<p><strong>ದಾವಣಗೆರೆ:</strong> ಆರೋಗ್ಯ ಮತ್ತು ಆರ್ಥಿಕತೆಗೆ ಕೊರೊನಾ ನೀಡಿದ ಹೊಡೆತದ ಬಳಿಕವೂ ಜನರಲ್ಲಿ ಹಬ್ಬ ಮಾಡುವ ಉತ್ಸಾಹ ಕುಂದಿಲ್ಲ. ಹಾಗಾಗಿ ದೀಪಾವಳಿಗೆ ಖರೀದಿಯು ಶನಿವಾರವೂ ಉತ್ಸಾಹದಿಂದ ನಡೆಯಿತು.</p>.<p>ಜಯದೇವ ಸರ್ಕಲ್ನಿಂದ ಪಿ.ಬಿ.ರೋಡ್ವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆವರೆಗೆ ವ್ಯಾಪಾರ ನೂಕುನುಗ್ಗಲಿಲ್ಲದೇ ನಡೆಯಿತು. ಸೂರ್ಯ ಪಶ್ಚಿಮದ ಕಡೆ ಹೋಗುತ್ತಿದ್ದಂತೆ ಮಾರುಕಟ್ಟೆಗೆ ಧಾವಿಸುವವರ ಸಂಖ್ಯೆ ಒಂದೇ ಸಮನೆ ಹೆಚ್ಚಾಯಿತು.</p>.<p>ಹೈಸ್ಕೂಲ್ ಮೈದಾನದಲ್ಲಿದ್ದ ಪಟಾಕಿ ಮಳಿಗೆಗಳಿಗೆ ಹಿಂದಿನಂತೆ ಜನ ಮುಗಿಬಿದ್ದಿಲ್ಲ. ಆದರೆ ಇತಿಮಿತಿಯಲ್ಲಿ ಪಟಾಕಿ ಇರಲಿ ಎಂದು ಜನರು ಬಂದು ಖರೀದಿಸುತ್ತಿದ್ದರು.</p>.<p><strong>ಏರಿದ ಬೆಲೆ: </strong>ಎಲ್ಲ ಹಣ್ಣುಗಳಿಗೆ ಹಬ್ಬದ ಪ್ರಯುಕ್ತ ₹ 20ರಿಂದ ₹ 50ರಷ್ಟು ಏರಿಕೆಯಾಗಿತ್ತು. ಬಾಳೆಹಣ್ಣು ಡಜನ್ಗೆ ₹ 55ರಿಂದ 65, ದಾಳಿಂಬೆ ₹ 210, ಸೇಬು ₹ 150, ಸಪೋಟ ₹ 80, ದ್ರಾಕ್ಷಿ ₹ 200–220ರಂತೆ ಖರೀದಿ ನಡೆಯಿತು.</p>.<p>ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ ಕನಕಾಂಬರ ಹೂವುಗಳಿಗೆ ಮಾರಿಗೆ ₹ 80ರಿಂದ ₹ 100ರ ವರೆಗೆ ದರ ಇತ್ತು. ಸಣ್ಣ ಬಿಡಿ ಗುಲಾಬಿ ಹೂವು ಕೆ.ಜಿಗೆ ₹ 320 ಇದ್ದು, ಜನ ಕಾಲು ಕೆ.ಜಿ.ಯಷ್ಟು ಖರೀದಿ ಮಾಡುತ್ತಿದ್ದರು.</p>.<p><strong>ಪೂಜಾ ಸಾಮಗ್ರಿ ದರ: </strong>ವಿಶೇಷವಾಗಿ ಹಟ್ಟಿಲಕ್ಕಮ್ಮನ ಪೂಜೆಗಾಗಿ ಜನರು ಬಳಸುವ ಕಾಚಿ ಕಡ್ಡಿ, ಮಾವಿನಸೊಪ್ಪು, ಆನೆಪಟ್ಟಿ ಸಣ್ಣ ಕಟ್ಟು ಒಂದಕ್ಕೆ ₹ 10ರಿಂದ ₹ 20, ಉತ್ರಾಣಿ ಕಡ್ಡಿ 4 ಕಟ್ಟಿಗೆ ₹ 20, ಬಾಳೆಕಂದು ಜೋಡಿಗೆ ₹ 20, ಕುಂಬಳಕಾಯಿ ₹ 100ರವರೆಗೆ ಮಾರಾಟ ಮಾಡಲಾಯಿತು. ರಂಗೋಲಿ ಬಿಳಿಹುಡಿ ಒಂದು ಪ್ಯಾಕೆಟ್ಗೆ ₹ 10, ಬಣ್ಣಬಣ್ಣದ ಹುಡಿ ಪ್ಯಾಕೆಟ್ಗೆ ₹ 50ರಂತೆ ದರ ಇತ್ತು. ಮಣ್ಣಿನ ಹಣತೆಗೆ ಡಜನ್ಗೆ ₹ 50 ಇದ್ದರೆ, ಬೇರೆ ಹಣತೆ ಡಜನ್ಗೆ ₹ 100ಕ್ಕೆ ಮಾರಾಟವಾಗುತ್ತಿತ್ತು.