<p><strong>ಜಗಳೂರು</strong>: ಕಟಾವಾಗಿದ್ದ ಎಲೆಕೋಸನ್ನು ಸತತ ಮಳೆಯ ಪರಿಣಾಮ ಜಮೀನಿನಿಂದ ಹೊರಗೆ ಸಾಗಣೆ ಮಾಡಲು ಸಾಧ್ಯವಾಗದೇ ಬೇಸತ್ತ ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ನೆಲಸಮಗೊಳಿಸಿದ್ದಾರೆ.</p>.<p>ರೈತ ಮಲ್ಲೇಶ್ ಅವರು ಒಂದು ಎಕರೆಯಲ್ಲಿ ₹80,000 ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಬೆಳೆ ಕಟಾವು ಹಂತಕ್ಕೆ ಬಂದ ಸಮಯದಲ್ಲಿ ಸತತ ಒಂದು ತಿಂಗಳಿಂದ ಬಿಡುವಿಲ್ಲದೇ ಮಳೆ ಸುರಿಯಿತು. ಹೀಗಾಗಿ ವ್ಯಾಪಾರಕ್ಕೆ ಯಾರೂ ಮುಂದಾಗಲಿಲ್ಲ. ಮಾರುಕಟ್ಟೆಯಲ್ಲಿಯೂ ಸೂಕ್ತ ಬೆಲೆಯಿಲ್ಲದ ಕಾರಣ ಅವರು ಫಸಲನ್ನು ತೆರವುಗೊಳಿಸಿದ್ದಾರೆ. </p>.<p>‘ತೋಟಗಾರಿಕಾ ಬೆಳೆ ಎಲೆಕೋಸು ಲಾಭ ತರಬಹುದು ಎಂಬ ನಿರೀಕ್ಷೆಯಲ್ಲಿ ನಾಟಿ ಮಾಡಿದ್ದೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹8 ದರ ಇತ್ತು. 20 ಟನ್ನಷ್ಟು ಎಲೆಕೋಸನ್ನು ಮಳೆ ಬಂದ ಕಾರಣ ವಾಹನಕ್ಕೆ ಲೋಡ್ ಮಾಡಲು ಸಾಧ್ಯವಗಲಿಲ್ಲ. ಈ ವೇಳೆಗೆ ಕಟಾವು ಅವಧಿಯೂ ಮೀರಿತ್ತು. ಯಾರೊಬ್ಬರೂ ಖರೀದಿಸಲು ಮುಂದಾಗಲಿಲ್ಲ. ಆದ್ದರಿಂದ ರೊಟವೇಟರ್ ಹೊಡೆಸಿ ಬೆಳೆಯನ್ನು ನೆಲದಲ್ಲೇ ಕೊಚ್ಚಬೇಕಾಯಿತು’ ಎಂದು ಮಲ್ಲೇಶ್ ಬೇಸರ ವ್ಯಕ್ತಪಡಿಸಿದರು.</p>.<p>‘ರೈತರಿಗೆ ಬೆಳೆ ಹಾನಿಯಾಗಿದ್ದರೆ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು. ಎಲೆಕೋಸು ಬೆಳೆ ಅತಿವೃಷ್ಟಿಗೆ ತುತ್ತಾದರೆ ಇಳುವರಿ ಕಡಿಮೆಯಾಗುತ್ತದೆ. ರೈತರು ಆತಂಕಕ್ಕೊಳಗಾಗದೇ ಇಲಾಖೆಯ ಮಾರ್ಗದರ್ಶನ ಪಡೆದು ಹವಾಮಾನದ ಅನುಸಾರ ತೋಟಗಾರಿಕೆ ಬೆಳೆಗೆ ಮುಂದಾಗಬೇಕು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು</strong>: ಕಟಾವಾಗಿದ್ದ ಎಲೆಕೋಸನ್ನು ಸತತ ಮಳೆಯ ಪರಿಣಾಮ ಜಮೀನಿನಿಂದ ಹೊರಗೆ ಸಾಗಣೆ ಮಾಡಲು ಸಾಧ್ಯವಾಗದೇ ಬೇಸತ್ತ ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ನೆಲಸಮಗೊಳಿಸಿದ್ದಾರೆ.</p>.<p>ರೈತ ಮಲ್ಲೇಶ್ ಅವರು ಒಂದು ಎಕರೆಯಲ್ಲಿ ₹80,000 ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಬೆಳೆ ಕಟಾವು ಹಂತಕ್ಕೆ ಬಂದ ಸಮಯದಲ್ಲಿ ಸತತ ಒಂದು ತಿಂಗಳಿಂದ ಬಿಡುವಿಲ್ಲದೇ ಮಳೆ ಸುರಿಯಿತು. ಹೀಗಾಗಿ ವ್ಯಾಪಾರಕ್ಕೆ ಯಾರೂ ಮುಂದಾಗಲಿಲ್ಲ. ಮಾರುಕಟ್ಟೆಯಲ್ಲಿಯೂ ಸೂಕ್ತ ಬೆಲೆಯಿಲ್ಲದ ಕಾರಣ ಅವರು ಫಸಲನ್ನು ತೆರವುಗೊಳಿಸಿದ್ದಾರೆ. </p>.<p>‘ತೋಟಗಾರಿಕಾ ಬೆಳೆ ಎಲೆಕೋಸು ಲಾಭ ತರಬಹುದು ಎಂಬ ನಿರೀಕ್ಷೆಯಲ್ಲಿ ನಾಟಿ ಮಾಡಿದ್ದೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹8 ದರ ಇತ್ತು. 20 ಟನ್ನಷ್ಟು ಎಲೆಕೋಸನ್ನು ಮಳೆ ಬಂದ ಕಾರಣ ವಾಹನಕ್ಕೆ ಲೋಡ್ ಮಾಡಲು ಸಾಧ್ಯವಗಲಿಲ್ಲ. ಈ ವೇಳೆಗೆ ಕಟಾವು ಅವಧಿಯೂ ಮೀರಿತ್ತು. ಯಾರೊಬ್ಬರೂ ಖರೀದಿಸಲು ಮುಂದಾಗಲಿಲ್ಲ. ಆದ್ದರಿಂದ ರೊಟವೇಟರ್ ಹೊಡೆಸಿ ಬೆಳೆಯನ್ನು ನೆಲದಲ್ಲೇ ಕೊಚ್ಚಬೇಕಾಯಿತು’ ಎಂದು ಮಲ್ಲೇಶ್ ಬೇಸರ ವ್ಯಕ್ತಪಡಿಸಿದರು.</p>.<p>‘ರೈತರಿಗೆ ಬೆಳೆ ಹಾನಿಯಾಗಿದ್ದರೆ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು. ಎಲೆಕೋಸು ಬೆಳೆ ಅತಿವೃಷ್ಟಿಗೆ ತುತ್ತಾದರೆ ಇಳುವರಿ ಕಡಿಮೆಯಾಗುತ್ತದೆ. ರೈತರು ಆತಂಕಕ್ಕೊಳಗಾಗದೇ ಇಲಾಖೆಯ ಮಾರ್ಗದರ್ಶನ ಪಡೆದು ಹವಾಮಾನದ ಅನುಸಾರ ತೋಟಗಾರಿಕೆ ಬೆಳೆಗೆ ಮುಂದಾಗಬೇಕು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>