗಿಗೆ, ಈ ಮೀನುಗಾರಿಕೆ ಬೋಟ್ ಡಿಕ್ಕಿ ಹೊಡೆದು, ನೀರಿನಲ್ಲಿ ಮಗುಚಿ ಬಿದ್ದಿದೆ. ಬೋಟ್ನಲ್ಲಿ 11 ಕಾರ್ಮಿಕರಿದ್ದು, ಕೂಡಲೇ ಅವರನ್ನು ಹಿಂದಿನಿಂದ ಬರುತ್ತಿದ್ದ ಬೋಟ್ನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. 10 ಮಂದಿ ಈಜಿ, ಇನ್ನೊಂದು ಬೋಟ್ನ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ತಮಿಳುನಾಡಿನ ಕಾರ್ಮಿಕ ನೀರಿನಲ್ಲಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.