</p>.<p>ಹಳೇ ದಾವಣಗೆರೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಹಿತ ವಿವಿಧೆಡೆ ಮಾರುಕಟ್ಟೆ ಜೋರಾಗಿ ನಡೆಯಿತು. ಬಣ್ಣಬಣ್ಣದ ಗೂಡುದೀಪಗಳು ಗ್ರಾಹಕರ ಕೈಸೇರಿದವು.</p>.<p>‘ಹಿಂದೆ ಆಚರಿಸಿದಷ್ಟು ಸಂಭ್ರಮದಿಂದ ಈ ಬಾರಿ ದೀಪಾವಳಿ ಮಾಡಲು ಕೊರೊನಾ ಅಡ್ಡಿಯಾಗಿದೆ. ದುಡ್ಡು ಕೂಡ ಇಲ್ಲ. ಹಾಗಂತ ಹಬ್ಬ ಆಚರಿಸದೇ ಬಿಡಲು ಆಗುವುದಿಲ್ಲ. ಅದಕ್ಕಾಗಿ ಸ್ವಲ್ಪ ಹೂವು, ಹಣ್ಣು, ಪಟಾಕಿ ಒಯ್ಯಲು ಬಂದಿದ್ದೇವೆ’ ಎಂದು ಜಯನಗರ ಶ್ರೀನಿವಾಸ್ ತಿಳಿಸಿದರು.</p>.<p>‘ವ್ಯಾಪಾರ ಇದೆ. ಆದರೆ ತುಂಬಾ ಲಾಭ ಏನು ಇಲ್ಲ. ಹಬ್ಬ ಆಗಿರುವುದರಿಂದ ಬೇರೆ ಸಮಯಕ್ಕಿಂತ ಸ್ವಲ್ಪ ದರ ಹೆಚ್ಚಿದೆ. ಬಹಳ ಹೆಚ್ಚು ಮಾಡಿದರೆ ಜನ ಒಯ್ಯುವುದಿಲ್ಲ’ ಎಂದು ವ್ಯಾಪಾರಿ ಜಾಲಿನಗರದ ಮಾರುತಿ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಆರೋಗ್ಯ ಮತ್ತು ಆರ್ಥಿಕತೆಗೆ ಕೊರೊನಾ ನೀಡಿದ ಹೊಡೆತದ ಬಳಿಕವೂ ಜನರಲ್ಲಿ ಹಬ್ಬ ಮಾಡುವ ಉತ್ಸಾಹ ಕುಂದಿಲ್ಲ. ಹಾಗಾಗಿ ದೀಪಾವಳಿಗೆ ಖರೀದಿಯು ಶನಿವಾರವೂ ಉತ್ಸಾಹದಿಂದ ನಡೆಯಿತು.</p>.<p>ಜಯದೇವ ಸರ್ಕಲ್ನಿಂದ ಪಿ.ಬಿ.ರೋಡ್ವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆವರೆಗೆ ವ್ಯಾಪಾರ ನೂಕುನುಗ್ಗಲಿಲ್ಲದೇ ನಡೆಯಿತು. ಸೂರ್ಯ ಪಶ್ಚಿಮದ ಕಡೆ ಹೋಗುತ್ತಿದ್ದಂತೆ ಮಾರುಕಟ್ಟೆಗೆ ಧಾವಿಸುವವರ ಸಂಖ್ಯೆ ಒಂದೇ ಸಮನೆ ಹೆಚ್ಚಾಯಿತು.</p>.<p>ಹೈಸ್ಕೂಲ್ ಮೈದಾನದಲ್ಲಿದ್ದ ಪಟಾಕಿ ಮಳಿಗೆಗಳಿಗೆ ಹಿಂದಿನಂತೆ ಜನ ಮುಗಿಬಿದ್ದಿಲ್ಲ. ಆದರೆ ಇತಿಮಿತಿಯಲ್ಲಿ ಪಟಾಕಿ ಇರಲಿ ಎಂದು ಜನರು ಬಂದು ಖರೀದಿಸುತ್ತಿದ್ದರು.</p>.<p><strong>ಏರಿದ ಬೆಲೆ: </strong>ಎಲ್ಲ ಹಣ್ಣುಗಳಿಗೆ ಹಬ್ಬದ ಪ್ರಯುಕ್ತ ₹ 20ರಿಂದ ₹ 50ರಷ್ಟು ಏರಿಕೆಯಾಗಿತ್ತು. ಬಾಳೆಹಣ್ಣು ಡಜನ್ಗೆ ₹ 55ರಿಂದ 65, ದಾಳಿಂಬೆ ₹ 210, ಸೇಬು ₹ 150, ಸಪೋಟ ₹ 80, ದ್ರಾಕ್ಷಿ ₹ 200–220ರಂತೆ ಖರೀದಿ ನಡೆಯಿತು.