ನೀರು ನುಗ್ಗಿ ಸಾವಿರಾರು ಎಕರೆ ಭತ್ತ, ತೋಟದ ಬೆಳೆ ನಾಶವಾಗಿದ್ದು, ಮುಕ್ತೇನಹಳ್ಳಿ ಸಂಕ್ಲೀಪುರ ರಸ್ತೆಯೂ ಹಾಳಾಗಿದೆ. ರೈತರಿಗೆ ಅಪಾರ ನಷ್ಟ ಉಂಟಾಗಿದ್ದು, ಕರ್ನಾಟಕ ನೀರಾವರಿ ನಿಗಮದಿಂದ ಹೊಸ ಗೇಟ್ ಅಳವಡಿಸುವ ₹ 40 ಲಕ್ಷ ವೆಚ್ಚದ ಕೆಲಸ ನನೆಗುದಿಗೆ ಬಿದ್ದಿದೆ ಎಂದು ರೈತರಾದ ಪರಮೇಶ್ ಗೌಡ, ಚಂದ್ರು, ಹನುಮಂತು, ನಿಂಗಪ್ಪ, ಮಹಂತೇಶ್, ಗುಡ್ಡಪ್ಪ, ಬಸಪ್ಪ ಆರೋಪಿಸಿದರು.