‘ಮಧ್ಯಾಹ್ನ 2.30ರವರೆ ಸುಮಾರಿಗೆ ಸಮಾಜ ಕಲ್ಯಾಣಾಧಿಕಾರಿ ಕಚೇರಿಗೆ ಹಿಂತಿರುಗಿದರು. ಅಲ್ಲಿಯವರೆಗೂ ನಾವು ಧರಣಿ ಕುಳಿತಿದ್ದೆವು. ಅವರು ನಮ್ಮ ವಸತಿನಿಲಯದ ವಾರ್ಡನ್ರನ್ನು ಕರೆಸಿದರು. ಬಳಿಕ ಮಾತುಕತೆ ನಡೆಸಿದರು. ಸರ್ಕಾರಕ್ಕೆ ಈ ಬಗ್ಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಸೋಪು ಒದಗಿಸಲು ಕ್ರಮ ವಹಿಸಲಾಗುವುದು ಎಂದು ವಾರ್ಡನ್ ತಿಳಿಸಿದರು. ಈ ಇಬ್ಬರ ಭರವಸೆಯ ಬಳಿಕ ಪ್ರತಿಭಟನೆ ನಿಲ್ಲಿಸಿದ್ದೇವೆ’ ಎಂದು ಕಿರಣ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.