ತಾಲ್ಲೂಕಿನ ಮತ್ತಿ ಗ್ರಾಮದ ರಾಮಚಂದ್ರಪ್ಪ ಅವರನ್ನು ದಾವಣಗೆರೆ ಆರೈಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದರು. ಆದರೆ ಆಸ್ಪತ್ರೆಯ ಬಿಲ್ ಅನ್ನು ರಾಮಚಂದ್ರಪ್ಪ ಕಡೆಯವರು ತುಂಬಿರಲಿಲ್ಲ. ಬಿಲ್ ಪಾವತಿ ಮಾಡದೇ ಮೃತದೇಹ ನೀಡುವುದಿಲ್ಲ ಎಂದು ಆಸ್ಪತ್ರೆಯವರು ತಿಳಿಸಿದ್ದರು.