</p>.<p>ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ ಕನಕಾಂಬರ ಹೂವುಗಳಿಗೆ ಮಾರಿಗೆ ₹ 80ರಿಂದ ₹ 100ರ ವರೆಗೆ ದರ ಇತ್ತು. ಸಣ್ಣ ಬಿಡಿ ಗುಲಾಬಿ ಹೂವು ಕೆ.ಜಿಗೆ ₹ 320 ಇದ್ದು, ಜನ ಕಾಲು ಕೆ.ಜಿ.ಯಷ್ಟು ಖರೀದಿ ಮಾಡುತ್ತಿದ್ದರು.</p>.<p><strong>ಪೂಜಾ ಸಾಮಗ್ರಿ ದರ: </strong>ವಿಶೇಷವಾಗಿ ಹಟ್ಟಿಲಕ್ಕಮ್ಮನ ಪೂಜೆಗಾಗಿ ಜನರು ಬಳಸುವ ಕಾಚಿ ಕಡ್ಡಿ, ಮಾವಿನಸೊಪ್ಪು, ಆನೆಪಟ್ಟಿ ಸಣ್ಣ ಕಟ್ಟು ಒಂದಕ್ಕೆ ₹ 10ರಿಂದ ₹ 20, ಉತ್ರಾಣಿ ಕಡ್ಡಿ 4 ಕಟ್ಟಿಗೆ ₹ 20, ಬಾಳೆಕಂದು ಜೋಡಿಗೆ ₹ 20, ಕುಂಬಳಕಾಯಿ ₹ 100ರವರೆಗೆ ಮಾರಾಟ ಮಾಡಲಾಯಿತು. ರಂಗೋಲಿ ಬಿಳಿಹುಡಿ ಒಂದು ಪ್ಯಾಕೆಟ್ಗೆ ₹ 10, ಬಣ್ಣಬಣ್ಣದ ಹುಡಿ ಪ್ಯಾಕೆಟ್ಗೆ ₹ 50ರಂತೆ ದರ ಇತ್ತು. ಮಣ್ಣಿನ ಹಣತೆಗೆ ಡಜನ್ಗೆ ₹ 50 ಇದ್ದರೆ, ಬೇರೆ ಹಣತೆ ಡಜನ್ಗೆ ₹ 100ಕ್ಕೆ ಮಾರಾಟವಾಗುತ್ತಿತ್ತು.</p>.<p>ಹಳೇ ದಾವಣಗೆರೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಹಿತ ವಿವಿಧೆಡೆ ಮಾರುಕಟ್ಟೆ ಜೋರಾಗಿ ನಡೆಯಿತು. ಬಣ್ಣಬಣ್ಣದ ಗೂಡುದೀಪಗಳು ಗ್ರಾಹಕರ ಕೈಸೇರಿದವು.</p>.<p>‘ಹಿಂದೆ ಆಚರಿಸಿದಷ್ಟು ಸಂಭ್ರಮದಿಂದ ಈ ಬಾರಿ ದೀಪಾವಳಿ ಮಾಡಲು ಕೊರೊನಾ ಅಡ್ಡಿಯಾಗಿದೆ. ದುಡ್ಡು ಕೂಡ ಇಲ್ಲ. ಹಾಗಂತ ಹಬ್ಬ ಆಚರಿಸದೇ ಬಿಡಲು ಆಗುವುದಿಲ್ಲ. ಅದಕ್ಕಾಗಿ ಸ್ವಲ್ಪ ಹೂವು, ಹಣ್ಣು, ಪಟಾಕಿ ಒಯ್ಯಲು ಬಂದಿದ್ದೇವೆ’ ಎಂದು ಜಯನಗರ ಶ್ರೀನಿವಾಸ್ ತಿಳಿಸಿದರು.</p>.<p>‘ವ್ಯಾಪಾರ ಇದೆ. ಆದರೆ ತುಂಬಾ ಲಾಭ ಏನು ಇಲ್ಲ. ಹಬ್ಬ ಆಗಿರುವುದರಿಂದ ಬೇರೆ ಸಮಯಕ್ಕಿಂತ ಸ್ವಲ್ಪ ದರ ಹೆಚ್ಚಿದೆ. ಬಹಳ ಹೆಚ್ಚು ಮಾಡಿದರೆ ಜನ ಒಯ್ಯುವುದಿಲ್ಲ’ ಎಂದು ವ್ಯಾಪಾರಿ ಜಾಲಿನಗರದ ಮಾರುತಿ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>